Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್, ಸುದೀಪ್ ಹೆಸರಲ್ಲಿ ಸೆಟ್ಟೇರಿತು ಹೊಸ ಸಿನಿಮಾ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದ್ದಂತ ವಿಚಾರ. ಆದರೆ ಈಗ ಅವರಿಬ್ಬರು ಸ್ನೇಹಿತರಲ್ಲ.. ಆದರೆ ಅಭಿಮಾನಿಗಳು ಮಾತ್ರ ಇವರಿಬ್ಬರು ಮತ್ತೆ ಒಂದಾಗಲಿ ಎಂದು ಕಾಯುತ್ತಿದ್ದಾರೆ.
ಸ್ನೇಹದ ಬಗ್ಗೆ ಇತ್ತೀಚಿಗೆ ಎಲ್ಲಿಯೂ ಮಾತನಾಡದ ಈ ಇಬ್ಬರು ಸ್ಟಾರ್ ಗಳ ಹೆಸರಿನಲ್ಲಿ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರರಲು ಸಿದ್ದವಾಗಿದೆ. ಟೈಟಲ್ ನೋಡಿದ ತಕ್ಷಣವೇ ಅಭಿಮಾನಿಗಳ ಗಮನ ಈ ಸಿನಿಮಾ ಕಡೆ ಹೋಗುತ್ತಿದೆ.
'ಮರಿ ಟೈಗರ್' ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡೋದರ ಗುಟ್ಟು ರಟ್ಟು
ದರ್ಶನ್ ಹಾಗೂ ಸುದೀಪ್ ಹೆಸರಿನಲ್ಲಿ ಸೆಟ್ಟೇರುತ್ತಿರುವ ಸಿನಿಮಾಗೂ ಚಾಲೆಂಜಿಂಗ್ ಸ್ಟಾರ್ ಹಾಗೂ ಅಭಿನಯ ಚಕ್ರವರ್ತಿಗೂ ಸಂಬಂಧ ಇದ್ಯಾ? ಅಥವಾ ಟೈಟಲ್ ಮಾತ್ರ ಇವರ ಹೆಸರಿನಲ್ಲಿದ್ಯಾ? ಇಂತಹ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ ...
ದಚ್ಚು-ದೀಪು ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಹೆಸರಿನಲ್ಲಿ ಹೊಸ ಸಿನಿಮಾ ಸೆಟ್ಟೇರಲು ತಯಾರಾಗಿದೆ. ಚಿತ್ರಕ್ಕೆ 'ದಚ್ಚು-ದೀಪು' ಎಂದು ಟೈಟಲ್ ಇಡಲಾಗಿದೆ.
ಫ್ಯಾನ್ಸ್ ನೀವ್ ಅನ್ಕಂಡಗಲ್ಲ ನಾವು
'ದಚ್ಚು-ದೀಪು' ಎಂದು ಟೈಟಲ್ ಇಟ್ಟಿರುವ ನಿರ್ದೆಶಕರು ಸಿನಿಮಾಗೆ 'ಫ್ಯಾನ್ಸ್ ನೀವ್ ಅನ್ಕಂಡಗಲ್ಲ ನಾವು' ಎನ್ನುವ ಉಪ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಹಾಗೂ ಟ್ಯಾಗ್ ಲೈನ್ ಎರಡು ಸುದೀಪ್ ಹಾಗೂ ದರ್ಶನ್ ಅವರನ್ನೇ ಬಿಂಬಿಸುವಂತಿದೆ.
ದರ್ಶನ್ ಜೊತೆ ಕೆಲಸ ಮಾಡಿದ ನಿರ್ದೇಶಕ
'ದಚ್ಚು-ದೀಪು' ಎನ್ನುವ ಸಿನಿಮಾಗೆ ನವ ನಿರ್ದೇಶಕ ರಂಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ದರ್ಶನ್ ಅವರ ಚಕ್ರವರ್ತಿ ಹಾಗೂ ಜಗ್ಗುದಾದ ಸಿನಿಮಾದಲ್ಲಿ ರಂಜಿತ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಹೊಸ ಕಲಾವಿದರ ಅಭಿನಯ
'ದಚ್ಚು-ದೀಪು' ಸಿನಿಮಾದಲ್ಲಿ ಆನಂದ್ ಹಾಗೂ ಚಂದು ನಾಯಕರಾಗಿ ಅಭಿನಯ ಮಾಡುತ್ತಿದ್ದಾರೆ. ಇನ್ನು ನಾಯಕಿಯರ ಪಾತ್ರದಲ್ಲಿ ನಿಶ್ಕಲ ಮತ್ತು ಅರ್ಚನಾ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್ ಹಾಗೂ ಅಜಯ್ ರಾವ್ ಮಹೂರ್ತದಲಲಿ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಲಿದ್ದಾರೆ.