Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಶ್ ಸಿಎಂ ಆಗಬೇಕೆಂದು ಕನಸುಕಂಡ ತೆಲುಗುನಟ
ನನ್ನ ಆರಾಧ್ಯದೈವ ತಿರುಪತಿ ವೆಂಕಟರಮಣ. ಆ ದೇವರಲ್ಲಿ ಪ್ರತಿದಿನ ಬೇಡಿಕೊಳ್ಳುವುದೇನಂದರೆ ಅಂಬರೀಶ್ ಕರ್ನಾಟಕದ ಮುಖ್ಯಮಂತ್ರಿಯಾಗಬೇಕೆಂದು. ಇದು ನನ್ನ ಕನಸು, ಒಮ್ಮೆ ಮಂಡ್ಯಕ್ಕೆ ಹೋಗಿದ್ದಾಗ ಅಲ್ಲಿ ಜನರಿಗೆ ಅವರ ಮೇಲಿರುವ ಅಭಿಮಾನ ನೋಡಿ ಅಚ್ಚರಿಯಾಯಿತು ಎಂದು ಮೋಹನ್ ಬಾಬು ಹೇಳಿದ್ದಾರೆ.
ಅಂಬರೀಶ್ ಒಬ್ಬ ಜನನಾಯಕ, ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಮುಚ್ಚು ಮೆರೆಯಿಲ್ಲದೆ ನೇರವಾಗಿ ಮಾತನಾಡುವುದು ಅವರಲ್ಲಿರುವ ಒಳ್ಳೆ ಗುಣ. ಇಂಥಹ ಸಜ್ಜನ ವ್ಯಕ್ತಿ ರಾಜ್ಯದ ಸಿಎಂ ಆದರೆ ಅಭಿವೃದ್ದಿ ಖಂಡಿತ ಎಂದು ಮೋಹನ್ ಬಾಬು ಅಂಬರೀಶ್ ಅವರನ್ನು ಹಾಡಿ ಹೊಗಳಿದ್ದಾರೆ.
ನಾನು ಇತ್ತೀಚಿಗೆ ಸಿನಿಮಾದಲ್ಲಿ ಹೆಚ್ಚಾಗಿ ನಟಿಸುತ್ತಿಲ್ಲ. ಮಕ್ಕಳು ನಾಯಕರಾಗಿ ಮಿಂಚುತ್ತಿರುವಾಗ ಈ ವಯಸ್ಸಿನಲ್ಲಿ ನಾಯಕಿಯರ ಜೊತೆ ಮರ ಸುತ್ತುವುದು, ಡ್ಯೂಯೆಟ್ ಹಾಡುವುದು ಸರಿ ಕಾಣಿಸುವುದಿಲ್ಲ.
ಒಬ್ಬ
ಸಾಮಾನ್ಯ
ಮನುಷ್ಯನಾಗಿ
ನಾನು
ಡಾ.ರಾಜ್
ಅಭಿಮಾನಿ.
ಸಾಂಸ್ಕೃತಿಕ
ರಂಗದಲ್ಲಿ
ಅಣ್ಣಾವ್ರು
ದೊಡ್ಡ
ರಾಯಭಾರಿ
.
ಅಂಬರೀಶ್
ಮತ್ತು
ವಿಷ್ಣುವರ್ಧನ್
ನನ್ನ
ಸ್ನೇಹಿತರು.
37
ವರ್ಷಗಳಿಂದ
ನಾನು
ಮತ್ತು
ಅಂಬರೀಶ್
ಸ್ನೇಹಿತರು.
ನನ್ನ ಮಗ ವಿಷ್ಣುಮಂಚು ಅಭಿನಯದ ದೇನಿಕೈನಾ ರೆಡಿ ಚಿತ್ರ ಇದೇ ತಿಂಗಳು 24 ರಂದು ಬಿಡುಗಡೆಯಾಗುತ್ತಿದೆ. ಕನ್ನಡ ಪ್ರೇಕ್ಷಕರು ಒಳ್ಳೆ ಸಿನಿಮಾಗಳನ್ನು ಬೆಂಬಲಿಸಿದ್ದಾರೆ. ನನ್ನ ಮಗನ ಚಿತ್ರ ನೋಡಿ ಬೆಂಬಲಿಸುವಂತೆ ಹೇಳಲು ಮೋಹನ್ ಬಾಬು ಮರೆಯಲಿಲ್ಲ.