Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರು ಸುತ್ತಮುತ್ತಲೆಲ್ಲಾ ಹರಿದಾಡುತ್ತಿದೆ ‘ನಾಗರಹಾವು’
ಪುಟ್ಟಣ್ಣ ಕಣಗಾಲರ ಚಿರಸ್ಮರಣೀಯ ಚಿತ್ರದ 'ನಾಗರಹಾವು" ಹೆಸರಿನಲ್ಲೇ ಧೀರ ರಾಕ್ಲೈನ್ ಮತ್ತೊಂದು ಚಿತ್ರ ನಿರ್ಮಿಸುತ್ತಿದ್ದಾರೆ. ರಾಕ್ಲೈನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಮುಯ್ಯಿಗೆ ಮುಯ್ಯಿ ಕಥೆಯ ನಾಗರಹಾವನ್ನು ಎಂ. ನೀಲಕಂಠ ನಾಯ್ಡು ಅರ್ಪಿಸುತ್ತಿದ್ದಾರೆ.
ಈ ಚಿತ್ರದ ನಾಯಕ ಉಪೇಂದ್ರ. ನಾಯಕಿ ಜ್ಯೋತಿಕಾ. ಈಗಾಗಲೇ 'ನಾಗರಹಾವು" ಎರಡು ಸುತ್ತಿನ ಚಿತ್ರೀಕರಣದಲ್ಲಿ ಹರಿದಾಡಿದ್ದು, ಮೂರನೇ ಹಂತದ ಚಿತ್ರೀಕರಣದಲ್ಲಿ ವೇಗವಾಗಿ ಸಂಚರಿಸುತ್ತಿದೆ. ಈ ಹೊತ್ತು ಬೆಂಗಳೂರು ನಗರದ ಸುತ್ತ ಮುತ್ತ ಎಲ್ಲೆಲ್ಲೂ ನಾಗರಹಾವಿನ ತಂಡವೇ ಕಾಣಿಸುತ್ತಿದೆ.
ಇತ್ತೀಚೆಗೆ ನಟಿ ಜ್ಯೋತಿಕಾ - ಉಪೇಂದ್ರ ಅಭಿನಯದ ದೃಶ್ಯವೊಂದನ್ನು ಜಯನಗರದ ಶಾಂಪಿಗ್ ಕಾಂಪ್ಲೆಕ್ಸ್ನಲ್ಲಿ ಚಿತ್ರೀಕರಿಸಿಕೊಳ್ಳಲಾಯ್ತು. ಶ್ರೀನಾಥ್, ಅಂಬಿಕಾ, ರಾಜೀವ್ ಅಭಿನಯದ ಹಲವಾರು ಹೃದಯಂಗಮ ಸನ್ನಿವೇಶಗಳಚಿತ್ರೀಕರಣ ಮೈಸೂರು ರಸ್ತೆಯಲ್ಲಿರುವ ಮನೆಯಲ್ಲಿ ನಡೆಯಿತು. ಈ ಎಲ್ಲ ದೃಶ್ಯಗಳನ್ನೂ ಯುವ ನಿರ್ದೇಶಕ ಮುರಳಿ ಅವರ ನಿರ್ದೇಶನದಂತೆ ಗಿರಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರು.
ಮೂರನೇ ಹಂತದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು, ನಾಲ್ಕನೆ ಹಾಗೂ ಕೊನೆ ಹಂತದ ಚಿತ್ರೀಕರಣ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಚಿತ್ರದ ಎರಡು ಗೀತೆಗಳಿಗೆ ಕಣಗಾಲರ 'ನಾಗರಹಾವು" ಚಿತ್ರೀಕರಣಗೊಂಡ ಐತಿಹಾಸಿಕ ಸ್ಥಳ ಚಿತ್ರದುರ್ಗ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಸಲು ರಾಕ್ಲೈನ್ ಸಿದ್ಧತೆ ನಡೆಸಿದ್ದಾರೆ.
ಲೇಟೆಸ್ಟ್ 'ನಾಗರಹಾವು" ಚಿತ್ರದಲ್ಲಿ ಉಪೇಂದ್ರ, ಜ್ಯೋತಿಕಾ (ದ್ವಿಪಾತ್ರ) ಮನ್ದೀಪ್ ರಾಯ್, ಸಾಧು ಕೋಕಿಲಾ, ದೊಡ್ಡಣ್ಣ, ಎಂ.ಎಸ್. ಸುರೇಶ್, ಶಂಕರ್ರಾವ್, ರಾಕ್ಲೈನ್ ವೆಂಕಟೇಶ್ ಇದ್ದಾರೆ. ಹಂಸಲೇಖರ ಸಾಹಿತ್ಯ - ಸಂಗೀತ, ಶ್ಯಾಂ ಸಂಕಲನ, ಸಂಪತ್ರಾಜ್ ನೃತ್ಯ ಇದೆ. ಮುರಳಿ ಮೋಹನ್ ಚಿತ್ರಕತೆ- ಸಂಭಾಷಣೆ ಬರೆದು 'ನಾಗರಹಾವ"ನ್ನು ನಿರ್ದೇಶಿಸುತ್ತಿದ್ದಾರೆ.