Don't Miss!
- News ತುಷ್ಟೀಕರಣ ರಾಜಕೀಯಕ್ಕೆ ಮುಸ್ಲೀಮರಿಗೆ ಮೀಸಲಾತಿಗೆ ಕಾಂಗ್ರೆಸ್ ಬೆಂಬಲ: ಬಸವರಾಜ ಬೊಮ್ಮಾಯಿ ಕಿಡಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮೈಲಾರಿ' ಚಿತ್ರಕ್ಕೆ 10 ವರ್ಷ: ಕೇಕ್ ಕತ್ತರಿಸಿ ಸಂಭ್ರಮಿಸಿದ ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸದಾ ಹಾಗೂ ಸಂಜನಾ ನಟಿಸಿದ್ದ ಮೈಲಾರಿ ಸಿನಿಮಾ ತೆರೆಕಂಡು 10 ವರ್ಷ ಆಗಿದೆ. ಮೈಲಾರಿ ಸಿನಿಮಾ ದಶಕ ಪೂರೈಸಿದ ಹಿನ್ನೆಲೆ ನಟ ಶಿವಣ್ಣ, ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
2010ರ ಡಿಸೆಂಬರ್ 24 ರಂದು ಬಿಡುಗಡೆಯಾಗಿದ್ದ 'ಮೈಲಾರಿ' ಸಿನಿಮಾ ಆರ್ ಚಂದ್ರುಗೆ ದೊಡ್ಡ ಹೆಸರು ತಂದು ಕೊಡ್ತು. ಶಿವಣ್ಣನಿಗೂ ಸಕ್ಸಸ್ ಕೊಟ್ಟ ಸಿನಿಮಾ ಇದು. ಇಂತಹ ಖುಷಿ ನೀಡಿದ ಚಿತ್ರದ ದಶಕದ ಸಂಭ್ರಮವನ್ನು ಸೆಂಚುರಿ ಸ್ಟಾರ್ ತಮ್ಮ ಅಭಿಮಾನಿಗಳ ಜೊತೆ ಸೇರಿ ಸೆಲೆಬ್ರೆಟ್ ಮಾಡಿದ್ದಾರೆ. ಈ ವೇಳೆ ಪತ್ನಿ ಗೀತಾ, ನಿರ್ಮಾಪಕ ಕೆಪಿ ಶ್ರೀಕಾಂತ್, ಶಿವಣ್ಣನ ಕಿರಿಯ ಪುತ್ರಿ ಸಹ ಭಾಗವಹಿಸಿದ್ದರು. ಮುಂದೆ ಓದಿ...
'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?
ಶಿವಣ್ಣನ ಮನೆಯಲ್ಲಿ ಮೈಲಾರಿ ಸಂಭ್ರಮ
ಬೆಂಗಳೂರಿನ ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸದಲ್ಲಿ 'ಮೈಲಾರಿ' ಸಿನಿಮಾದ ನಿರ್ಮಾಪಕ ಹಾಗೂ ಶಿವಣ್ಣನ ಆಪ್ತ ಕೆಪಿ ಶ್ರೀಕಾಂತ್ ಹಾಗೂ ಅಭಿಮಾನಿಗಳು ಸೇರಿ ಮೈಲಾರಿ ಹೆಸರಿನಲ್ಲಿ ಕೇಕ್ ಸಿದ್ಧಪಡಿಸಿದ್ದರು. ಈ ಕೇಕ್ ಕತ್ತರಿಸಿದ ಶಿವಣ್ಣ ಅಭಿಮಾನಿಗಳ ಜೊತೆ ಸಂಭ್ರಮಿಸಿದರು. ಈ ವೇಳೆ ಗ್ರೂಪ್ ಫೋಟೋ ಸಹ ಕ್ಲಿಕ್ಕಿಸಿಕೊಂಡರು.
ಪ್ರೇಮ್ ಕಹಾನಿ ಸೋಲಿನ ಬಳಿಕ ಮೈಲಾರಿ
'ತಾಜ್ ಮಹಲ್' ಯಶಸ್ಸಿನ ಬಳಿಕ ಆರ್ ಚಂದ್ರು ಪ್ರೇಮ್ ಕಹಾನಿ ಎಂಬ ಸಿನಿಮಾ ಮಾಡಿದರು. ಈ ಸಿನಿಮಾ ಸೋಳು ಕಂಡಿತು. ಈ ಚಿತ್ರದ ಬಳಿಕ ಚಂದ್ರುಗೆ ಸಿನಿಮಾ ಇಂಡಸ್ಟ್ರಿನೇ ಬೇಡವಾಯಿತು. ಬೆಂಗಳೂರು ಬಿಟ್ಟು ಸ್ವಂತ ಊರಿಗೆ ಹೋಗಿಬಿಡೋಣ ಎಂದು ನಿರ್ಧರಿಸಿಬಿಟ್ಟಿದ್ದರು. ಆದ್ರೆ, ಕೊನೆ ಘಳಿಗೆಯಲ್ಲಿ ಹೊಸ ಕಥೆ ಕೈಗೆತ್ತಿಕೊಂಡು ಶಿವಣ್ಣ ಬಳಿ ಹೋದರು.
'ಈ ಸಿನಿಮಾ ಇಂಡಸ್ಟ್ರಿ ಬೇಡ ವಾಪಸ್ ಹೋಗ್ಬಿಡು ಅಂದಿದ್ರು ಆ ವ್ಯಕ್ತಿ'- ಆರ್ ಚಂದ್ರು
ಕಥೆ ಕೇಳಿ ನಿರ್ಮಾಪಕ ಭಾವುಕ
ಮೈಲಾರಿ ಸ್ಕ್ರಿಪ್ಟ್ ಕೇಳಿದ ಶಿವರಾಜ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟರು. ನಂತರ ಕೆಪಿ ಶ್ರೀಕಾಂತ್ ಮೂಲಕ ಕನಕಪುರ ಶ್ರೀನಿವಾಸ್ ಅವರನ್ನು ಭೇಟಿ ಮಾಡಲು ಸೂಚಿಸಿದರು. ಕನಕಪುರಕ್ಕೆ ಹೋಗಿ ಶ್ರೀನಿವಾಸ್ ಅವರಿಗೆ ಮೈಲಾರಿ ಕಥೆ ಹೇಳಿದರು ಚಂದ್ರು. ಕಥೆ ಕೇಳಿದ ನಿರ್ಮಾಪಕ ಶ್ರೀನಿವಾಸ್ ಒಂದು ಕ್ಷಣ ಕಣ್ಣೀರು ಹಾಕಿದರು ಎಂದು ಈ ಹಿಂದೆ ಫಿಲ್ಮಿಬೀಟ್ಗೆ ನೀಡಿದ ಸಂದರ್ಶನದಲ್ಲಿ ಆರ್ ಚಂದ್ರು ಹೇಳಿಕೊಂಡಿದ್ದರು.
Recommended Video
ಚಂದ್ರು ವೃತ್ತಿ ಜೀವನ ಬದಲಾಯಿತು
ಅಂದು ಮೈಲಾರಿ ಸಿನಿಮಾ ದೊಡ್ಡ ಹಿಟ್ ಆಯಿತು. ಚಿತ್ರದ ಸಕ್ಸಸ್ ಕಾರ್ಯಕ್ರಮವನ್ನು ಹುಬ್ಬಳಿಯಲ್ಲಿ ಮಾಡಲಾಗಿತ್ತು. ಮೈಲಾರಿ ನಂತರ ಚಂದ್ರು ಹಿಂತಿರುಗಿ ನೋಡಲಿಲ್ಲ. ಕೋ ಕೋ, ಚಾರ್ ಮಿನರ್, ಬ್ರಹ್ಮ, ಮಳೆ, ಕನಕ, ಐ ಲವ್ ಯೂ, ಲಕ್ಷ್ಮಿ ಹೀಗೆ ಸ್ಟಾರ್ ನಟರ ಜೊತೆಯಲ್ಲಿ ಸಿನಿಮಾ ಮಾಡಿದರು. ಮೈಲಾರಿ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿತ್ತು.