twitter
    For Quick Alerts
    ALLOW NOTIFICATIONS  
    For Daily Alerts

    'ಪೈಲ್ವಾನ್' ಪೈರಸಿ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ

    |

    'ಪೈಲ್ವಾನ್' ಸಿನಿಮಾದ ಪೈರಸಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿ ಮಾಡಿದೆ. ಈಗಾಗಲೇ ಈ ಬಗ್ಗೆ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

    ''ಇತರರ ಬೆವರಿನ ಬೆಲೆಯನ್ನು ಕದ್ದುಣ್ಣುವುದು ಅಕ್ಷಮ್ಯ.'' ಎಂದು ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ''ಯಾರದೇ ಚಿತ್ರ ಇರಲಿ, ಪೈರಸಿ ಮಾಡುವುದು ನಮ್ಮ ಮನೆಗೆ ನಾವೇ ಬೆಂಕಿ ಹಾಕಿದಂತೆ. ಕನ್ನಡ ನಾವೆಲ್ಲ ಬದುಕಬೇಕಾದ ಪುಟ್ಟಮನೆ.'' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಪೈರಸಿ ಪ್ರಕರಣ ಕೈಬಿಡುವಂತೆ ಸುದೀಪ್ ಗೆ ಒತ್ತಡ: ಫೋನ್ ಮಾಡಿದ ಆ ಎಂಎಲ್ಸಿ ಯಾರು?ಪೈರಸಿ ಪ್ರಕರಣ ಕೈಬಿಡುವಂತೆ ಸುದೀಪ್ ಗೆ ಒತ್ತಡ: ಫೋನ್ ಮಾಡಿದ ಆ ಎಂಎಲ್ಸಿ ಯಾರು?

    ಪೈರಸಿ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು,.ಈ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ತಡವಾಗಿ ಟ್ವೀಟ್ ಮಾಡಿದ್ದರೂ, ಪರಿಣಾಮಕಾರಿಯಾಗಿ ಬರೆದಿದ್ದಾರೆ.

    Nagathihalli Chandrashekhar Tweets About Pailwaan Piracy

    ಈ ಹಿಂದೆಯಿಂದಲೂ ಅನೇಕ ಸಿನಿಮಾಗಳು ಪೈರಸಿ ಆಗಿದ್ದವು. ಆದರೆ, 'ಪೈಲ್ವಾನ್' ಸಿನಿಮಾದ ಪೈರಸಿ ಬೇರೆಯದ್ದೆ ರೂಪ ಪಡೆದುಕೊಂಡಿತು. ಪೈರಸಿ ಮಾಡುವುದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಹಂಚಲಾಗಿತ್ತು. ಇದನ್ನು ಬೇರೆ ಬೇರೆ ನಟರು, ನಿರ್ದೇಶಕರುಗಳು ವಿರೋಧಿಸಿರುವುದು ಮೆಚ್ಚುವ ಸಂಗತಿ.

    ಸಂಕಷ್ಟದಲ್ಲಿರುವ 'ಪೈಲ್ವಾನ್' ಸುದೀಪ್ಗೆ ಬಲ ತುಂಬಿದ ಪತ್ನಿಸಂಕಷ್ಟದಲ್ಲಿರುವ 'ಪೈಲ್ವಾನ್' ಸುದೀಪ್ಗೆ ಬಲ ತುಂಬಿದ ಪತ್ನಿ

    Nagathihalli Chandrashekhar Tweets About Pailwaan Piracy

    ಅಂದಹಾಗೆ, 'ಪೈಲ್ವಾನ್' ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಸುದೀಪ್ ತಪ್ಪು ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದಿದ್ದಾರೆ. ಇನ್ನು ಇದೆಲ್ಲವನ್ನು ಮೀರಿ ಸಿನಿಮಾ 25 ದಿನಗಳನ್ನು ಪೂರೈಸಿದೆ.

    English summary
    Kannada popular director Nagathihalli Chandrashekhar tweets about 'Pailwaan' piracy.
    Saturday, October 5, 2019, 13:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X