Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳ್ಳಿ ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದ ನಿಖಿಲ್ ಕುಮಾರ್
Recommended Video
ಸಿನಿಮಾ ಶೂಟಿಂಗ್ ನಲ್ಲಿ ತೊಡಗಿರುವ ನಟರಿಗೆ ಬಿಡುವು ಸಿಗುವುದೇ ಕಷ್ಟ. ಹಾಗೆನಾದರೂ ಚಿತ್ರೀಕರಣದ ಮಧ್ಯೆ ಬಿಡುವು ಸಿಕ್ಕರೆ ಅನೇಕ ನಟರು ಕ್ರಿಕೆಟ್ ಆಡುತ್ತಾರೆ. ಈಗ ನಿಖಿಲ್ ಕೂಡ ಶೂಟಿಂಗ್ ನಡುವೆ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದಾರೆ.
ನಿಖಿಲ್ ಸದ್ಯ ತಮ್ಮ 'ಸೀತಾರಾಮ ಕಲ್ಯಾಣ' ಚಿತ್ರದ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ. ಈ ಸಿನಿಮಾದ ಆಕ್ಷನ್ ಸನ್ನಿವೇಷದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ವೇಳೆ ಮೈಸೂರಿನ ನಾರ್ತ್ ಬ್ಯಾಂಕ್ ಪಕ್ಕದ ಹಳ್ಳಿಯ ಮಕ್ಕಳ ಜೊತೆಗೆ ಸೇರಿ ನಿಖಿಲ್ ಕ್ರಿಕೆಟ್ ಆಡಿದ್ದಾರೆ. ಮಕ್ಕಳ ಜೊತೆಗೆ ಸೇರಿ ಕೆಲ ಕಾಲ ಅವರು ಮಕ್ಕಳಾಗಿದ್ದಾರೆ.
ಗದ್ದೆಗಿಳಿದು ಕುಸ್ತಿ ಮಾಡಿದ ಗೌಡ್ರು ಮೊಮ್ಮಗ ನಿಖಿಲ್
ಅಂದಹಾಗೆ, ನಿಖಿಲ್ ಕ್ರಿಕೆಟ್ ಆಡಿರುವ ವಿಡಿಯೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು 'ಸೀತಾರಾಮ ಕಲ್ಯಾಣ' ಚಿತ್ರದ ಶೂಟಿಂಗ್ ಅನೇಕ ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿದೆ. ನಾಯಕನ ಎಂಟ್ರಿ ಸೀನ್ ಅದ್ದೂರಿಯಾಗಿ ಹಾಗೂ ನೆಟೆವಿಟಿಗೆ ತಕ್ಕಂತೆ ಇರಲಿ ಎನ್ನುವ ಕಾರಣದಿಂದ ಗದ್ದೆಯ ಮಧ್ಯೆ ಸಾಹಸ ದೃಶ್ಯವನ್ನು ಚಿತ್ರೀಕರಿಸಿದೆ.
ಸೀತಾರಾಮ ಕಲ್ಯಾಣ ಚಿತ್ರದ ಆ್ಯಕ್ಷನ್ ಎಪಿಸೋಡ್ ಮೈಸೂರಿನ ನಾರ್ತ್ ಬ್ಯಾಂಕ್ ಪಕ್ಕದ ಹಳ್ಳಿಯಲ್ಲಿ ನಡೆಯುತ್ತಿದ್ದು, ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ನಾಯಕ ನಿಖಿಲ್ ಕುಮಾರ್ ಹಳ್ಳಿಯ ಮಕ್ಕಳ ಜೊತೆ ಸೇರಿ ಕ್ರಿಕೆಟ್ ಆಡಿದ ಸನ್ನಿವೇಶ . @iamNikhilGowda #seetharamakalyana pic.twitter.com/BDv35j3Gwf
— Kannada Filmibeat (@FilmibeatKa) June 8, 2018
ಅಂದಹಾಗೆ, 'ಸೀತಾರಾಮ ಕಲ್ಯಾಣ' ಚಿತ್ರವನ್ನು ನಿಖಿಲ್ ತಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ. ಹರ್ಷ ನಿರ್ದೇಶನ ಸಿನಿಮಾಗೆ ಇದ್ದು, ನಿಖಿಲ್ ಗೆ ಜೊತೆಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.