Just In
Don't Miss!
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Automobiles
ಒಂದೇ ವರ್ಷದಲ್ಲಿ 20ಕ್ಕೂ ಹೆಚ್ಚು ಹೊಸ ಬೈಕ್ ಶೋರೂಂ ತೆರೆದ ಬೆನೆಲ್ಲಿ ಇಂಡಿಯಾ
- News
ದೆಹಲಿಯಲ್ಲಿ ಬರೋಬ್ಬರಿ 9 ತಿಂಗಳ ನಂತರ ನೂರರ ಕೆಳಗಿಳಿದ ಕೊರೊನಾ ಪ್ರಕರಣ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಂಡ್ಯದಲ್ಲಿ ಮತ್ತೆ ಸದ್ದು ಮಾಡಿದ 'ನಿಖಿಲ್ ಎಲ್ಲಿದ್ದೀಯಪ್ಪ'
ನಿಖಿಲ್ ಎಲ್ಲಿದ್ದೀಯಪ್ಪ....ಈ ಪದ ಎಷ್ಟರ ಮಟ್ಟಿಗೆ ಫೇಮಸ್ ಆಯ್ತು ಅಂದ್ರೆ ಬರಿ ಕರ್ನಾಟಕದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ, ವಿದೇಶಿಗರು ಈ ಡೈಲಾಗ್ ಹೊಡೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೌಡ್ ಮಾಡಿದ್ರು. ಇದರಿಂದ ನಿಖಿಲ್ ಕುಮಾರ್ ಜಗತ್ತಿನಾದ್ಯಂತ ಫೇಮಸ್ ಆದ್ರು ಅಂದ್ರೆ ನಂಬಲೇಬೇಕು.
ಅಂತೂ ಇಂತೂ ಮಂಡ್ಯ ಎಲೆಕ್ಷನ್ ಮುಗಿತು. ಈಗ ಫಲಿತಾಂಶಕ್ಕಾಗಿ ಇಬ್ಬರು ಅಭ್ಯರ್ಥಿಗಳು ಕಾದು ಕುಂತಿದ್ದಾರೆ. ಚುನಾವಣೆ ಮುಗಿದ ಮೇಲೆ ಮಂಡ್ಯದಲ್ಲಿ ಕಾಣಿಸಿಕೊಳ್ಳದ ನಿಖಿಲ್ ಇಂದು ಮಂಡ್ಯಕ್ಕೆ ಎಂಟ್ರಿ ಕೊಟ್ಟಿದ್ದರು.
ಮಂಡ್ಯದ ಕೆಆರ್ ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ 'ನಿಖಿಲ್ ಎಲ್ಲಿದ್ದೀಯಪ್ಪ' ಸಿನಿಮಾ ಬಗ್ಗೆಯೂ ಪ್ರಸ್ತಾಪ ಆಯಿತು.
ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು?
''ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಟೈಟಲ್ ಗಾಗಿ ಫಿಲಂ ಚೇಂಬರ್ ನಲ್ಲಿ ಮುಗಿಬಿದ್ದಿದ್ದಾರಂತೆ. ನಿಖಿಲ್ ಯಾರೂ ಅಂತ ಗೊತ್ತಿರಲಿಲ್ಲ. ನಮ್ಮ ವಿರೋಧಿಗಳು ಈಗ ವರ್ಲ್ಡ್ ಫೇಮಸ್ ಮಾಡಿದ್ದಾರೆ. ಸಿನಿಮಾ ಟೈಟಲ್ ಯಾರಿಗೂ ಕೊಡಲ್ಲ. ನಾವೇ ಮಾಡ್ತೀವಿ'' ಎಂದು ನಿಖಿಲ್ ಹೇಳಿಕೊಂಡರು.
ಇದೇ ವೇಳೆ ನಿಖಿಲ್ ಮಾತಿಗೆ ಮಾತು ಜೋಡಿಸಿದ ಸಚಿವ ಪುಟ್ಟರಾಜು ''ನಾನೇ ಸಿನಿಮಾ ನಿರ್ಮಾಣ ಮಾಡ್ತೀನಿ, ನಿಖಿಲ್ ಹೀರೋ'' ಎಂದು ಹೇಳಿದ್ರು. ಹೀಗಂತ ಗಂಭೀರವಾಗಿ ಹೇಳಿಲ್ಲ ಅಂದ್ರೂ ನಿಖಿಲ್ ಎಲ್ಲಿದ್ದೀಯಪ್ಪಗೆ ಹುಟ್ಟಿಕೊಂಡಿರುವ ಬೇಡಿಕೆಯಿಂದ ಯಾರಾದರೂ ಸಿನಿಮಾ ಮಾಡಬಹುದು ಎಂದು ಹೇಳಲಾಗ್ತಿದೆ.
ಸದ್ಯಕ್ಕೆ ಎಲ್ಲರ ಚಿತ್ರ ಮಂಡ್ಯದತ್ತ ಬೀರಿದೆ. ಫಲಿತಾಂಶದ ಬಳಿಕ ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ಗೆ ಜೀವ ಬರುತ್ತಾ, ಸಿನಿಮಾ ಆಗುತ್ತಾ ಕಾದುನೋಡೋಣ.