Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೆ ಕಂತೆಗಳಿಗೆ ತೆರೆ ಎಳೆದ ನಿಖಿಲ್ ಕುಮಾರ್
Recommended Video
ನಿಖಿಲ್ ಕುಮಾರ್ ಸದ್ಯ 'ಸೀತಾ ರಾಮ ಕಲ್ಯಾಣ' ಸಿನಿಮಾದಲ್ಲಿ ಬ್ಯುಸಿ ಆಗಿರುವ ನಾಯಕ ನಟ. ಇತ್ತೀಚಿಗಷ್ಟೆ 'ಸೀತಾ ರಾಮ ಕಲ್ಯಾಣ' ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಒಂದೇ ದಿನದಲ್ಲೇ ಕನ್ನಡ ಸಿನಿಮಾರಂಗದಲ್ಲಿ ಈ ಹಿಂದೆ ಇದ್ದ ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡ್ತು. ಅಷ್ಟೇ ವೇಗವಾಗಿ ಸಿನಿಮಾ ಅಲ್ಲು ಅರ್ಜುನ್ ಅಭಿನಯದ 'ಸರೈ ನೋಡು' ಚಿತ್ರದ ರೀಮೇಕ್ ಎಂದು ಸುದ್ದಿಯೂ ಆಯ್ತು.
ಈ ಹಿಂದೆಯಿಂದಲೂ 'ಸೀತಾ ರಾಮ ಕಲ್ಯಾಣ' ಚಿತ್ರ ರಿಮೇಕ್ ಅಲ್ಲ ಅಂತ ಚಿತ್ರತಂಡ ಹೇಳಿದ್ದು ಸುಳ್ಳಾ ಅಂತ ಜನರು ಪ್ರಶ್ನೆ ಮಾಡಲು ಮುಂದಾದರು. ಆದರೆ 'ಸೀತಾ ರಾಮ ಕಲ್ಯಾಣ' ಸಿನಿಮಾ ಬಗ್ಗೆ ಗಾಂಧಿನಗರದ ತುಂಬಾ ಹಬ್ಬಿಕೊಂಡಿದ್ದ ಅಂತೆ ಕಂತೆಗಳಿಗೆ ನಿಖಿಲ್ ಕುಮಾರ್ ತೆರೆ ಎಳೆದಿದ್ದಾರೆ.
"ರೀಮೇಕ್ ಸಿನಿಮಾ ಮಾಡುವ ಅವಶ್ಯಕತೆ ನನಗೆ ಇನ್ನೂ ಬಂದಿಲ್ಲ. ನಾನು ರೀಮೇಕ್ ಚಿತ್ರದಲ್ಲಿ ಅಭಿನಯ ಮಾಡುವುದಿಲ್ಲ. ಈ ಹಿಂದೆ ಹೇಳಿದ ರೀತಿಯಲ್ಲಿ 'ಸೀತಾ ರಾಮ ಕಲ್ಯಾಣ' ಪಕ್ಕಾ ಸ್ವಮೇಕ್ ಸಿನಿಮಾ".
ಕ್ಲೈಮ್ಯಾಕ್ಸ್ ಹಂತದಲ್ಲಿ 'ಸೀತಾ ರಾಮ ಕಲ್ಯಾಣ' ಚಿತ್ರೀಕರಣ
'ಸರೈನೋಡು' ಸಿನಿಮಾದ ಸಾಹಸ ದೃಶ್ಯಗಳನ್ನು ರಾಮ ಲಕ್ಷಣ ನಿರ್ದೇಶನ ಮಾಡಿದ್ದರು. ಸೀತಾ ರಾಮ ಕಲ್ಯಾಣ ಚಿತ್ರಕ್ಕೂ ಅವರೇ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ ಇದೇ ಕಾರಣದಿಂದ ಎರಡು ಒಂದೇ ರೀತಿ ಎನ್ನಿಸುತ್ತಿದೆ". ಎಂದಿದ್ದಾರೆ ನಿಖಿಲ್.