Don't Miss!
- News Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುಂಡಿನ ಮತ್ತು ಗಮ್ಮತ್ತಿನಲ್ಲಿ ಕನಸಿನರಾಣಿ ಮಾಲಾಶ್ರೀ
ನಟಿ ಮಾಲಾಶ್ರೀ ಅವರು ಮತ್ತೆ ಗುಂಡಿನ ಮತ್ತಿಗೆ ಶರಣಾಗಿದ್ದಾರೆ. ಇಪ್ಪತ್ತೈದು ವರ್ಷಗಳ ಹಿಂದೆ ಅವರು "ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು" ಎಂದು ತೂರಾಡುತ್ತಾ ಓಲಾಡುತ್ತಾ ಪಡ್ಡೆಹೈಕಳ ನಿದ್ದೆಗೆಡಿಸಿದ್ದರು. ಆಗಲೇ ಅವರು 'ಕನಸಿನರಾಣಿ'ಯಾಗಿ ಚಿತ್ರಪ್ರೇಮಿಗಳ ಹೃದಯ ಸಾಮ್ರಾಜ್ಯ ಅಲಂಕರಿಸಿದ್ದರು.
'ನಂಜುಂಡಿ ಕಲ್ಯಾಣ' (1989) ಚಿತ್ರದ ಆ ಗುಂಡಿನ ಹಾಡು ಸಖತ್ ಕಿಕ್ ಕೊಟ್ಟಿತ್ತು. ಈಗ ಮತ್ತೊಮ್ಮೆ ಅದೇ ಹಾಡನ್ನು ರಿಮಿಕ್ಸ್ ಆಗಿ 'ಘರ್ಷಣೆ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ದಯಾಳ್ ಪದ್ಮನಾಭನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕಾಗಿ ಮತ್ತೆ "ಒಳಗೆ ಸೇರಿದರೆ ಗಂಡು.." ಹಾಡನ್ನು ಬಳಸಿಕೊಳ್ಳಲಾಗಿದೆ. [ಹೊಸ ದಾಖಲೆ ಬರೆದ ಕನಸಿನ ರಾಣಿ ಮಾಲಾಶ್ರೀ]
ಈ ಹಾಡಿನಲ್ಲಿ ಮಾಲಾಶ್ರೀ ಜೊತೆಗೆ ರೂಪಿಕಾ ಸಹ ಅಭಿನಯಿಸಿದ್ದಾರೆ. ಆಕ್ಷನ್ ಕ್ರೈಮ್ ಥ್ರಿಲ್ಲರ್ ಆದ ಈ ಚಿತ್ರದಲ್ಲಿ ಮಾಲಾಶ್ರೀ ಮತ್ತೊಮ್ಮೆ ಖಾಕಿ ಖದರ್ ತೋರಲಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ರಾಜೇಶ್ ಕಟ ಛಾಯಾಗ್ರಹಣವಿದೆ.
ಚಿತ್ರದ ಪಾತ್ರವರ್ಗದಲ್ಲಿ ಆಶಿಶ್ ವಿದ್ಯಾರ್ಥಿ, ನೈನಾ ಪುಟ್ಟಸ್ವಾಮಿ, ಸಂದೀಪ್, ಮುನಿ, ಕೀರ್ತಿ, ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್, ಕಾಶಿ, ಅಜಯ್ ರಾಜ್, ಗುರುರಾಜ್ ಹೊಸಕೋಟೆ ಮುಂತಾದವರಿದ್ದಾರೆ. (ಏಜೆನ್ಸೀಸ್)