Don't Miss!
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬೆತ್ತನಗೆರೆ' ಚಿತ್ರ ಬಿಡುಗಡೆ ಇನ್ನು ನಿರಾಳ
ನೆಲಮಂಗಲದ ರಿಯಲ್ ರೌಡಿಶೀಟರ್ ಬೆತ್ತನಗೆರೆ ಸೀನ ಮತ್ತು ಬೆತ್ತನಗೆರೆ ಶಂಕ್ರ ಅವರ ರಕ್ತ ಚರಿತ್ರೆ ಆಧರಿಸಿರುವ ಸಿನಿಮಾ 'ಬೆತ್ತನಗೆರೆ'. ರಿಲೀಸ್ ಗೆ ರೆಡಿಯಾಗಿರುವ 'ಬೆತ್ತನಗೆರೆ' ಚಿತ್ರಕ್ಕೆ ಇನ್ನು ಯಾವುದೇ ಕಂಟಕ ಇಲ್ಲ ಅನ್ನೋದು ಈಗ ಲಭ್ಯವಾಗಿರುವ ಲೇಟೆಸ್ಟ್ ಮಾಹಿತಿ.
'ಬೆತ್ತನಗೆರೆ' ಚಿತ್ರವನ್ನ ನಾವು ಮೊದಲು ನೋಡಬೇಕು ಅಂತ ಸೀನನ ಸಹೋದರ ಶಂಕ್ರ ಮತ್ತು ಸೀನನ ತಾಯಿ ಹಠ ಹಿಡಿದಿದ್ದರು. ಅದಕ್ಕಾಗಿ ವಿಶೇಷ ಪ್ರದರ್ಶನವನ್ನ ಇತ್ತೀಚೆಗಷ್ಟೇ ಚಿತ್ರತಂಡ ಹಮ್ಮಿಕೊಂಡಿತ್ತು. ['ಬೆತ್ತನಗೆರೆ' ಚಿತ್ರಕ್ಕೆ ಎದುರಾಗಿದೆ ಹೊಸ ಸಂಕಷ್ಟ]
ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಬೆತ್ತನಗೆರೆ ಶಂಕ್ರ ಸೇರಿದಂತೆ ನೆಲಮಂಗಲದ ಹಲವು ಹುಡುಗರು ಮತ್ತು ಸೀನನ ಕುಟುಂಬಸ್ಥರು ಭಾಗವಹಿಸಿದ್ದರು. 'ಬೆತ್ತನಗೆರೆ' ಚಿತ್ರ ನೋಡಿ ಎಲ್ಲರು ಕಣ್ಣೀರು ಹಾಕಿದ್ದು ಇಲ್ಲಿಯವರೆಗೂ ಭುಗಿಲೆದ್ದಿದ್ದ ವಿವಾದಕ್ಕೆ ಸಿಕ್ಕ ಕ್ಲೈಮ್ಯಾಕ್ಸ್.! ['ಬೆತ್ತನಗೆರೆ' ಚಿತ್ರ ಬಿಡುಗಡೆಗೆ ಹೊಸ ತಲೆನೋವು]
''ಸಿನಿಮಾ ನೋಡಿ ಎಲ್ಲರೂ ಖುಷಿ ಪಟ್ಟರು. ನಾವು ನೀಡಿದ್ದ ಮೆಸೇಜ್ ನೋಡಿ ಎಲ್ಲರೂ ಕಣ್ಣೀರು ಹಾಕಿದರು. ಸಿನಿಮಾದಲ್ಲಿ ನಾವು ಯಾರಿಗೂ ಅವಹೇಳನ ಮಾಡಿಲ್ಲ. ಚೆನ್ನಾಗಿದೆ ಅಂತ ಎಲ್ಲರೂ ಹೇಳಿದ್ದಾರೆ. ಬಿಡುಗಡೆಗೆ ಇನ್ನೂ ಯಾವುದೇ ಸಮಸ್ಯೆ ಇಲ್ಲ'' ಅಂತ ಸಂತಸ ವ್ಯಕ್ತಪಡಿಸಿದರು 'ಬೆತ್ತನಗೆರೆ' ಚಿತ್ರದ ನಿರ್ದೇಶಕ ಮೋಹನ್.
ಎಲ್ಲಾ ವಿವಾದಗಳಿಂದ ಮುಕ್ತಿ ಪಡೆದಿರುವ 'ಬೆತ್ತನಗೆರೆ' ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ. ಸುಮಂತ್ ಶೈಲೇಂದ್ರ, 'ಸಿಲ್ಕ್' ಖ್ಯಾತಿಯ ಅಕ್ಷಯ್, ವಿನೋದ್ ಕಾಂಬ್ಳಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಈ 'ಬೆತ್ತನಗೆರೆ'.