Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊದಲ ಹೆಜ್ಜೆಯಲ್ಲಿ ವಿರೋಧ ಎದುರಿಸಬೇಕಾಗಿದೆ 'ಬಿಗ್ ಬಾಸ್' ಪ್ರೇಮ ಪಕ್ಷಿಗಳು
Recommended Video
'ಬಿಗ್ ಬಾಸ್ ಕನ್ನಡ' ಸೀಸನ್ 5 ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇದೀಗ ನಿಜ ಜೀವನದಲ್ಲಿ ಒಂದಾಗಿದ್ದಾರೆ. ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ನಿವೇದಿತಾರನ್ನು ಪ್ರೀತಿಸುತ್ತಿರುವ ವಿಷಯವನ್ನು ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ. ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಬೆರಳಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದಾರೆ. ನಿವೇದಿತಾ ಕೂಡ ಚಂದನ್ ಪ್ರೇಮ ನಿವೇದನೆಯನ್ನು ಆಶ್ಚರ್ಯ ಹಾಗೂ ಖುಷಿಯಿಂದ ಒಪ್ಪಿಕೊಂಡಿದ್ದಾರೆ.
ಅಭಿಮಾನಿಗಳ ಮುಂದೆ ಎಂಗೇಜ್ ಆದ ಚಂದನ್ ಶೆಟ್ಟಿ - ನಿವೇದಿತಾ ಗೌಡ : ಸದ್ಯದಲ್ಲೇ ಮದುವೆ
ಲವ್ ಎಂದ ಮೇಲೆ ನೋವು ಇರಲೇ ಬೇಕು. ಇದನ್ನು ಸಾಕಷ್ಟು ಪ್ರೇಮಿಗಳು ತಮ್ಮ ಬದುಕಿನಲ್ಲಿ ಅನುಭವಿಸಿರುತ್ತಾರೆ. ಅದೇ ರೀತಿಯಲ್ಲಿ ಚಂದನ್ ಹಾಗೂ ನಿವೇದಿತಾ ಜೋಡಿ ಈಗ ವಿರೋಧವನ್ನು ಎದುರಿಸಬೇಕಾಗಿದೆ. ಮೊದಲ ಹೆಜ್ಜೆಯಲ್ಲಿಯೇ ಈ ಜೋಡಿಗೆ ವಿಗ್ನ ಎದುರಾಗಿದೆ. ಏನಿದು ಕಥೆ ಮುಂದೆ ಓದಿ..
'ಯುವ ದಸರಾ' ಪ್ರೇಮ ನಿವೇದನೆ ಜಾಗನಾ?
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೇಮಕ್ಕೆ ಯಾರ ಅಡ್ಡಿಯೂ ಇಲ್ಲ. ಆದರೆ, ಚಂದನ್ ತಮ್ಮ ಪ್ರೇಮ ನಿವೇದನೆಗೆ ಆರಿಸಿಕೊಂಡ ಜಾಗ ಈಗ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. 'ಯುವ ದಸರಾ' ವೇದಿಕೆ ಮೇಲೆ ನಿವೇದಿತಾಗೆ ಉಂಗುರ ಹಾಕಿ ಪ್ರಪೋಸ್ ಮಾಡಿದ್ದರು ಚಂದನ್. ಹೀಗಾಗಿ, 'ಯುವ ದಸರಾ' ನಿಮಗೆ ಪ್ರೇಮ ನಿವೇದನೆ ಜಾಗನಾ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ನಿವೇದಿತಾ ಗೌಡ ವಿರುದ್ಧ ನೆಟ್ಟಿಗರು ಗರಂ: ಕಾಮಿಡಿ ಶೋಗೆ ಛೀಮಾರಿ
ದಸರಾ ಹಬ್ಬದಲ್ಲಿ ಇದೆಲ್ಲ ಬೇಕಿತ್ತಾ?
''ನಾನು ಚಂದನ್ ಶೆಟ್ಟಿ ಅಭಿಮಾನಿ. ಆದರೆ, ದಸರಾ ಹಬ್ಬದಲ್ಲಿ ಇದೆಲ್ಲ ಬೇಕಿತ್ತಾ'' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ''ದೊಡ್ಡ ಕಾರ್ಯಕ್ರಮದಲ್ಲಿ ಎಂಗೇಜ್ ಆಗಿ ದುಡ್ಡು ಉಳಿಸಿದರು, ಅರಮನೆಯಲ್ಲಿ ಮದುವೆ ಮಾಡಿಸಿ, ಮುಂದಿನ ವರ್ಷ ಯುವ ದಸರಾದಲ್ಲಿ ಬೀಗರ ಊಟ ಹಾಕಿಸಿ'' ಎನ್ನುವ ಕಾಮೆಂಟ್ಸ್ ಗಳ ಮೂಲಕ ಇನ್ನು ಕೆಲವರು ನವ ಜೋಡಿಗೆ ಗೇಲಿ ಮಾಡಿದ್ದಾರೆ.
ವಿಡಿಯೋ: 'ಬೆಸ್ಟ್ ಫ್ರೆಂಡ್' ಅಂತ ಹಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡ
ನೆಗೆಟಿವ್ ಕಾಮೆಂಟ್ಸ್ ಗಳು ಹೆಚ್ಚಿವೆ
ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಿಶ್ಚಿತಾರ್ಥಕ್ಕೆ ಅನೇಕರು ಶುಭ ಹಾರೈಸಿದ್ದಾರೆ. ಆದರೆ, ಪಾಸಿಟಿವ್ ಕಾಮೆಂಟ್ಸ್ ಗಿಂತ ಹೆಚ್ಚಾಗಿ ನೆಗೆಟಿವ್ ಮಾತುಗಳು ಕೇಳಿ ಬಂದಿವೆ. ಚಂದನ್ ತಮ್ಮ ಪ್ರಿಯತಮೆ ಸರ್ ಪ್ರೈಸ್ ನೀಡಲು ಯುವ ದಸರಾದಲ್ಲಿ ಪ್ರಪೋಸ್ ಮಾಡಿದರು. ಆದರೆ, ಇದೇ ಈಗ ಅವರನ್ನು ಇಕ್ಕಟ್ಟಿಗೆ ಸಿಗಿಸಿದೆ.
ಚಂದನ್ ಶೆಟ್ಟಿ-ನಿವೇದಿತಾಗೆ 'ಅಕ್ಟೋಬರ್ 15' ಮರೆಯಲಾಗದ ದಿನ ಆಗೋಯ್ತು.!
ಸದ್ಯದಲ್ಲಿಯೇ ಮದುವೆ
ವೇದಿಕೆ ಮೇಲೆ ನಿವೇದಿತಾಗೆ ರಿಂಗ್ ಹಾಕಿದ ಚಂದನ್ ನಂತರ ತಮ್ಮ ಅಭಿಮಾನಿಗಳ ಜೊತೆಗೆ ಮಾತನಾಡಿದರು. ''ಈ ದಿನ ನಾನು ಪ್ರಪೋಸ್ ಮಾಡುತ್ತಾನೆ ಎಂದು ತಿಳಿದಿರಲಿಲ್ಲ. ಆದರೆ, ನಿಮ್ಮೆಲ್ಲರ ಮುಂದೆ ನಿವೇದಿತಾಗೆ ಪ್ರಪೋಸ್ ಮಾಡಿದ್ದೇನೆ. ಸದ್ಯದಲ್ಲಿಯೇ ನಾವು ಮದುವೆ ಆಗುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ.'' ಎಂದು ಹೇಳಿದ್ದಾರೆ.
ಗೆಳೆತನ ಪ್ರೀತಿಗೆ ತಿರುಗಿದೆ
''ನನಗೆ ತುಂಬ ಶಾಕ್ ಆಗುತ್ತಿದೆ. ಐ ಲವ್ ಯೂ ಸೋ ಮಚ್. ಬಿಗ್ ಬಾಸ್ ಮನೆಯಲ್ಲಿ ನಾವು 105 ದಿನ ಜೊತೆಯಲಿ ಇದ್ವಿ. ಹೊರಗೆ ಬಂದ ಮೇಲೆ ಒಳ್ಳೆಯ ಫ್ರೆಂಡ್ಸ್ ಆದ್ವಿ. ನಂತರ ಬೆಸ್ಟ್ ಫ್ರೆಂಡ್ಸ್ ಆದ್ವಿ. ಆಮೇಲೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ್ವಿ. ಈ ತರ ಪ್ರಪೋಸ್ ಬಂದರೆ, ಓ ಮೈ ಗಾಡ್.'' ಎಂದು ನಿವೇದಿತಾ ಸಂತಸ ಹಂಚಿಕೊಂಡರು