Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯೋಗ್ಯನಾಗಲು ನೀನಾಸಂ ಸತೀಶ್ ಕಸರತ್ತು
Recommended Video
ಟೈಗರ್ ಗಲ್ಲಿ ಸಿನಿಮಾದ ನಂತರ ನಿನಾಸಂ ಸತೀಶ್ ಸಾಕಷ್ಟು ಬ್ಯುಸಿ ಆಗಿದ್ದಾರೆ. ಮೂರ್ನಾಲ್ಕು ಸಿನಿಮಾಗಳನ್ನ ಒಪ್ಪಿಕೊಂಡಿರುವ ಸತೀಶ್ ಜಿಮ್ ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರಂತೆ.
ಸದ್ಯ ನೀನಾಸಂ ಸತೀಶ್, ಮಹೇಶ್ ನಿರ್ದೇಶನದ ಅಯೋಗ್ಯ ಸಿನಿಮಾದಲ್ಲಿ ಅಭಿಯಿಸುತ್ತಾರೆ. ಮಂಡ್ಯದ ಸುತ್ತಾ ಮುತ್ತಾ ಚಿತ್ರೀಕರಣವನ್ನ ಮುಗಿಸಿ ಬಂದಿರುವ ಸತೀಶ್ ತಮ್ಮ ಬಾಡಿ ಬಿಲ್ಡಿಂಗ್ ಕಡೆ ಗಮನ ಹರಿಸಿದ್ದಾರೆ.
ಕನ್ನಡ ಚಿತ್ರರಂಗದ 'ಅಯೋಗ್ಯ'ನಿಗೆ ಮತ್ತೊಮ್ಮೆ ಸಿಕ್ತು ಮುಹೂರ್ತ ಭಾಗ್ಯ
ಇತ್ತೀಚಿಗಷ್ಟೇ ವರ್ಕ್ ಔಟ್ ಮಾಡುತ್ತಿರುವ ಫೋಟೋ ಶೂಟ್ ಮಾಡಿಸಿದ್ದಾರೆ ಸತೀಶ್. ಸೆಲೆಬ್ರೆಟಿ ಕ್ಯಾಮೆರಾ ಮ್ಯಾನ್ ರಾಘವ್ ಕ್ಯಾಮೆರಾ ಕಣ್ಣಲ್ಲಿ ಸತೀಶ್ ಹೊಸ ಲುಕ್ ಕಾಣಿಸಿಕೊಂಡ ಬಗೆ ಇಲ್ಲಿದೆ. ಮುಂದೆ ಓದಿ
ಅಯೋಗ್ಯನ ಹೊಸ ಲುಕ್
ಅಯೋಗ್ಯ ಸಿನಿಮಾದಲ್ಲಿ ಬ್ಯುಸಿ ಆಗಿರುವ ನೀನಾಸಂ ಸತೀಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಯೋಗ್ಯ ಚಿತ್ರದಲ್ಲಿನ ಪಾತ್ರಕ್ಕಾಗಿ ಸಖತ್ ವರ್ಕ್ ಔಟ್ ಶುರು ಮಾಡಿರುವ ಸತೀಶ್ ಹೊಸ ಪೋಟೋ ಶೂಟ್ ಮಾಡಿಸಿದ್ದಾರೆ.
ಸಾಹಸ ದೃಶ್ಯಕ್ಕಾಗಿ ವರ್ಕ್ ಔಟ್
ಮೊದಲ ಹಂತದ ಚಿತ್ರೀಕರಣ ಮಾಡಿ ಮುಗಿಸಿರುವ ನಿರ್ದೇಶಕ ಮಹೇಶ್ ಮತ್ತು ತಂಡ ಎರಡನೇ ಹಂತದ ಚಿತ್ರೀಕರಣದ ತಯಾರಿ ಮಾಡಿಕೊಂಡಿದೆ. ಸೆಕೆಂಡ್ ಶೆಡ್ಯೂಲ್ ನಲ್ಲಿ ರವಿಶಂಕರ್ ಮತ್ತು ಸತೀಶ್ ನಡುವೆ ಸಾಹಸ ದೃಶ್ಯಗಳು ನಡೆಯಲಿದೆಯಂತೆ. ಇದೇ ಕಾರಣಕ್ಕಾಗಿ ಜಿಮ್ ನಲ್ಲಿ ವರ್ಕ್ ಔಟ್ ಮಾಡಲು ಶುರು ಮಾಡಿದ್ದಾರೆ.
ಪಂಚಾಯಿತಿ ಸದಸ್ಯ ಸತೀಶ್
ಅಯೋಗ್ಯ ಸಿನಿಮಾದಲ್ಲಿ ನಿನಾಸಂ ಸತೀಶ್ ಗ್ರಾಮ ಪಂಚಾಯಿತಿ ಸದಸ್ಯನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಯೋಗ್ಯ ಚಿತ್ರದಲ್ಲಿ ಆರುಮುಗ ರವಿಶಂಕರ್ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಹಲವು ಸಿನಿಮಾ-ವಿಭಿನ್ನ ಪಾತ್ರಗಳು
ಸತೀಶ್ ಅಯೋಗ್ಯ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಗೋದ್ರಾ ಚಿತ್ರದಲ್ಲಿಯೂ ವಿಭಿನ್ನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇದರ ಜೊತೆಯಲ್ಲಿ ರಾಮನೂ ಕಾಡಿಗೆ ಹೋದನು ಹಾಗೂ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಅವರ ಮುಂದಿನ ಮೂರು ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.