ದುರ್ಯೋಧನನ ಹುಟ್ಟುಹಬ್ಬಕ್ಕೆ ನಾಗೇಂದ್ರ ಪ್ರಸಾದ್ ವಿಶೇಷ ಉಡುಗೊರೆ
ದುರ್ಯೋಧನ ಎಂದ ತಕ್ಷಣ ಸದ್ಯ ನೆನೆಪಿಗೆ ಬರುವ ನಟ ಅಂದರೆ ದರ್ಶನ್. 'ಕುರುಕ್ಷೇತ್ರ' ಸಿನಿಮಾದಲ್ಲಿ ಡಿ ಬಾಸ್ ಧುರ್ಯೋಧನನಾಗಿ ಅಬ್ಬರಿಸಿದ್ದಾರೆ.
ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ ಇದ್ದು, ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ದರ್ಶನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬದ ಆಚರಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದೀಗ ನಿರ್ದೇಶಕ ಸಂಘದ ಅಧ್ಯಕ್ಷ ಹಾಗೂ ಗೀತರಚನೆಗಾರ ನಾಗೇಂದ್ರ ಪ್ರಸಾದ್ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಲಿದ್ದಾರೆ.
ದರ್ಶನ್ ಜನ್ಮದಿನಕ್ಕೆ ಒಂದು ಹಾಡು ಮಾಡಲು ನಾಗೇಂದ್ರ ಪ್ರಸಾದ್ ನಿರ್ಧಾರ ಮಾಡಿದ್ದಾರೆ. ಈ ಹಾಡು ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವಿನ ಬಾಂದವ್ಯವನ್ನು ಹೇಳುತ್ತದೆಯಂತೆ. ಈ ಹಾಡಿನ ಸಾಹಿತ್ಯ ಮತ್ತು ಸಂಗೀತವನ್ನು ನಾಗೇಂದ್ರ ಪ್ರಸಾದ್ ಮಾಡಲಿದ್ದಾರೆ.

ಈ ಹಿಂದೆ ದರ್ಶನ್ ಅವರ ಸಾಕಷ್ಟು ಸಿನಿಮಾಗಳಿಗೆ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. 'ಕುರುಕ್ಷೇತ್ರ' ಸಿನಿಮಾಗೆ ಸಹ ಅವರ ಸಾಹಿತ್ಯವೇ ಇದೆ.
More from Filmibeat
English summary
Kannada director association precedent Nagendra Prasad composing a song for actor Darshan's birthday.


Click it and Unblock the Notifications











