Don't Miss!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಷೇಕ್ ಜೊತೆ ಮತ್ತೆ ಸಿನಿಮಾ ಮಾಡಲ್ವಂತೆ ನಿರ್ದೇಶಕ ನಾಗಶೇಖರ್.!
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಮೈನಾ, ಸಂಜು ವೆಡ್ಸ್ ಗೀತಾ ಖ್ಯಾತಿಯ ನಾಗಶೇಖರ್ ಈ ಚಿತ್ರ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
'ಅಮರ್ ಸಿನಿಮಾ ಚೆನ್ನಾಗಿ ಪ್ರದರ್ಶನ ಆಗ್ತಿದೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಅಮರ್ ಚೆನ್ನಾಗಿಲ್ಲ, ಥಿಯೇಟರ್ ಗೆ ಹೋಗಬೇಡಿ' ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದರು.
ಕೆಟ್ಟ ಸಿನಿಮಾವನ್ನು ಜೀವನದಲ್ಲಿ ಮಾಡಲ್ಲ : ನಾಗಶೇಖರ್ ಬೇಸರ
'ಆದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ನಾಗಶೇಖರ್, ನೆಗಿಟೀವ್ ಪ್ರಚಾರನೂ ಒಂದು ರೀತಿ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆದುಕೊಂಡು ಬರುತ್ತೆ' ಎಂದು ಹೇಳುತ್ತಾ ಮತ್ತೊಂದು ಅಚ್ಚರಿ ನಿರ್ಧಾರ ಪ್ರಕಟಿಸಿದರು. ಅದೇನಪ್ಪಾ ಅಂದ್ರೆ ಅಭಿಷೇಕ್ ಜೊತೆ ಮತ್ತೆ ಸಿನಿಮಾ ಮಾಡಲ್ಲ ಎಂದು ಘೋಷಿಸಿದರು. ಯಾಕೆ? ಮುಂದೆ ಓದಿ....
ಬೇಡ ಎಂದು ಇಬ್ಬರು ನಿರ್ಧರಿಸಿದ್ದಾರಂತೆ
ಒಂದು ಸಿನಿಮಾ ಹಿಟ್ ಆದರೆ ಆ ನಿರ್ದೇಶಕ ಮತ್ತು ನಟನ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರೋದು ಸಂಪ್ರದಾಯ. ಆದರೆ ಈ ವಿಚಾರದಲ್ಲಿ ಅಭಿಷೇಕ್ ಮತ್ತು ನಾಗಶೇಖರ್ ಜೋಡಿ ಬೇರೆ ನಿರ್ಧಾರ ಮಾಡಿದೆ. ಇವರಿಬ್ಬರ ಜೋಡಿಯಲ್ಲಿ ಇನ್ನೊಂದು ಸಿನಿಮಾ ಮಾಡೋದು ಬೇಡ ಎಂದು ಅಭಿ ಮತ್ತು ನಾಗಶೇಖರ್ ನಿರ್ಧರಿಸಿದ್ದಾರೆ.
ಪತ್ರಿಕೆಗಳ ವಿಮರ್ಶೆ : 'ಅಮರ್' ಕೆಲವರಿಗೆ ಇಷ್ಟವಾಗಿದೆ.. ಕೆಲವರಿಗೆ ತೀರಾ ಕಷ್ಟವಾಗಿದೆ..
ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡ್ಬೇಕು
'ಒಂದು ವೇಳೆ ಮತ್ತೆ ನಾಗಶೇಖರ್ ಜೊತೆಯಲ್ಲಿ ಅಭಿಷೇಕ್ ಸಿನಿಮಾ ಮಾಡಿದ್ರೆ, ಬೇರೆ ನಿರ್ದೇಶಕರು ಅಭಿ ಬಗ್ಗೆ ಯೋಚನೆ ಮಾಡಲ್ಲ. ಅರೇ ನಾಗಶೇಖರ್ ಅವರ ಜೊತೆ ಸಿನಿಮಾ ಮಾಡಲಿ ಬಿಡಿ ಅಂತ ಸುಮ್ಮನಾಗ್ತಾರೆ. ಹಾಗೆ ಆಗಬಾರದು. ಬೇರೆ ಡೈರೆಕ್ಟರ್ ಗಳ ಜೊತೆಯಲ್ಲೂ ಸಿನಿಮಾ ಮಾಡಬೇಕು' ಎಂಬ ಕಾರಣವನ್ನ ನಾಗಶೇಖರ್ ನೀಡಿದ್ರು.
'ಅಮರ್'ಗೆ ನೆಗೆಟಿವ್ ರಿವ್ಯೂ: ಯಂಗ್ ರೆಬಲ್ ಸ್ಟಾರ್ ಪ್ರತಿಕ್ರಿಯೆ
ಮಾಡೋದೇ ಇಲ್ಲ ಅಂತಲ್ಲಾ.!
ಅಭಿಷೇಕ್ ಜೊತೆ ಇನ್ನೊಂದು ಸಿನಿಮಾ ಮಾಡೋದು ಬೇಡ ಅಂದ್ರೆ ಭವಿಷ್ಯದಲ್ಲೂ ಮಾಡೋದು ಬೇಡ ಅಂತಲ್ಲ. ಸದ್ಯಕ್ಕೆ ಬೇಡ ಅಂತ. ನಾಲ್ಕೈದು ಸಿನಿಮಾ ಆಗಲಿ, ಮತ್ತೆ ಒಟ್ಟಿಗೆ ಕೆಲಸ ಮಾಡ್ತೀವಿ ಎಂದು ನಾಗಶೇಖರ್ ಅವರು ಹೇಳಿಕೊಂಡರು.
ನಾಗಶೇಖರ್ ಬೇಸರ
ಅಮರ್ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಪಪ್ರಚಾರ ಮಾಡಿರುವ ಬಗ್ಗೆ ನಿರ್ದೇಶಕ ನಾಗಶೇಖರ್ ಬೇಸರವಾಗಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸಿದ್ದ ಈ ಚಿತ್ರದಲ್ಲಿ ತಾನ್ಯಹೋಪ್, ರಾಜ್ ದೀಪಕ್ ಶೆಟ್ಟಿ ನಟಿಸಿದ್ದರು. ಅರ್ಜುನ್ ಜನ್ಯ ಸಂಗೀತವಿದೆ.