Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧನಂಜಯ್ 'ಪಾಪ್ ಕಾರ್ನ್' ಚಿತ್ರಕ್ಕೆ ಹೀರೋಯಿನ್ ಇವರೇ.!
Recommended Video
ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾದ ಸೂಪರ್ ಯಶಸ್ಸಿನ ನಂತರ 'ಡಾಲಿ' ಧನಂಜಯ್ ಜೊತೆಯಲ್ಲಿ ನಿರ್ದೇಶಕ ಸೂರಿ ಸಿನಿಮಾ ಮಾಡ್ತಿದ್ದಾರೆ ಎಂಬುದು ಗೊತ್ತಿರುವ ವಿಚಾರ.
ಈ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಹೆಸರಿಟ್ಟಿದ್ದು, ಧನಂಜಯ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಟೈಟಲ್ ತುಂಬಾ ವಿಶೇಷವಾಗಿದ್ದು, ಈ ಶೀರ್ಷಿಕೆ ನೋಡಿ ಸಿನಿ ಪ್ರೇಕ್ಷಕರು ಒಂದು ಕ್ಷಣ ಆಶ್ಚರ್ಯವಾಗಿರುವುದಂತೂ ಸುಳ್ಳಲ್ಲ.
ರಿವಿಲ್ ಆಯ್ತು ದುನಿಯಾ ಸೂರಿ-ಡಾಲಿ ಸಿನಿಮಾ ಟೈಟಲ್
ಯಾವ ರೀತಿ ಸಿನಿಮಾ ಇದು, ಈ ಟೈಟಲ್ ಯಾಕೆ ಇಟ್ಟಿದ್ರು.? ಧನಂಜಯ್ ಜೊತೆಯಲ್ಲಿ ನಟಿಸುವ ಹೀರೋಯಿನ್ ಯಾರು ಎಂದೆಲ್ಲ ಕುತೂಹಲ ಹುಟ್ಟಿಕೊಂಡಿವೆ. ಇದೀಗ, ಧನಂಜಯ್ ಗೆ ನಾಯಕಿ ಯಾರು ಎಂಬುದು ರಿವಿಲ್ ಆಗಿದೆ.? ಮುಂದೆ ಓದಿ.....
ಧನಂಜಯ್ ಗೆ ಜೋಡಿ ಇವರೇ
'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ ಶುದ್ಧಿ ಖ್ಯಾತಿಯ ನಿವೇದಿತಾ ಅಭಿನಯಿಸುತ್ತಿದ್ದಾರೆ. ದೇವಿಕಾ ಎಂದು ಪಾತ್ರವದಲ್ಲಿ ನಿವೇದಿತಾ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ನಿವೇದಿತಾ ಬಗ್ಗೆ....
ನಿವೇದಿತಾ ಕನ್ನಡದಲ್ಲಿ ಹಲವು ಸಿನಿಮಾಗಳನ್ನ ಮಾಡಿದ್ದಾರೆ. ಇದಕ್ಕೂ ಮುಂಚೆ ಇವರು ಹೆಸರು ಸ್ಮಿತಾ ಎಂದು ಪರಿಚಿತರು. 'ಅವ್ವ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿದೆ. 'ಡಿಸೆಂಬರ್ 1' ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಲಭಿಸಿದೆ. ಉಳಿದಂತೆ 'ಕಲ್ಲರಳಿ ಹೂವಾಗಿ', 'ಸಿಕ್ಸರ್', 'ಯಾರೇ ಕೂಗಾಡಲಿ', 'ಶುದ್ಧಿ' ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.
ಕಲಾವಿದರಿಗಾಗಿ ಹುಡುಕಾಟ
ಅಂದ್ಹಾಗೆ, 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ತಾರಬಳಗದಲ್ಲಿ ಖ್ಯಾತ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆಯಂತೆ. ವಿಶೇಷ ಅಂದ್ರೆ, ಇನ್ನೂ ಇಬ್ಬರು ನಟಿಯರು ಈ ಚಿತ್ರಕ್ಕಾಗಿ ಬೇಕಾಗಿದ್ದಾರಂತೆ. ಅವರನ್ನ ಸೂರಿ ಹುಡುಕುತ್ತಿದ್ದಾರಂತೆ.
ಕೆಪಿ ಶ್ರೀಕಾಂತ್ ನಿರ್ಮಾಣ
'ಟಗರು' ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ಅದೇ ತಂತ್ರಜ್ಞರು ಈ ಚಿತ್ರದಲ್ಲೂ ಮುಂದುವರೆಯಲಿದ್ದಾರಂತೆ. ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಲಿದ್ದು, ಟಗರು ಚಿತ್ರ ಖ್ಯಾತಿಯ ಮಾಸ್ತಿ ಸಂಭಾಷಣೆಯ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಶೇಖರ್ ಎಸ್ ಕ್ಯಾಮೆರಾ ಮ್ಯಾನ್ ಆಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.