Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಮ್ ಗೋಪಾಲ್ ವರ್ಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ನಗ್ಮ
''ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿದ್ದು ಸರಿ ಇಲ್ಲ. ಇಂತಹ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಲು ಇದು ಸರಿಯಾದ ಸಮಯ ಅಲ್ಲವೇ ಅಲ್ಲ'' - ಹೀಗಂತ ವಾಹಿನಿಯೊಂದರ ಲೈವ್ ಪ್ರೋಗ್ರಾಂ ನಲ್ಲಿ ನಟಿ ನಗ್ಮ ಹೇಳಿದರು.
ಅಷ್ಟಕ್ಕೂ, ನಗ್ಮ ಹಾಗೆ ಹೇಳುವುದಕ್ಕೂ ಒಂದು ಕಾರಣ ಇದೆ. ನಟಿ ಶ್ರೀದೇವಿ ಕೊನೆಯುಸಿರೆಳೆದಾಗ ಇಡೀ ಭಾರತವೇ ಶಾಕ್ ಆಗಿತ್ತು. ಶ್ರೀದೇವಿ ಸೌಂದರ್ಯವನ್ನು ಆರಾಧಿಸುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಸಹಜವಾಗಿ ದಿಗ್ಭ್ರಾಂತಗೊಂಡದರು.
ಶ್ರೀದೇವಿ ನಿಧನದ ಸುದ್ದಿ ಕೇಳಿ ಹಳೇ ನೆನಪುಗಳಿಗೆ ಜಾರಿದ ರಾಮ್ ಗೋಪಾಲ್ ವರ್ಮಾ, ಅಭಿಮಾನಿಗಳಿಗಾಗಿ ಒಂದು ಪತ್ರ ಬರೆದರು.
''ಸುರಸುಂದರಿ ಶ್ರೀದೇವಿ ಖುಷಿಯಾಗಿ ಜೀವನ ನಡೆಸುತ್ತಿರಲಿಲ್ಲ. ತಂದೆಯ ಸಾವಿನ ಬಳಿಕ ಶ್ರೀದೇವಿ ಪಂಜರದಲ್ಲಿ ಬಂಧಿಯಾದ ಪಕ್ಷಿಯಂತಾದರು. ಶ್ರೀದೇವಿ ಬಳಿ ನಯಾ ಪೈಸೆಯೂ ಇಲ್ಲದ ಹೊತ್ತಿಗೆ, ಆಕೆಯ ಜೀವನಕ್ಕೆ ಬೋನಿ ಕಪೂರ್ ಎಂಟ್ರಿಕೊಟ್ಟರು. ಬೋನಿ ಕಪೂರ್ ಮೊದಲ ಪತ್ನಿ ಮೋನಾಗೆ ಮೋಸವಾಗಿದೆ ಎಂದು ಬೋನಿ ತಾಯಿ ಪಂಚತಾರಾ ಹೋಟೆಲ್ ಒಂದರಲ್ಲಿ ಶ್ರೀದೇವಿ ಹೊಟ್ಟೆಗೆ ಗುದ್ದಿದ್ದರು'' ಅಂತೆಲ್ಲ ಪತ್ರದಲ್ಲಿ ರಾಮ್ ಗೋಪಾಲ್ ವರ್ಮಾ ಉಲ್ಲೇಖಿಸಿದ್ದರು.
ಇದನ್ನೆಲ್ಲ ಓದಿದ ಮೇಲೆ ನಟಿ ನಗ್ಮ ಅಸಮಾಧಾನಗೊಂಡರು. ಶ್ರೀದೇವಿ ಇಹಲೋಕ ತ್ಯಜಿಸಿರುವ ಹೊತ್ತಲ್ಲಿ, ರಾಮ್ ಗೋಪಾಲ್ ವರ್ಮಾ ಇದನ್ನೆಲ್ಲ ಬರೆಯಬಾರದಿತ್ತು ಎಂದು ನಗ್ಮ ಬೇಸರ ವ್ಯಕ್ತ ಪಡಿಸಿದರು.
ಅಷ್ಟಕ್ಕೂ, ಶ್ರೀದೇವಿ ಅಭಿಮಾನಿಗಳ ಆಸ್ತಿ. ಹೀಗಾಗಿ, ಅಭಿಮಾನಿಗಳು ಸತ್ಯ ತಿಳಿದುಕೊಳ್ಳಲೇಬೇಕು ಎಂದು ಇದನ್ನೆಲ್ಲ ಬರೆದಿರುವುದಾಗಿ ಪತ್ರದಲ್ಲಿ ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ.
ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ
ಸೌಂದರ್ಯದ ಸಿರಿದೇವಿ ಶ್ರೀದೇವಿಯನ್ನ ಪ್ರೀತಿಸುತ್ತಲೇ ದ್ವೇಷಿಸಿದ ಆರ್.ಜಿ.ವಿಯ ಈ ಪತ್ರ