Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಾಗರಹಾವು' ಚಿತ್ರದ ಹೊಸ ಅವತಾರವನ್ನು ಕೊಂಡಾಡಿದ ಗಣ್ಯರು
Recommended Video
ಡಾ.ವಿಷ್ಣುವರ್ಧನ್ ಅವರ 'ನಾಗರಹಾವು' ಸಿನಿಮಾ ಈಗ ಹೊಸ ರೂಪದೊಂದಿಗೆ ಮತ್ತೆ ತೆರೆ ಮೇಲೆ ಬರುತ್ತಿದೆ. ಈ ಸಿನಿಮಾ ಇದೇ ತಿಂಗಳ 20ಕ್ಕೆ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಈ ಕಾರಣ ಇಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ವಿಶೇಷ ಸುದ್ದಿಗೋಷ್ಟಿ ಕಾರ್ಯಕ್ರಮ ನಡೆಯಿತು.
ಮತ್ತೆ ಬಂದ ರಾಮಾಚಾರಿ : 'ನಾಗರಹಾವು' ಬಿಡುಗಡೆಯ ದಿನ ಅನೌನ್ಸ್
ಈ ವೇಳೆ ಸಿನಿಮಾದ ಟೀಸರ್ ಮತ್ತು ಹಾಡುಗಳನ್ನು ತೋರಿಸಲಾಯ್ತು. ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಮುಖ್ಯ ಆಕರ್ಷಣೆ ಆಗಿದ್ದರು. ಹಿರಿಯ ನಟಿ ಜಯಂತಿ, ಲೀಲಾವತಿ, ಭಾರತಿ ವಿಷ್ಣುವರ್ಧನ್, ನಟ ಅಂಬರೀಶ್, ರವಿಚಂದ್ರನ್, ಹಿರಿಯ ನಟ ಶಿವರಾಂ, ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಎಲ್ಲ ದಿಗ್ಗಜರು 'ನಾಗರಹಾವು' ಸಿನಿಮಾದ ತಮ್ಮ ನೆನಪುಗಳನ್ನು ಹಂಚಿಕೊಂಡರು. ಜೊತೆಗೆ ಈಗ ಆ ಸಿನಿಮಾ ರೂಪುಗೊಂಡಿರುವ ರೀತಿ ನೋಡಿ ಮೆಚ್ಚಿದರು. ಸಿನಿಮಾದ ಕ್ವಾಲಿಟಿ ಮತ್ತು 7.1 ಡಿಜಿಟಲ್ ಸೌಂಡ್ ಗೆ ಫಿದಾ ಎಲ್ಲರೂ ಆದರು.
ಅಂದಹಾಗೆ, ರವಿಚಂದ್ರನ್ ಅವರ ಸಹೋದರ ಬಾಲಾಜಿ ತಮ್ಮ ತಂದೆ ನಿರ್ಮಿಸಿದ್ದ ಸಿನಿಮಾಗೆ ಮರು ಜೀವ ನೀಡಿದ್ದಾರೆ. ಒಂದು ವರ್ಷ ಈ ಸಿನಿಮಾದ ಕೆಲಸಗಳನ್ನು ಮಾಡಿ ಈಗ ತೆರೆಗೆ ತರುತ್ತಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಈ ಮಾಸ್ಟರ್ ಪೀಸ್ ಸಿನಿಮಾಗೆ ಹೊಸ ಮೆರಗು ನೀಡಿದ್ದಾರೆ.