twitter
    For Quick Alerts
    ALLOW NOTIFICATIONS  
    For Daily Alerts

    ನಿಖಿಲ್ ರಾಜಕೀಯಕ್ಕೆ ಬರ್ತಾರಾ.? ಎಲ್ಲದಕ್ಕೂ ಉತ್ತರ ಕೊಟ್ಟ ಯುವರಾಜ

    |

    Recommended Video

    ರಾಜಕೀಯಕ್ಕೆ ಬರುವುದರ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ | Filmibeat Kannada

    ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅವರು ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತು ಹಲವು ದಿನಗಳಿಂದ ಚರ್ಚೆಯಾಗ್ತಿದೆ. ಈ ಬಗ್ಗೆ ಈಗ ಸ್ವತಃ ನಿಖಿಲ್ ಅವರೇ ಸ್ಪಷ್ಟಪಡಿಸಿದ್ದಾರೆ.

    ''ರಾಜಕೀಯಕ್ಕೆ ಬರುವ ಬಗ್ಗೆ ಈಗಲೇ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದ್ರೆ, ಪಕ್ಷದವರು, ಹಿರಿಯರು ಹೇಳಿದ್ರೆ ಅವರ ಮಾತಿಗೆ ಗೌರವ ಕೊಡುತ್ತೇನೆ'' ಎಂದು ಹೇಳುವ ಮೂಲಕ ಮುಂದಿನ ದಿನದಲ್ಲಿ ರಾಜಕೀಯಕ್ಕೆ ಬರುವ ಬಗ್ಗೆ ಸುಳಿವು ನೀಡಿದ್ದಾರೆ.

    ಗಣೇಶ ಹಬ್ಬದ ಪ್ರಯುಕ್ತ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿದ ನಿಖಿಲ್ ಈ ಬಗ್ಗೆ ಮುಕ್ತವಾಗಿ ಮಾತನಾಡಿದರು. ''ನನ್ನ ಮೇಲೆ ಭಾರಿ ಒತ್ತಡ ಇದೆ. ನಮ್ಮ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ನೀವು ನಿಲ್ಲಲೇಬೇಕು ಅಂತಿದ್ದಾರೆ. ಅವರ ಮಾತನ್ನ ಗೌರವಿಸುತ್ತೇನೆ. ಲೋಕಸಭೆ ಚುನಾವಣೆಗೆ ಇನ್ನು ಸಮಯ ಇದೆ. ಕಾದುನೋಡೋಣ'' ಎಂದರು.

    Nikhil Kumar gives clarification about political

    ತಾತ, ತಂದೆಯ ಹಾದಿಯಲ್ಲಿ ರಾಜಕಾರಣಕ್ಕೆ 'ಅಭಿಮನ್ಯು' ನಿಖಿಲ್ತಾತ, ತಂದೆಯ ಹಾದಿಯಲ್ಲಿ ರಾಜಕಾರಣಕ್ಕೆ 'ಅಭಿಮನ್ಯು' ನಿಖಿಲ್

    ಇನ್ನು ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡ ಅವರು ಏನಂತಾರೆ ಎನ್ನುವುದಕ್ಕೆ ಉತ್ತರಿಸಿದ ನಿಖಿಲ್ ''ನಮ್ಮ ತಂದೆ, ನಮ್ಮ ತಾತ ಅಥವಾ ನಮ್ಮ ಪಕ್ಷದವರು ಯಾರೇ ಹೇಳಿದ್ರು ಅವರ ಮಾತಿಗೆ ಗೌರವ ಕೊಡ್ತೀನಿ. ಆಗ ಯೋಚನೆ ಮಾಡ್ತೀನಿ'' ಎಂದು ಖಚಿತಪಡಿಸಿದ್ದಾರೆ.

    ರಾಮನಗರ ಬೈ ಎಲೆಕ್ಷನ್: ನಿಖಿಲ್ ಕುಮಾರ್ ಜೆಡಿಎಸ್ ಅಭ್ಯರ್ಥಿ.!ರಾಮನಗರ ಬೈ ಎಲೆಕ್ಷನ್: ನಿಖಿಲ್ ಕುಮಾರ್ ಜೆಡಿಎಸ್ ಅಭ್ಯರ್ಥಿ.!

    ಇನ್ನು ಸಿನಿಮಾನಾ ಅಥವಾ ರಾಜಕೀಯನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಖಿಲ್ ''ನನ್ನ ವ್ಯಕ್ತಿತ್ವವನ್ನ ರೂಪಿಸಿಕೊಳ್ಳುವುದಕ್ಕೆ ನಾನು ಸಿನಿಮಾ ಮಾಡ್ತಿದ್ದೀನಿ. ನನಗೆ ಅದೊಂದು ಫ್ಯಾಶನ್. ಸಮಯ, ಸಂದರ್ಭ ನಾನು ಸ್ಪರ್ಧೆ ಮಾಡಬೇಕು ಎಂದು ಸನ್ನಿವೇಶ ಬಂದಾಗ ಯೋಚನೆ ಮಾಡ್ತೀನಿ'' ಎಂದು ಎಲ್ಲ ಅಂತೆ ಕಂತೆಗಳಿಗೂ ತೆರೆ ಎಳೆದಿದ್ದಾರೆ.

    English summary
    Kannada actor nikhil kumaraswamy gives clarification about lok sabha Election 2018.
    Thursday, September 13, 2018, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X