Don't Miss!
- Finance ಅನಂತ್ ಅಂಬಾನಿ ರಾಧಿಕ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಖರ್ಚಾದ ಹಣ?
- News ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ: ವಿನೋದ್ ಅಸೂಟಿ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಂಡುಪಾಳ್ಯ 2' ಗ್ಯಾಂಗ್ ಗಿದ್ದ ದೊಡ್ಡ ಗಂಡಾಂತರ ತಪ್ತು
ನಿರ್ದೇಶಕ ಶ್ರೀನಿವಾಸ ರಾಜು ಆಕ್ಷನ್-ಕಟ್ ಹೇಳುತ್ತಿರುವ 'ದಂಡುಪಾಳ್ಯ 2' ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇತ್ತು. ಇತ್ತೀಚೆಗೆ 'ದಂಡುಪಾಳ್ಯ 2' ಚಿತ್ರದ ಶೂಟಿಂಗ್ ಗೆ ಮಧ್ಯಂತರ ತಡೆಕೋರಿ ಜೈಲಿನಲ್ಲಿದ್ದ 6 ಕೈದಿಗಳು ಅರ್ಜಿ ಸಲ್ಲಿಸಿದ್ದರು. ಇದರ ಪರಿಣಾಮವಾಗಿ ಶೂಟಿಂಗ್ ಅರ್ಧಕ್ಕೆ ನಿಂತು ಹೋಗಿತ್ತು.
ಇದೀಗ 'ದಂಡುಪಾಳ್ಯ 2' ಚಿತ್ರದ ವಿರುದ್ಧ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾ ಮಾಡಿರುವ ನ್ಯಾಯಾಲಯ ವಾದ-ವಿವಾದಗಳನ್ನು ಆಲಿಸಿ ಕೊನೆಗೂ ಚಿತ್ರ ನಿರ್ಮಾಣ ಹಾಗೂ ಪ್ರದರ್ಶನ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.[ಅಸಹ್ಯ ಹುಟ್ಟಿಸುವ 'ದಂಡುಪಾಳ್ಯ 2'ರ ಚಿತ್ರಗಳು, ಛೀ!]
ಇನ್ನು ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿರುವ 'ದಂಡುಪಾಳ್ಯ' ಖೈದಿಗಳು ತಮ್ಮ ಪರ ವಕೀಲರ ಮೂಲಕ ಬೆಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಚಿತ್ರದಲ್ಲಿ ತಮ್ಮ ಪಾತ್ರಗಳನ್ನು ತೀರಾ ಕ್ರೂರವಾಗಿ ಮತ್ತು ಅವಮಾನಕರವಾಗಿ ತೋರಿಸುವ ಸಾಧ್ಯತೆ ಇರುವುದರಿಂದ ಚಿತ್ರದ ನಿರ್ಮಾಣ ಹಾಗೂ ಪ್ರದರ್ಶನಕ್ಕೆ ಅಡ್ಡಿಪಡಿಸಿ ಮಧ್ಯಂತರ ತಡೆಯಾಜ್ಞೆ ಕೋರಿದ್ದರು.[ಆರಂಭದಲ್ಲೇ ವಿಘ್ನ: 'ದಂಡುಪಾಳ್ಯ 2' ಚಿತ್ರಕ್ಕೆ ಕೋರ್ಟ್ ನೋಟಿಸ್]
ಆದರೆ ಅದಕ್ಕೆ ಪ್ರತಿಯಾಗಿ ಚಿತ್ರತಂಡದ ಪರ ವಕೀಲರಾದ ರವಿಶಂಕರ್ ಅವರು ವಾದ ಮಂಡಿಸಿ, 'ಕೋಟಿಗಟ್ಟಲೆ ದುಡ್ಡು ಸುರಿದು, ಸಾಮಾಜಿಕ ಕಳಕಳಿಯಿಂದ ಈ ಚಿತ್ರ ನಿರ್ಮಾಣ ಮಾಡುತ್ತಿರುವುದರಿಂದ ಇದಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು' ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.
ಚಿತ್ರತಂಡದವರ ವಾದ ಪರಿಗಣಿಸಿದ ನ್ಯಾಯಾಲಯವು, ಚಿತ್ರೀಕರಣ ಮತ್ತು ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಎಲ್ಲಾ ಗಂಡಾಂತರಗಳಿಂದ 'ದಂಡುಪಾಳ್ಯ 2' ಚಿತ್ರವನ್ನು ಪಾರು ಮಾಡಿದೆ.['ದಂಡುಪಾಳ್ಯ' ಗ್ಯಾಂಗ್ ನಲ್ಲಿ ಪತ್ತೆಯಾದ ಸಂಜನಾ ಗಲ್ರಾನಿ]
ಅಂತೂ ಎಲ್ಲಾ ಸಮಸ್ಯೆಗಳು ನೀರು ಕುಡಿದಷ್ಟು ಸುಲಭವಾಗಿ ಪರಿಹಾರ ಆಗಿದ್ದಕ್ಕೆ ನಿರ್ದೇಶಕರು ಹಾಗೂ ಇಡೀ ಚಿತ್ರತಂಡದವರು ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.