twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆ

    |

    Recommended Video

    ದರ್ಶನ್ ಅಬ್ಬರದ ಪ್ರಚಾರದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ..!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಪ್ರಚಾರ ಸುಮಾರು 28 ಹಳ್ಳಿಗಳಲ್ಲಿ ಸಂಜೆ 6 ಗಂಟೆವರೆಗೂ ನಡೆಯಲಿದೆ.

    'ದಾಸ' ಹೋದ ಕಡೆಯಲೆಲ್ಲಾ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ಅಂಬರೀಶ್ ಮೇಲಿನ ಅಭಿಮಾನವನ್ನ ಸುಮಲತಾ ಮೇಲೆ ತೋರಿಸಿ, ನಿಮ್ಮ ಜೊತೆ ಅವರು ಇರ್ತಾರೆ. ಫಲಿತಾಂಶದ ಮೂಲಕ ನಿಮ್ಮ ಉತ್ತರ ನೀಡಬೇಕು' ಎಂದು ಮತಯಾಚನೆ ಮಾಡುತ್ತಿದ್ದಾರೆ.

    ದರ್ಶನ್-ಯಶ್ ಪ್ರಚಾರಕ್ಕೆ ಮಾಸ್ಟರ್ ಪ್ಲಾನ್ ಮಾಡಿರುವ ಸುಮಲತಾದರ್ಶನ್-ಯಶ್ ಪ್ರಚಾರಕ್ಕೆ ಮಾಸ್ಟರ್ ಪ್ಲಾನ್ ಮಾಡಿರುವ ಸುಮಲತಾ

    ಮತ್ತೊಂದೆಡೆ ಮಂಡ್ಯದಲ್ಲೇ ಬೀಡುಬಿಟ್ಟಿರುವ ಮೈತ್ರಿ ಅಭ್ಯರ್ಥಿ ನಟ ನಿಖಿಲ್ ಕುಮಾರ್ ದರ್ಶನ್ ಅವರ ಪ್ರಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಡಿ ಬಾಸ್ ಅಬ್ಬರ ಪ್ರಚಾರ ಶುರು ಮಾಡಿದ್ದಾರೆ, ನೀವೇನು ಹೇಳ್ತೀರಾ ಎಂದು ಕೇಳಿದ್ದಕ್ಕೆ ತಮ್ಮದೇ ಸ್ಟೈಲ್ ನಲ್ಲಿ ಸಿಎಂ ಪುತ್ರ ಉತ್ತರಿಸಿದ್ದಾರೆ. ಅಷ್ಟಕ್ಕೂ, ನಿಖಿಲ್ ಏನಂದ್ರು? ಮುಂದೆ ಓದಿ....

    ದರ್ಶನ್ ಅವರಿಗೆ ಒಳ್ಳೆಯದಾಗಲಿ

    ದರ್ಶನ್ ಅವರಿಗೆ ಒಳ್ಳೆಯದಾಗಲಿ

    ಸುಮಲತಾ ಪರ ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಮೈತ್ರಿ ಅಭ್ಯರ್ಥಿ ನಟ ನಿಖಿಲ್ ಕುಮಾರ್ ಮಾತನಾಡಿದ್ದು, 'ದರ್ಶನ್ ಪ್ರಚಾರಕ್ಕೆ ಬಂದಿದ್ದಾರೆ...ಅವರಿಗೆ ಒಳ್ಳೆಯದಾಗಲಿ' ಎಂದು ಕೂಲ್ ಆಗಿ ಪ್ರತಿಕ್ರಿಯಿಸಿದ್ದಾರೆ.

    'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!

    ನಮ್ಮ ಸ್ಟಾರ್ ಕುಮಾರಣ್ಣ

    ನಮ್ಮ ಸ್ಟಾರ್ ಕುಮಾರಣ್ಣ

    ಸಿನಿಮಾ ಇಂಡಸ್ಟ್ರಿಯಲ್ಲಿ ನಿಖಿಲ್ ಪರ ಯಾರಾದರೂ ಕಲಾವಿದರು ಪ್ರಚಾರಕ್ಕೆ ಬರ್ತಾರಾ ಎಂದು ಕೇಳಿದ್ದಕ್ಕೆ, ''ನಮ್ಮ ಸ್ಟಾರ್ ಕುಮಾರಣ್ಣ. ನನಗೆ ಯಾರನ್ನ ದುರಪಯೋಗ ಪಡಿಸಿಕೊಳ್ಳಲು ಇಷ್ಟವಿಲ್ಲ. ಒಂದು ವೇಳೆ ಯಾರಾದರೂ ಬಂದರೇ ಸ್ವಾಗತಿಸುತ್ತೇನೆ'' ಎಂದು ತಿಳಿಸಿದರು.

    ಇಂಡಸ್ಟ್ರಿಯಲ್ಲಿ ಚೆನ್ನಾಗಿರಬೇಕು

    ಇಂಡಸ್ಟ್ರಿಯಲ್ಲಿ ಚೆನ್ನಾಗಿರಬೇಕು

    'ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರ ಬಳಿಯೂ ಚೆನ್ನಾಗಿದ್ದೇನೆ, ಮುಂದೆಯೂ ಚೆನ್ನಾಗಿರಲು ಬಯಸುತ್ತೇನೆ' ಎಂದು ಹೇಳುವ ಮೂಲಕ ದರ್ಶನ್ ಪ್ರಚಾರದ ಬಗ್ಗೆ ಸಮಾಧಾನವಾಗಿ ಉತ್ತರಿಸಿದ್ದಾರೆ. ಒಂದು ಕಡೆ ದರ್ಶನ್ ಸುಮಲತಾ ಪರ ಪ್ರಚಾರ ಮಾಡ್ತಿದ್ರೆ, ಮತ್ತೊಂದೆಡೆ ನಿಖಿಲ್ ಪರ ಸಿಎಂ ಅಖಾಡಕ್ಕಿಳಿಯಲಿದ್ದಾರೆ.

    ಮಂಡ್ಯದಲ್ಲಿ ಸುಮಲತಾ ಪರ ರಣಕಹಳೆ ಊದಿದ ದರ್ಶನ್ಮಂಡ್ಯದಲ್ಲಿ ಸುಮಲತಾ ಪರ ರಣಕಹಳೆ ಊದಿದ ದರ್ಶನ್

    ನಾಳೆ ರಾಕಿಂಗ್ ಸ್ಟಾರ್ ಎಂಟ್ರಿ

    ನಾಳೆ ರಾಕಿಂಗ್ ಸ್ಟಾರ್ ಎಂಟ್ರಿ

    ದರ್ಶನ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಕೂಡ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡಲಿದ್ದು, ನಾಳೆ ಯಶ್ ಪ್ರಚಾರಕ್ಕೆ ಧುಮುಕಲಿದ್ದಾರೆ. ದರ್ಶನ್-ಯಶ್ ಇಬ್ಬರು ಸೇರಿ 16ನೇ ತಾರೀಖಿನ ವರೆಗೂ ಪ್ಲಾನ್ ಮಾಡಿ ಪ್ರಚಾರ ಮಾಡುತ್ತಿದ್ದು, ಹೇಗಾದರೂ ಅಂಬಿ ಪತ್ನಿಯನ್ನ ಗೆಲ್ಲಿಸಲೇ ಬೇಕು ಎಂದು ನಿರ್ಧರಿಸಿದ್ದಾರೆ.

    ಯಾರೋ ನಾಲ್ಕು ಜನ 'ಡಿ ಬಾಸ್' ಅಂತಾರೆ: ದರ್ಶನ್ ವಿರುದ್ಧ ಸಿಎಂ ವಾಗ್ದಾಳಿಯಾರೋ ನಾಲ್ಕು ಜನ 'ಡಿ ಬಾಸ್' ಅಂತಾರೆ: ದರ್ಶನ್ ವಿರುದ್ಧ ಸಿಎಂ ವಾಗ್ದಾಳಿ

    English summary
    Challenging star darshan starts campaigning for sumalatha in mandya today. so, nikhil kumar has react about darshan campaign.
    Monday, April 1, 2019, 14:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X