ಹಸುವಿನ ಕರುಗೆ ನಿಖಿಲ್ ಎಂದು ಹೆಸರಿಟ್ಟ ಮಂಡ್ಯ ರೈತ
Recommended Video

ರಾಜ್ಯ ರಾಜಕಾರಣದಲ್ಲಿ ಬಹಳ ಕುತೂಹಲ ಮೂಡಿಸಿರುವ ಮಂಡ್ಯ ಅಭ್ಯರ್ಥಿ ಸಿಎಂ ಪುತ್ರ ನಿಖಿಲ್ ಹೆಸರು ಈಗ ಎಲ್ಲೆಲ್ಲೂ ಚರ್ಚೆಯಾಗ್ತಿದೆ. ನಿಖಿಲ್ ಎಲ್ಲಿದ್ದೀಯಪ್ಪ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಟೈಟಲ್ ಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ದೇಶಕ, ನಿರ್ಮಾಪಕರು ಮುಗಿಬಿದ್ದಿದ್ದಾರಂತೆ.
ಇದೀಗ, ಎಚ್.ಡಿ ಕುಮಾರಸ್ವಾಮಿ ಅವರ ಅಭಿಮಾನಿಯೊಬ್ಬರು ತಮ್ಮ ಕರುವಿಗೆ ನಿಖಿಲ್ ಎಂದು ಹೆಸರಿಟ್ಟಿದ್ದಾರೆ. ಮಂಡ್ಯದ ಕೆ.ಆರ್.ಎಸ್ ಬಳಿಯಿರುವ ಉಂಡುವಾಡಿ ಗ್ರಾಮದ ರಾಜು ಎಂಬ ರೈತ, ತಮ್ಮ ಬಳಿಯಿರುವ ಕರುವಿಗೆ ನಿಖಿಲ್ ಕುಮಾರಸ್ವಾಮಿ ಎಂದು ನಾಮಕರಣ ಮಾಡಿದ್ದಾರೆ.
ಇಂದು ಮಂಡ್ಯ ಪ್ರಚಾರದಲ್ಲಿ ಭಾಗಿಯಾಗಲು ಆಗಮಿಸಿದ ಸಿಎಂ ಕುಮಾರಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ನಂತರ ಗೋವು ಪೂಜೆ ಮಾಡಲಿದ್ದು, ಈ ವೇಳೆ ಕರುವಿಗೆ ನಿಖಿಲ್ ಎಂದು ಹೆಸರಿಡಲಿದ್ದಾರೆ ಎಂದು ಸ್ವತಃ ರೈತ ಮಂಜು ಮಾಹಿತಿ ನೀಡಿದ್ದರು.

ಅಂದ್ಹಾಗೆ, ರಾಜು ಎಂಬುವರು ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡ ಅವರ ಅಪ್ಪಟ ಅಭಿಮಾನಿ. ಈಗ ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಸ್ಪರ್ಧಿಸಿದ್ದು, ಖಂಡಿತವಾಗಿ ಗೆಲ್ಲುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











