twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯದಲ್ಲಿ ಅಂಬಿ ಪುತ್ರನ ಏಟು, ಸಿಎಂ ಪುತ್ರನ ತಿರುಗೇಟು

    |

    Recommended Video

    ಐಟಿ ದಾಳಿ ವಿಷಯದಲ್ಲಿ ಅಭಿಷೇಕ್ ಅಂಬರೀಶ್ ಪ್ರತಿಕ್ರಿಯಿಸಿದ್ದು ಹೀಗೆ | FILMIBEAT KANNADA

    ಇಷ್ಟು ದಿನ ಮಂಡ್ಯ ಅಖಾಡದಲ್ಲಿ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಮತ್ತು ಸಿಎಂ ಕುಮಾರಸ್ವಾಮಿ ನಡುವೆ ವಾಗ್ವಾದ ನಡೆಯುತ್ತಿತ್ತು. ಆದ್ರೀಗ, ಮಂಡ್ಯದ ನಾಡಲ್ಲಿ ಅಂಬಿ ಪುತ್ರ ಮತ್ತು ಸಿಎಂ ಪುತ್ರನ ಏಟು ಎದಿರೇಟು ಆರಂಭವಾಗಿದೆ.

    ಒಂದು ಕಡೆ ಮದ್ದೂರಿನಲ್ಲಿ ಪ್ರಚಾರ ಮಾಡ್ತಿದ್ದ ನಟ ಅಭಿಷೇಕ್ ಪರೋಕ್ಷವಾಗಿ ಮುಖ್ಯಮಂತ್ರಿ ಮತ್ತು ಅವರ ಮಗ ನಿಖಿಲ್ ಗೆ ಟಾಂಗ್ ನೀಡಿದ್ದಾರೆ. ನಂತರ ಇನ್ನೊಂದು ಕಡೆ ಪ್ರಚಾರದಲ್ಲಿ ನಿಖಿಲ್, ಅಭಿಷೇಕ್ ಮತ್ತು ಸುಮಲತಾಗೆ ತಿರುಗೇಟು ನೀಡಿದ್ದಾರೆ.

    ದರ್ಶನ್ ಸ್ಟೈಲ್ ನಲ್ಲಿ ಅಭಿಷೇಕ್ ಡೈಲಾಗ್, ಅಭಿಮಾನಿಗಳು ಫುಲ್ ಖುಷ್ದರ್ಶನ್ ಸ್ಟೈಲ್ ನಲ್ಲಿ ಅಭಿಷೇಕ್ ಡೈಲಾಗ್, ಅಭಿಮಾನಿಗಳು ಫುಲ್ ಖುಷ್

    ಮಂಡ್ಯ ರಾಜಕೀಯ ನಮ್ಮ ಸ್ನೇಹಕ್ಕೆ ಯಾವುದೇ ಅಡ್ಡಿಯಾಗಲ್ಲ ಎನ್ನುತ್ತಿದ್ದ ಗೆಳೆಯರು ಈಗ ಹಾವು-ಮುಂಗುಸಿಯಂತೆ ಕಿತ್ತಾಡುವ ಸನ್ನಿವೇಶಕ್ಕೆ ಹೆಜ್ಜೆ ಇಡ್ತಿದ್ದಾರೆ ಎಂಬ ಅನುಮಾನ ಕಾಡ್ತಿದೆ. ಅಷ್ಟಕ್ಕೂ, ಅಭಿಷೇಕ್ ಏನಂದ್ರು? ಅದಕ್ಕೆ ನಿಖಿಲ್ ಕುಮಾರ್ ಏನಂದ್ರು? ಮುಂದೆ ಓದಿ.....

    ಟವಲ್ ಹಾಕ್ಕೊಂಡು ನಾವು ಅಳಲ್ಲ

    ಟವಲ್ ಹಾಕ್ಕೊಂಡು ನಾವು ಅಳಲ್ಲ

    ''ಮೈಕ್ ಮುಂದೆ ನಿಂತು ಟವಲ್ ಹಾಕ್ಕೊಂಡು ಅಳಬೇಕಾ, ನಾವ ಅಳಲ್ಲ, ನೀವು ಇಷ್ಟು ಜನ ನಮಗೆ ಧೈರ್ಯ ಕೊಡೋಕೆ ಇದ್ದೀರಾ, ನಾವ್ಯಾಕೆ ಅಳಬೇಕು'' ಎಂದು ಪರೋಕ್ಷವಾಗಿ ಸಿಎಂ ಕುಟುಂಬಕ್ಕೆ ಮಾತಿನ ಮೂಲಕ ಚಾಟಿ ಬೀಸಿದರು ನಟ ಅಭಿಷೇಕ್.

    ಮಂಡ್ಯದ ಅಳಿಯ ನಾನಲ್ಲ

    ಮಂಡ್ಯದ ಅಳಿಯ ನಾನಲ್ಲ

    'ಒಬ್ಬರನ್ನ ಮದುವೆ ಆಗಿ ನಾನು ಮಂಡ್ಯದ ಅಳಿಯ ಆಗಲ್ಲ. ನಾನು ಮಂಡ್ಯದ ಮಗ' ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

    ಯಾರೋ ನಾಲ್ಕು ಜನ 'ಡಿ ಬಾಸ್' ಅಂತಾರೆ: ದರ್ಶನ್ ವಿರುದ್ಧ ಸಿಎಂ ವಾಗ್ದಾಳಿ ಯಾರೋ ನಾಲ್ಕು ಜನ 'ಡಿ ಬಾಸ್' ಅಂತಾರೆ: ದರ್ಶನ್ ವಿರುದ್ಧ ಸಿಎಂ ವಾಗ್ದಾಳಿ

    ನಿಖಿಲ್ ಏನು ಹೇಳಿದ್ದರು?

    ನಿಖಿಲ್ ಏನು ಹೇಳಿದ್ದರು?

    ಮಂಡ್ಯದ ಹುಡುಗಿಯನ್ನ ಮದುವೆ ಆಗ್ತೀರಂತೆ ಹೌದಾ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ 'ನಮ್ಮ ಮನೆಯಲ್ಲಿ ಹುಡುಗಿ ನೋಡುತ್ತಿದ್ದಾರೆ. ಮಂಡ್ಯದಲ್ಲೇ ಹುಡುಗಿ ಸಿಕ್ಕರೇ ಮಂಡ್ಯ ಅಳಿಯ ಆಗಬಹುದು' ಎಂದಿದ್ದರು. ಈ ಮಾತಿಗೆ ಅಭಿಷೇಕ್ ಪರೋಕ್ಷವಾಗಿ ಕಾಲೆಳೆದಿದ್ದಾರೆ.

    'ಡಿ ಬಾಸ್ ಯಾರು' ಎಂದು ಕೇಳಿದ್ದ ಸಿಎಂಗೆ ದರ್ಶನ್ ಪ್ರತಿಕ್ರಿಯೆ'ಡಿ ಬಾಸ್ ಯಾರು' ಎಂದು ಕೇಳಿದ್ದ ಸಿಎಂಗೆ ದರ್ಶನ್ ಪ್ರತಿಕ್ರಿಯೆ

    ಯಾರು ನಾಟಕ ಮಾಡ್ತಿದ್ದಾರೆ ಅಂತ ಗೊತ್ತಿದೆ

    ಯಾರು ನಾಟಕ ಮಾಡ್ತಿದ್ದಾರೆ ಅಂತ ಗೊತ್ತಿದೆ

    ಇನ್ನು ಅಭಿಷೇಕ್ ಅವರ ಈ ಹೇಳಿಕೆಗೆ ನಿಖಿಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. 'ಯಾರು ನಾಟಕ ಮಾಡ್ತಿದ್ದಾರೆ ಅಂತ ಮಂಡ್ಯ ಜಿಲ್ಲೆಯ ಜನ ನೋಡ್ತಿದ್ದಾರೆ. ಫಲಿತಾಂಶದ ದಿನ ಉತ್ತರ ಕೊಡ್ತಾರೆ' ಬಿಡಿ ಎಂದು ಎಲ್ಲದಕ್ಕೂ ಅಂದೇ ಉತ್ತರ ಎಂದರು.

    English summary
    Talk fight between jds candidate nikhil kumar and ambarish son abhishek in Mandya election campaign.
    Friday, March 29, 2019, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X