Don't Miss!
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಖಿಲ್ ರಾಜಕೀಯಕ್ಕೆ ಬರ್ತಾರಾ.? ಎಲ್ಲದಕ್ಕೂ ಉತ್ತರ ಕೊಟ್ಟ ಯುವರಾಜ
Recommended Video
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅವರು ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತು ಹಲವು ದಿನಗಳಿಂದ ಚರ್ಚೆಯಾಗ್ತಿದೆ. ಈ ಬಗ್ಗೆ ಈಗ ಸ್ವತಃ ನಿಖಿಲ್ ಅವರೇ ಸ್ಪಷ್ಟಪಡಿಸಿದ್ದಾರೆ.
''ರಾಜಕೀಯಕ್ಕೆ ಬರುವ ಬಗ್ಗೆ ಈಗಲೇ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದ್ರೆ, ಪಕ್ಷದವರು, ಹಿರಿಯರು ಹೇಳಿದ್ರೆ ಅವರ ಮಾತಿಗೆ ಗೌರವ ಕೊಡುತ್ತೇನೆ'' ಎಂದು ಹೇಳುವ ಮೂಲಕ ಮುಂದಿನ ದಿನದಲ್ಲಿ ರಾಜಕೀಯಕ್ಕೆ ಬರುವ ಬಗ್ಗೆ ಸುಳಿವು ನೀಡಿದ್ದಾರೆ.
ಗಣೇಶ ಹಬ್ಬದ ಪ್ರಯುಕ್ತ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿದ ನಿಖಿಲ್ ಈ ಬಗ್ಗೆ ಮುಕ್ತವಾಗಿ ಮಾತನಾಡಿದರು. ''ನನ್ನ ಮೇಲೆ ಭಾರಿ ಒತ್ತಡ ಇದೆ. ನಮ್ಮ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ನೀವು ನಿಲ್ಲಲೇಬೇಕು ಅಂತಿದ್ದಾರೆ. ಅವರ ಮಾತನ್ನ ಗೌರವಿಸುತ್ತೇನೆ. ಲೋಕಸಭೆ ಚುನಾವಣೆಗೆ ಇನ್ನು ಸಮಯ ಇದೆ. ಕಾದುನೋಡೋಣ'' ಎಂದರು.
ತಾತ, ತಂದೆಯ ಹಾದಿಯಲ್ಲಿ ರಾಜಕಾರಣಕ್ಕೆ 'ಅಭಿಮನ್ಯು' ನಿಖಿಲ್
ಇನ್ನು ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡ ಅವರು ಏನಂತಾರೆ ಎನ್ನುವುದಕ್ಕೆ ಉತ್ತರಿಸಿದ ನಿಖಿಲ್ ''ನಮ್ಮ ತಂದೆ, ನಮ್ಮ ತಾತ ಅಥವಾ ನಮ್ಮ ಪಕ್ಷದವರು ಯಾರೇ ಹೇಳಿದ್ರು ಅವರ ಮಾತಿಗೆ ಗೌರವ ಕೊಡ್ತೀನಿ. ಆಗ ಯೋಚನೆ ಮಾಡ್ತೀನಿ'' ಎಂದು ಖಚಿತಪಡಿಸಿದ್ದಾರೆ.
ರಾಮನಗರ ಬೈ ಎಲೆಕ್ಷನ್: ನಿಖಿಲ್ ಕುಮಾರ್ ಜೆಡಿಎಸ್ ಅಭ್ಯರ್ಥಿ.!
ಇನ್ನು ಸಿನಿಮಾನಾ ಅಥವಾ ರಾಜಕೀಯನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಖಿಲ್ ''ನನ್ನ ವ್ಯಕ್ತಿತ್ವವನ್ನ ರೂಪಿಸಿಕೊಳ್ಳುವುದಕ್ಕೆ ನಾನು ಸಿನಿಮಾ ಮಾಡ್ತಿದ್ದೀನಿ. ನನಗೆ ಅದೊಂದು ಫ್ಯಾಶನ್. ಸಮಯ, ಸಂದರ್ಭ ನಾನು ಸ್ಪರ್ಧೆ ಮಾಡಬೇಕು ಎಂದು ಸನ್ನಿವೇಶ ಬಂದಾಗ ಯೋಚನೆ ಮಾಡ್ತೀನಿ'' ಎಂದು ಎಲ್ಲ ಅಂತೆ ಕಂತೆಗಳಿಗೂ ತೆರೆ ಎಳೆದಿದ್ದಾರೆ.