twitter
    For Quick Alerts
    ALLOW NOTIFICATIONS  
    For Daily Alerts

    26/11 ಮುಂಬೈ ದಾಳಿ: ಹುತಾತ್ಮರನ್ನು ನೆನೆದ ನಿಖಿಲ್ ಕುಮಾರಸ್ವಾಮಿ

    |

    ರಾಷ್ಟ್ರವನ್ನೇ ಭೀತಿಗೊಳಿಸಿದ್ದ ಮುಂಬೈ ದಾಳಿ ನಡೆದು ಇಂದಿಗೆ 12 ವರ್ಷ. 2008 ರ ನವೆಂಬರ್ 26 ರಂದು ಮುಂಬೈನ ತಾಜ್ ಹೋಟೆಲ್, ನಾರಿಮನ್ ಪಾಯಿಂಟ್, ಶಿವಾಜಿ ಟರ್ಮಿನಲ್ ಇನ್ನೂ ಹಲವು ಕಡೆ ಉಗ್ರರು ದಾಳಿ ಮಾಡಿ ಹಲವರನ್ನು ಕೊಂದಿದ್ದರು.

    ಸಮುದ್ರ ಮಾರ್ಗದಿಂದ ಮುಂಬೈಗೆ ಬಂದಿದ್ದ 10 ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಟ 174 ಮಂದಿ ಅಸುನೀಗಿ, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

    ಮುಂಬೈನ ಕರಾಳ ದಾಳಿ 12 ವರ್ಷವಾದ ಸಂದರ್ಭದಲ್ಲಿ ನಾಡಿನ ಹಲವರು ಅಂದು ಅಗಲಿದ ಜೀವಗಳಿಗೆ, ಪೊಲೀಸರಿಗೆ ಗೌರವ ಸಮನ ಸಲ್ಲಿಸಿದ್ದಾರೆ. ಕನ್ನಡದ ಯುವ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸಹ 26/11 ದಾಳಿ ಹುತಾತ್ಮರಿಗೆ ಸಾಮಾಜಿಕ ಜಾಲತಾಣದಲ್ಲಿ ಗೌರವ ನಮನ ಸಲ್ಲಿಸಿದ್ದಾರೆ.

    Nikhil Kumaraswamy Remeberd 26/11 Mumbai Attack Martyrs

    '26/11 ರ ಮುಂಬೈ ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದಾಗ ಎದೆಗುಂದದೆ ಹೋರಾಡಿ ಹುತಾತ್ಮರಾದ ಎಲ್ಲಾ ಕೆಚ್ಚೆದೆಯ ವೀರ ಯೋಧರಿಗೆ ನನ್ನ ಗೌರವ ನಮನಗಳು.' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.

    Recommended Video

    ಭಾರಿ ಮೊಟ್ಟಕ್ಕೆ ಮಾರಾಟವಾಯ್ತು Pogaru Hindi ರೈಟ್ಸ್ | Dhruva Sarja | Filmibeat Kannada

    ಇದೇ ದಿನ (ನವೆಂಬರ್ 26) ಭಾರತ ಸಂವಿಧಾನ ದಿನವೂ ಆಗಿದ್ದು, ಸಂವಿಧಾನ ದಿನವಾದ ಇಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಸಂವಿಧಾನವನ್ನು ರಕ್ಷಿಸುವುದು ಮತ್ತು ಅನುಸರಿಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ ನಿಖಿಲ್.

    English summary
    Actor Nikhil Kumaraswamy remembered 26/11 Mumbai attack martyrs in twitter. He also wished for Constitution day.
    Thursday, November 26, 2020, 13:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X