'ಕೆಜಿಎಫ್' ಬಳಿಕ ನಾಳೆ ಎರಡು ಸಿನಿಮಾಗಳು ಬಿಡುಗಡೆ
ಕಳೆದ ವಾರ ಬಿಡುಗಡೆಯಾಗಿರುವ 'ಕೆಜಿಎಫ್' ಸಿನಿಮಾ ಯಶಸ್ವಿ ಪ್ರದರ್ಶನವನ್ನ ಮುಂದುವರೆಸಿದೆ. ಈ ಚಿತ್ರದ ನಡುವೆ ನಾಳೆ ಎರಡು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿವೆ.
ಸಂಚಾರಿ ವಿಜಯ್ ಮತ್ತು ಶ್ರುತಿ ಹರಿಹರನ್ ನಟನೆಯ 'ನಾತಿಚರಾಮಿ' ಹಾಗೂ ವಿನಯ್ ರಾಜ್ ಕುಮಾರ್ ಮತ್ತು ಲತಾ ಹೆಗಡೆ ಅಭಿನಯದ 'ಅನಂತು v/s ನುಸ್ರತ್' ಸಿನಿಮಾಗಳು ನಾಳೆ ಬಿಡುಗಡೆಯಾಗುತ್ತಿವೆ. ಈಗಾಗಲೇ ಹಾಡುಗಳ ಹಾಗೂ ಟ್ರೇಲರ್ ಗಳ ಮೂಲಕ ಈ ಎರಡು ಚಿತ್ರಗಳು ಗಮನ ಸೆಳೆದಿವೆ.

'ನಾತಿಚರಾಮಿ' ಸಿನಿಮಾವನ್ನು ಮಂಸೋರೆ ನಿರ್ದೇಶನ ಮಾಡಿದ್ದಾರೆ. ಸಮಾಜಕ್ಕೆ ಹತ್ತಿರ ಎನಿಸುವ ಕಥೆಯನ್ನ ತೆರೆಗೆ ತಂದಿದ್ದಾರೆ. ಸಂಧ್ಯಾರಾಣಿ ಕತೆ-ಸಂಭಾಷಣೆಯನ್ನು ಬರೆದಿದ್ದಾರೆ. ಬಿಂದು ಮಾಲಿನಿ ಅವರು ಸಂಗೀತ ನೀಡಿದ್ದಾರೆ. ಸಿನಿಮಾಗೆ ಗಾಂಧಿನಗರದಲ್ಲಿ ತ್ರಿವೇಣಿ ಚಿತ್ರಮಂದಿರ ಸಿಕ್ಕಿದೆ.

'ಅನಂತು v/s ನುಸ್ರತ್' ಸಿನಿಮಾದ ಮೂಲಕ ಮತ್ತೆ ವಿನಯ್ ರಾಜ್ ಕುಮಾರ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಲಾಯರ್ ಪಾತ್ರದಲ್ಲಿ ಅವರು ನಟಿಸಿದ್ದು, ಲಾಯರ್ ಹಾಗೂ ಜಡ್ಜ್ ನಡುವಿನ ಪ್ರೇಮಕಥೆ ಚಿತ್ರದಲ್ಲಿದೆ. ಬ್ರಾಹ್ಮಣ ಹುಡುಗ ಹಾಗೂ ಮುಸ್ಮಿಂ ಹುಡುಗಿಯ ನಡುವ ಲವ್ ಸ್ಟೋರಿಯಾಗಿದೆ.


Click it and Unblock the Notifications











