Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವೀನ್ ಸಜ್ಜು, ಶೆರ್ಲಿ ಸೇಟಿಯ ಗಾನ ಸುಧೆಯಲ್ಲಿ ಮಿಂದ ಯುವ ಸಮೂಹ
ಅತ್ತ ಮಳೆಯ ಅಬ್ಬರ... ಇತ್ತ ಸಂಗೀತದ ಸಪ್ಪಳ.. ಇವೆರಡನ್ನೂ ಮೀರಿಸಿದಂತೆ ನವೀನ್ ಸಜ್ಜು, ಶೆರ್ಲಿ ಸೇಟಿಯ ಹಾಡಿನ ಮೋಡಿ ಹಾಗೂ ಸಾಲು ಸಾಲಾಗಿ ಪ್ರದರ್ಶನಗೊಂಡ ನೃತ್ಯಗಳಿಗೆ ಯುವ ಸಮೂಹ ಮಳೆಯಲ್ಲಿಯೂ ಕುಣಿದು ಕುಪ್ಪಳಿಸುವಂತೆ ಮಾಡಿತು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದ ಐದನೇ ದಿನ ಕೋಕ್ ಸ್ಟುಡಿಯೋ ಪ್ರಾಯೋಜಿತ ಬಾಲಿವುಡ್ ಗಾಯಕಿ ಶೆರ್ಲಿ ಸೇಟಿಯ ಹಾಡಿದ 'ತೂ ಮೇರಿ ತೂಜೆ ಮೇರಿ' ಗೀತೆ, 'ಲಾಗ್ ಜಾಥಾ ಹೂಂ', 'ತೇರಿ ದಿವಾನಿ ತೇರಿ ದಿವಾನಿ' ಹಾಡುಗಳಿಗೆ ಪ್ರೇಕ್ಷಕರು ಮೈ ಬೆವರುವಂತೆ ಹೆಜ್ಜೆ ಹಾಕಿದರು.
1001 ಮೆಟ್ಟಿಲುಗಳನ್ನು ಏರಿ ಚಾಮುಂಡಿ ದೇವಿಯ ದರ್ಶನ ಪಡೆದ ನಟಿ ಹರಿಪ್ರಿಯಾ
ಕಾರ್ಯಕ್ರಮಕ್ಕೂ ಮುನ್ನ ಮೈಸೂರಿನ ನವೀನ್ ಸಜ್ಜು ನಡೆಸಿಕೊಟ್ಟ 'ಹೃದಯ ಸಮುದ್ರ ಕಲಕಿ... ಉಕ್ಕಿದ ದ್ವೇಷದ ಬೆಂಕಿ..' ಗೀತೆ, ಕವಿ ದ.ರಾ.ಬೇಂದ್ರೆ ಅವರ 'ಶ್ರಾವಣ ಬಂತು ಶ್ರಾವಣ ಬಂತು ಕಾಡಿಗೆ, ನಾಡಿಗೆ, ಬೀಡಿಗೆ... ಬಂತು ಶ್ರಾವಣ', 'ಒಳಿತು ಮಾಡು ಮನುಸ, ನೀ ಇರೋದು ಮೂರೇ ದಿವಸ..' ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಲೂಸಿಯಾ ಸಿನಿಮಾದ 'ಎದೆಯೊಳಗಿನ ತಮತಮ ತಮಟೆ.. ಯಾರೋ ಬಡ್ದಂಗ್ ಆಗ್ತೈತೆ..', 'ಹೋಗುಮಾ ಹೋಗುಮಾ ಲಾಂಗು ಡ್ರೈವು ಹೋಗುಮಾ.. ಎಣ್ಣೆ ನಮ್ದು ಊಟ ನಿಮ್ದು...' ಹಾಡುಗಳು ಶುರುವಾಗುತ್ತಿದ್ದಂತೆಯೇ ಕುಳಿತ್ತಿದ್ದ ಯುವಕರೆಲ್ಲ ಮೇಲೆದ್ದು ಕುಣಿಯಲಾರಂಭಿಸಿದರು.
ಯುವ ದಸರಾ ರಂಗೇರಿಸಿದ ಹರಿಪ್ರಿಯ, ಶುಭಾ ಪೂಂಜಾ, ಅನುರಾಧ ಭಟ್
ಮುಂಬೈನ ಎಂ.ಜೆ. ಫೈವ್ ತಂಡದವರು ನಡೆಸಿಕೊಟ್ಟ ನೃತ್ಯವನ್ನು ನೋಡಿದ ಪ್ರೇಕ್ಷಕರು ಬೆರಗುಗಣ್ಣಿನಿಂದ ನೋಡುವಂತಾದರು. ಸಭಿಕರಿಗೂ ಮೊಬೈಲ್ ನಲ್ಲಿ ಫ್ಲಾಶ್ ಲೈಟ್ ಮಾಡಿ, ತಮ್ಮ ನೃತ್ಯಕ್ಕೆ ಹೆಜ್ಜೆ ಹಾಕುವಂತೆ ಎಂ.ಜೆ.ಫೈವ್ ತಂಡ ಹುರಿದುಂಬಿಸಿದರು.
ವಿವಿಧ ಕಾಲೇಜು ತಂಡದವರು ನಡೆಸಿಕೊಟ್ಟ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಸಮೂಹದ ಮನಮುಟ್ಟಿತು.