Don't Miss!
- Automobiles ಅದ್ಭುತ ಫೀಚರ್ಸ್ ಪಡೆದುಕೊಂಡ ಟಾಟಾ ಟಿಯಾಗೋ ಇವಿ: ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ
- Sports IPL 2024: ಗಾಯದ ಕಾರಣದಿಂದ ಆಟಗಾರ ಲೀಗ್ನಿಂದ ಹೊರ ನಡೆದರೆ ಸಿಗುವ ಹಣವೆಷ್ಟು?
- News ಬೈಯಪ್ಪನಹಳ್ಳಿ 'ಮೆಟ್ರೋ' ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆ: ಪ್ರಯಾಣಿಕರಿಗೆ ತೊಂದರೆ
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೃಹ ಸಚಿವರಿಗೆ 1 ಲಕ್ಷ ರೂ ಚೆಕ್ ಹಸ್ತಾಂತರಿಸಿದ ಜಗ್ಗೇಶ್ ದಂಪತಿ
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರಕ್ಕೆ ಇಡೀ ದೇಶ ಆಕ್ರೋಶ ವ್ಯಕ್ತಪಡಿಸಿತ್ತು. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಶಿಕ್ಷೆ ಕೊಡಿ ಎಂದು ಒತ್ತಾಯ ಹೆಚ್ಚಿತ್ತು. ನಿರೀಕ್ಷೆಯಂತೆ ಅತ್ಯಾಚಾರಿಗಳನ್ನು ಪೊಲೀಸರು ಬಂಧಿಸಿದರು. ಶನಿವಾರ ಬೆಳಗ್ಗೆ ಈ ಬಗ್ಗೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಬಗ್ಗೆ ಸ್ಪಷ್ಟಪಡಿಸಿದರು.
ಓರ್ವ ಅಪ್ರಾಪ್ತ ಸೇರಿ ಐದು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಮಿಳುನಾಡಿನಲ್ಲಿ ತಲೆಮರಿಸಿಕೊಂಡಿದ್ದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವ ಆರೋಪಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದರು.
ಮೈಸೂರು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ. ಇದರ ಬೆನ್ನಲ್ಲೆ ನಟ ಜಗ್ಗೇಶ್ ಅವರು ಸಹ ಪೊಲೀಸರನ್ನು ಅಭಿನಂದಿಸಿ 1 ಲಕ್ಷ ಬಹುಮಾನ ಘೋಷಿಸಿದರು. ಈ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದರು.
ಅತ್ಯಾಚಾರ ಆರೋಪಿಗಳ ಹಿಡಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಜಗ್ಗೇಶ್
''ಕಾಲೇಜು ವಿಧ್ಯಾರ್ಥಿ ಅತ್ಯಾಚಾರ ಮಾಡಿದ ಕಾಮಪಿಪಾಸುಗಳ ಬಂಧಿಸಿದ ನನ್ನ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. Am proud of my state police.. ನನ್ನ ಕಡೆಯಿಂದ ಪ್ರಕರಣ ಬೇಧಿಸಿದ ನಲ್ಮೆಯ ನನ್ನ ಪೋಲಿಸರಿಗೆ 1ಲಕ್ಷ ಬಹುಮಾನ! ನಿಮ್ಮ ಸಾರ್ಥಕ ಸೇವೆ ಹೀಗೆ ಮುಂದುವರಿಯಲಿ!ರಾಷ್ಟ್ರಕ್ಕೆ ಮಾದರಿ ನಮ್ಮ ಪೋಲಿಸ್'' ಎಂದು ಹೇಳಿದ್ದರು.
ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕರ್ನಾಟಕ ಗೃಹ ಸಚಿ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ನುಡಿದಂತೆ 1 ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ. ''ಮೈಸೂರಿನ ಅತ್ಯಾಚಾರ ಆರೋಪಿಗಳ ಬಂದಿಸಿದ ಪೋಲಿಸರಿಗೆ ಕಾರ್ಯದಕ್ಷತೆಗೆ ನನ್ನ ವೈಯಕ್ತಿಕ 1ಲಕ್ಷ ರೂ ಗಳ ಹಣದ ಚಕ್ ಗೃಹ ಮಂತ್ರಿಗಳು ಶ್ರೀ ಅರಗಜ್ನಾನೇಂದ್ರ ರಿಗೆ ಒಪ್ಪಿಸಿದೆ.. ಮೈಸೂರು ಪೋಲಿಸರಿಗೆ ಇರಲಿ ನಿಮ್ಮ ಬೆಂಬಲ ಪ್ರೋತ್ಸಾಹ.. ನಮ್ಮ ಮನೆಯ ಹೆಣ್ಣಂತೆ ಅಲ್ಲವೆ ಅನ್ಯಮಕ್ಕಳು ಕೂಡ...ಹರಿಃಓಂ'' ಎಂದು ಮತ್ತೊಂದು ಟ್ವೀಟ್ನಲ್ಲಿ ಮಾಹಿತಿ ನೀಡಿದರು.
ಇದಕ್ಕೂ
ಮುಂಚೆ
ಮೈಸೂರು
ಅತ್ಯಾಚಾರ
ಘಟನೆಯನ್ನು
ತೀವ್ರವಾಗಿ
ಖಂಡಿಸಿದ
ಜಗ್ಗೇಶ್,
''ಎಂಥ
ಕ್ರೂರಿಗಳು...
ತಾಯಿ
ಹೆಣ್ಣಲ್ಲವೆ?
ಅಕ್ಕತಂಗಿ
ಹೆಣ್ಣಲ್ಲವೆ?
ಮಡದಿ
ಹೆಣ್ಣಲ್ಲವೆ?
ಹೆಣ್ಣು
ಗೌರವಿಸದವರು
ರಕ್ಕಸರು!
ಈ
ಕೃತ್ಯ
ಎಸಗಿದ
ಕ್ರೂರಿಗಳು
ಗಲ್ಲು
ಶಿಕ್ಷೆಗೆ
ಅರ್ಹರು!
ಈ
ಕ್ರೂರ
ಕೃತ್ಯಕ್ಕೆ
ಖಂಡನೆ....''
ಎಂದು
ಆಕ್ರೋಶ
ವ್ಯಕ್ತಪಡಿಸಿದ್ದರು.
ಗ್ಯಾಂಗ್ರೇಪ್
ಖಂಡಿಸಿದ
ಹಿರಿಯ
ನಟಿ
ಶ್ರುತಿ
ಅದಕ್ಕೂ
ಮುಂಚೆ
ಹಿರಿಯ
ನಟಿ
ಶ್ರುತಿ
ಈ
ಅತ್ಯಾಚಾರವನ್ನು
ತೀವ್ರವಾಗಿ
ಖಂಡಿಸಿದರು.
''''ಹೆಣ್ಣು
ಮಕ್ಕಳ
ಮೇಲೆ
ನಿರಂತರವಾಗಿ
ನಡಿಯುತ್ತಿರುವ
ದೈಹಿಕ
ಹಾಗೂ
ಮಾನಸಿಕ
ಅತ್ಯಾಚಾರಕ್ಕೆ
ಕೊನೆ
ಯಾವಾಗ.
ಇಂತ
ಪುರುಷರ
ಮನಸ್ಥಿತಿ
ಬದಲಾಗುವುದೆಂದು?
ಇಂತಹ
ಅನಿಷ್ಟ
ಕಾಮುಕರನ್ನು
ಬಂಧಿಸುವ,
ಅವರನ್ನು
ಶಿಕ್ಷಿಸುವ
ಕಾನೂನು
ಮತ್ತಷ್ಟು
ಗಟ್ಟಿ
ಆಗಬೇಕು
ಎನ್ನುವುದು
ಎಷ್ಟು
ಸತ್ಯವೋ,
ಇಂಥಹ
ಪುರುಷರು
ಬೆಳೆಯುವ
ಮನೆಯ
ವಾತಾವರಣ,
ಸಂಸ್ಕಾರ,
ಪೋಷಕರ
ಜವಾಬ್ದಾರಿ
ಅಲ್ಲಿಯೂ
ಕೂಡ
ಮತ್ತಷ್ಟು
ಗಟ್ಟಿಯಾಗಬೇಕು
ಎನ್ನುವುದು
ನನ್ನ
ಅಭಿಪ್ರಾಯ
ಹೌದಲ್ಲವೇ?
ಹುಟ್ಟಿನಿಂದ
ಸಾವಿನವರೆಗೆ
ಹೆಣ್ಣು
ಮಕ್ಕಳು
ಅನುಭವಿಸುವ
ಕಷ್ಟ
ನೂರಾರು
ಆದರೂ
ಹಲವಾರು
ಮಹಿಳೆಯರು
ಅದನ್ನು
ಹಿಮ್ಮೆಟ್ಟಿ
ಇಡೀ
ಭಾರತವೇ
ಮೆಚ್ಚುವಂತ
ಸಾಧನೆಯನ್ನು
ಮಾಡುತ್ತಿದ್ದಾರೆ.
ಇಂಥ
ಸಂದರ್ಭದಲ್ಲಿ
ಸಾಮೂಹಿಕ
ಅತ್ಯಾಚಾರದ
ಘಟನೆಗಳು
ಮಹಿಳೆಯ
ಮಾನಸಿಕ
ಸ್ಥೈರ್ಯವನ್ನು
ಕುಗ್ಗಿಸುತ್ತದೆ.
ಹಾಗಾಗದಿರಲಿ.''
ಎಂದು
ಎಚ್ಚರಿಸಿದರು.
ತೀವ್ರ
ಖಂಡನೆ
ವ್ಯಕ್ತಪಡಿಸಿದ
ನಟಿ
ರಮ್ಯಾ
"ನಾವು
ಇದನ್ನ
ಆಗಾಗ
ಕೇಳುತ್ತಿರುತ್ತೇವೆ,
ಇದು
ನಿಮ್ಮ
ತಪ್ಪು,
ನೀವು
ಹಾಗೆ
ಹೇಳಬಾರದಿತ್ತು,
ನೀವು
ಅದನ್ನು
ಮಾಡಬಾರದಿತ್ತು,
ನೀವು
ಅದನ್ನು
ಧರಿಸಬಾರದು,
ತುಂಬಾ
ಬಿಗಿಯಾಗಿ,
ತುಂಬಾ
ಚಿಕ್ಕದಾಗಿದೆ,
ತುಂಬಾ
ಆಕರ್ಷಕವಾಗಿದೆ,
ತುಂಬಾ
ಉದ್ದವಾಗಿದೆ,
ನೀವು
ತಡರಾತ್ರಿ
ಹೊರಗೆ
ಹೋಗಬಾರದಿತ್ತು,
ನಾವು
ಮೇಕಪ್
ಹಾಕಬಾರದು,
ಕೆಂಪು
ಲಿಪ್ಸ್ಟಿಕ್
ಏಕೆ
ಹಾಕುತ್ತೀರಿ,
ನಾವು
ಕಣ್ಣು
ಮಿಟುಕಿಸಬಾರದಿತ್ತು,
ನಿಮಗೆ
ಅದಿರಬಾರದು,
ಇದಿರಬಾದು..ಯಾಕೆ?
ಯಾಕೆಂದರೆ
ಪುರುಷರು
ಪುರುಷರಾಗಿ
ಇರುತ್ತಾರೆ.
ನಾವು
ಎಲ್ಲದಕ್ಕೂ
ರಾಜಿ
ಮಾಡಿಕೊಳ್ಳಬೇಕು.
ನಾವು
ಬದಲಾಗಬೇಕು,
ನಾವು
ಹೊಂದಿಕೊಳ್ಳಬೇಕು,
ನಾವು
ಸಹಿಸಿಕೊಳ್ಳಬೇಕು..
ಈ
ರೀತಿಯ
ನಾನ್ಸೆಸ್
ಗಳಿಗೆ
ಮೊದಲು
ಕೊನೆಯಾಗಬೇಕು.
ಮಹಿಳೆಯರ
ವಿರುದ್ಧದ
ಅಪರಾಧಗಳತ್ತಾ
ಕಣ್ಣು
ಮುಚ್ಚಿಕೂರಬೇಡಿ.
ದಯವಿಟ್ಟು
ಅದರ
ಬಗ್ಗೆ
ಮಾತನಾಡಿ"
ಎಂದು
ಆಗ್ರಹಿಸಿದರು.