Don't Miss!
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುನಿರತ್ನ ಜೊತೆ ಕುರುಕ್ಷೇತ್ರ ನೋಡಿದ ನಿಖಿಲ್ ಕುಮಾರ್
ಕುರುಕ್ಷೇತ್ರ ಚಿತ್ರ ಆಗಸ್ಟ 9 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ರಿಲೀಸ್ ಆಗುವುದಕ್ಕೆ ಒಂದು ಮೊದಲೇ ಯುಎಸ್ ನಲ್ಲಿ ಪ್ರೀಮಿಯರ್ ಕಾಣ್ತಿದೆ. ಆ ಪ್ರೀಮಿಯರ್ ಗು ಮೊದಲೇ ಕುರುಕ್ಷೇತ್ರವನ್ನ ಕೆಲವರು ಕಣ್ತುಂಬಿಕೊಂಡಿದ್ದಾರೆ.
ಹೌದು, ಡಿ-ಬಾಸ್ ದರ್ಶನ್ ತನ್ನ ಕುಟುಂಬದ ಜೊತೆ ಕುರುಕ್ಷೇತ್ರ ಸಿನಿಮಾ ನೋಡಿದ್ದಾರೆ. ಬರಿ ದರ್ಶನ್ ಮಾತ್ರವಲ್ಲ, ಅಭಿಮನ್ಯು ಪಾತ್ರ ನಿರ್ವಹಿಸಿರುವ ನಿಖಿಲ್ ಕುಮಾರ್ ಕೂಡ ಕುರುಕ್ಷೇತ್ರ ವೀಕ್ಷಿಸಿದ್ದಾರೆ.
'ಮುನಿರತ್ನ ಕುರುಕ್ಷೇತ್ರ' ನೋಡುವುದಕ್ಕೆ 10 ಕಾರಣಗಳು
ಕಳೆದ ರಾತ್ರಿ ಕುರುಕ್ಷೇತ್ರ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ದರ್ಶನ್ ಮತ್ತು ನಿಖಿಲ್ ಒಟ್ಟಿಗೆ ಸಿನಿಮಾ ನೋಡಿದ್ರಾ ಅಥವಾ ದರ್ಶನ್ ಪ್ರತ್ಯೇಕವಾಗಿ ನಿಖಿಲ್ ಪ್ರತ್ಯೇಕವಾಗಿ ಸಿನಿಮಾ ನೋಡಿದ್ರಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಆದರೆ, ಈ ಇಬ್ಬರು ಕಳೆದ ರಾತ್ರಿ ಕುರುಕ್ಷೇತ್ರ ನೋಡಿರುವುದಂತೂ ನಿಜ. ಸಿನಿಮಾ ವೀಕ್ಷಣೆ ಬಳಿಕ ಮುನಿರತ್ನ ಮತ್ತು ನಿಖಿಲ್ ಕುಮಾರ್ ಇಬ್ಬರು ಮಾಧ್ಯಮದವರು ಜೊತೆ ಮಾತನಾಡಿದ್ದಾರೆ. ತೆರೆಮೇಲೆ ಸಿನಿಮಾ ನೋಡಿದ ಬಳಿಕ ಕಲಾವಿದರ ಅಭಿನಯ, ಹಾಗೂ ಮೇಕಿಂಗ್ ಬಗ್ಗೆ ಬಹಳ ಖುಷಿ ವ್ಯಕ್ತಪಡಿಸಿದ್ದಾರೆ.
ವಿದೇಶದಲ್ಲಿ ಒಂದು ದಿನ ಮುಂಚಿತವಾಗಿ 'ಕುರುಕ್ಷೇತ್ರ' ಯುದ್ಧ
ನಾಗಣ್ಣ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದರ್ಶನ್-ದುರ್ಯೋಧನ, ಅರ್ಜುನ್ ಸರ್ಜಾ-ಕಣ್ಣ, ರವಿಚಂದ್ರನ್-ಕೃಷ್ಣ, ಅಂಬರೀಶ್-ಭೀಷ್ಮ, ಸೋನು ಸೂದ್-ಅರ್ಜುನ, ಡ್ಯಾನಿಶ್-ಭೀಮ, ನಿಖಿಲ್ ಕುಮಾರ್-ಅಭಿಮನ್ಯು, ಸ್ನೇಹಾ-ದ್ರೌಪದಿ, ರವಿಶಂಕರ್-ಶಕುನಿ ಪಾತ್ರಗಳಲ್ಲಿ ನಟಿಸಿದ್ದಾರೆ.