Don't Miss!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂದಿನವಾರ ತೆರೆ ಕಾಣಬೇಕಿದ್ದ ಸಿನಿಮಾಗಳಿಗೆ ತಡೆ
UFO ಮತ್ತು cube ಸಂಸ್ಥೆಯ ದುಬಾರಿ ಶುಲ್ಕದಿಂದಾಗಿ ಬೇಸತ್ತಿರುವ ನಿರ್ಮಾಪಕರುಗಳು ಮುಂದಿನ ವಾರದಿಂದ ಸಿನಿಮಾಗಳನ್ನ ಬಿಡುಗಡೆ ಮಾಡದಂತೆ ನಿರ್ಧಾರ ಮಾಡಿದ್ದಾರೆ. ಮಾರ್ಚ್ 2 ರಿಂದಲೇ ಚಿತ್ರಗಳನ್ನ ರಿಲೀಸ್ ಮಾಡದಂತೆ ನೋಡಿಕೊಳ್ಳುವುದಾಗಿ ಮೊದಲು ತೀರ್ಮಾನ ಮಾಡಲಾಗಿತ್ತು ಆದರೆ ಈಗಾಗಲೇ ಅನೌನ್ಸ್ ಮಾಡಿರುವ ಸಿನಿಮಾಗಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಅನೌನ್ಸ್ ಆಗಿದ್ದ ಚಿತ್ರಗಳು ನಿನ್ನೆ (ಮಾರ್ಚ್ 2)ರಂದು ಬಿಡುಗಡೆ ಮಾಡಲಾಯ್ತು.
ಈ ಬಗ್ಗೆ ಇಂದು (ಮಾರ್ಚ್ 3) ತುರ್ತು ಸುದ್ದಿ ಗೋಷ್ಠಿಯನ್ನ ಕರೆಯಲಾಗಿತ್ತು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಾರಾ ಗೋವಿಂದು ಸಮಸ್ಯೆ ಸರಿ ಹೋಗುವ ವರೆಗೂ ಮುಂದಿನ ವಾರದಿಂದ ಯಾವುದೇ ಚಿತ್ರಗಳನ್ನ ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಮಾರ್ಚ್ 2 ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಇಲ್ಲ
UFO ಮತ್ತು cube ಡಿಜಿಟಲ್ ಸರ್ವಿಸ್ ಪ್ರೊವೈಡರ್ ಸಂಸ್ಥೆ ವಿರುದ್ಧ ಇಡೀ ಸೌತ್ ಚಿತ್ರರಂಗದ ನಿರ್ಮಾಪಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೇ ಕಾರಣದಿಂದ ಮಾರ್ಚ್ 9 ರಂದು ಬಿಡುಗಡೆ ಆಗಬೇಕಿದ್ದ ಸಿನಿಮಾಗಳನ್ನ ತಡೆ ಹಿಡಿಯಲಾಗಿದೆ.
UFO ಮತ್ತು cube ಸಂಸ್ಥೆ ಅವರು ಶೇಖಡ 25 ರಷ್ಟು ಶುಲ್ಕ ಕಡಿಮೆ ಮಾಡುವವರೆಗೂ ನಾವು ಸೌತ್ ಚಿತ್ರರಂಗದಿಂದ ಯಾವುದೇ ಕಟೆಂಟ್ ಕೊಡಬಾರದು ಎಂದು ನಿರ್ಧಾರ ಮಾಡಲಾಗಿದೆ. ಕರ್ನಾಟಕ ಚಿತ್ರರಂಗದ ಜೊತೆಯಲ್ಲಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಾಂಡಿಚೆರಿ ಸಿನಿಮಾರಂಗದವರು ಸಮ್ಮತ ಸೂಚಿಸಿ ಒಟ್ಟಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ.
ಹೀಗಾಗಿ ಮುಂದಿನ ವಾರ ತೆರೆಕಾಣಬೇಕಿದ್ದ ಯೋಗಿ ದುನಿಯಾ, ಇದಂ ಪ್ರೇಮಂ ಜೀವಂ, ನಂಜುಂಡಿ ಕಲ್ಯಾಣ, ಓ ಪ್ರೇಮವೇ, ಶ್ರೀ, ಹೀಗೊಂದು ದಿನ, ಮುಖ್ಯ ಮಂತ್ರಿ ಕಳದೋದ್ನಪ್ಪೊ, ಸೋಜಿಗ ಎಲ್ಲವು ಸ್ಥಗಿತ ಗೊಂಡಿದೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್
ಸೂರಿ, ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ್ದ ನಿರ್ದೇಶಕ ಶಿವ ನಿಧನ