twitter
    For Quick Alerts
    ALLOW NOTIFICATIONS  
    For Daily Alerts

    ಎರಡುವರೆ ದಶಕದ ಬಳಿಕ ಮತ್ತೆ ಬಂದ ಕಮಾಂಡೋ ಅಜಯ್

    |

    ಒಂದು ಬ್ಯಾಂಕ್ ದರೋಡೆಯನ್ನು ಅಧ್ಬುತವಾಗಿ ತೆರೆ ಮೇಲೆ ತೋರಿಸಿದ್ದ ಸಿನಿಮಾ 'ನಿಷ್ಕರ್ಷ'. ಇಡೀ ಸಿನಿಮಾವನ್ನು ಒಂದು ಬ್ಯಾಂಕ್ ಕಟ್ಟಡದಲ್ಲಿ ಚಿತ್ರೀಕರಣ ಮಾಡಿ ಅಂದಿನ ಕಾಲಕ್ಕೆ ಬಹು ದೊಡ್ಡ ಸಾಹಸ ಮಾಡಿದ್ದರು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಕಮಾಂಡೋ ಅಜಯ್ ಆಗಿ ಕಾಣಿಸಿಕೊಂಡಿದ್ದರು.

    ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೋಲ್ಲ!ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೋಲ್ಲ!

    ಅಂದಹಾಗೆ, ಈಗ ಎರಡುವರೆ ದಶಕದ ಬಳಿಕ ಮತ್ತೆ ಕಮಾಂಡೋ ಅಜಯ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅರ್ಥಾತ್ 'ನಿಷ್ಕರ್ಷ' ಸಿನಿಮಾ 26 ವರ್ಷಗಳ ನಂತರ ಮತ್ತೆ ಬಿಡುಗಡೆ ಆಗುತ್ತಿದೆ. ಈ ವರ್ಷದ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಈ ಸಿನಿಮಾ ರಿ ರಿಲೀಸ್ ಆಗುತ್ತಿದೆ. ಡಿಜಿಟಲ್ ರೂಪದಲ್ಲಿ ಜಯಣ್ಣ ಬ್ಯಾನರ್ ನಲ್ಲಿ ಚಿತ್ರ ಸಪ್ಟೆಂಬರ್ 20ಕ್ಕೆ ಬಿಡುಗಡೆ ಆಗಲಿದೆ.

    ವಿಷ್ಣು - ಅಂಬಿ ಮಾಡಬೇಕಿದ್ದ ಈ ಸಿನಿಮಾ ಕನಸಾಗಿಯೇ ಉಳಿದಿದೆವಿಷ್ಣು - ಅಂಬಿ ಮಾಡಬೇಕಿದ್ದ ಈ ಸಿನಿಮಾ ಕನಸಾಗಿಯೇ ಉಳಿದಿದೆ

    ಸಪ್ಟೆಂಬರ್ 18 ರಂದು ವಿಷ್ಣು ಬರ್ತ್ ಡೇ ವಿಶೇಷವಾಗಿ ಆಗಾಗ ಅವರ ಹಳೆಯ ಸಿನಿಮಾಗಳು ಮರು ಬಿಡುಗಡೆ ಆಗುತ್ತಿರುತ್ತವೆ. ಆ ರೀತಿ ಈ ವರ್ಷ 'ನಿಷ್ಕರ್ಷ' ಚಿತ್ರದ ತೆರೆಗೆ ಬರುತ್ತಿದೆ. 'ನಿಷ್ಕರ್ಷ' ಸಿನಿಮಾ 1993ರಲ್ಲಿ ಬಿಡುಗಡೆ ಆಗಿತ್ತು. ವಿಷ್ಣು ಕೆರಿಯರ್ ನ ಬೆಸ್ಟ್ ಸಿನಿಮಾಗಳ ಪೈಕಿ ಇದು ಒಂದಾಗಿತ್ತು. ಜೊತೆಗೆ ಮೂರು ರಾಜ್ಯ ಪ್ರಶಸ್ತಿಗಳು ಚಿತ್ರಕ್ಕೆ ಸಿಕ್ಕವು.

    nishkarsha movie will be re releasing on the occasion of vishnuvardhans birthday

    ಸುನೀಲ್ ಕುಮಾರ್ ದೇಸಾಯಿ ತಮ್ಮ ಸ್ಟೈಲ್ ನಲ್ಲಿ ಥ್ರಿಲ್ಲರ್ ಕಥೆ ಹೇಳಿ ಗೆದ್ದಿದ್ದರು. ಅನಂತ್ ನಾಗ್, ಗುರುಕಿರಣ್, ಬಿಸಿ ಪಾಟೀಲ್, ಪ್ರಕಾಶ್ ರೈ, ಅವಿನಾಶ್, ರಮೇಶ್ ಭಟ್ ಸಿನಿಮಾದಲ್ಲಿ ನಟಿಸಿದ್ದರು.

    English summary
    'Nishkarsha' Kannada movie will be re-released on the occasion of 'Vishnuvardhan's birthday
    Wednesday, August 28, 2019, 10:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X