'ಬಯಲುಸೀಮೆ' ಟ್ರೈಲರ್ ನೋಡಿ ಸಿನಿಮಾ ನೋಡೋಕೆ ರೆಡಿಯಾಗಿ: ಜವಾರಿ ಭಾಷೆ ಸಿನಿಮಾಗೆ ಜೂ.ರೆಬಲ್ ಸ್ಟಾರ್ ಸಾಥ್
ಕರ್ನಾಟಕ ಪ್ರತಿಯೊಂದು ಜಿಲ್ಲೆಯಲ್ಲೂ ಒಂದೊಂದು ಶೈಲಿಯ ಭಾಷೆ ಕಾಣಬಹುದು. ಆಚಾರ-ವಿಚಾರಗಳು ಬದಲಾಗುತ್ತವೆ. ಜನರ ಆಹಾರ ಪದ್ಧತಿ ಬದಲಾಗುತ್ತೆ. ಉತ್ತರ ಕರ್ನಾಟಕ ಭಾಗ ಕೂಡ ಹಾಗೇ. ಕೆಲವು ದೂರ ಸಾಗುತ್ತಿದ್ದಂತೆ ಆಚಾರ ವಿಚಾರಗಳು ಬದಲಾಗುತ್ತವೆ. ಹೀಗಾಗಿ ಈ ಭಾಗದ ಸಿನಿಮಾಗಳು ಬಂದಿದ್ದು ತೀರಾ ಕಡಿಮೆ.
ಕೆಲವು ದಿನಗಳ ಹಿಂದಷ್ಟೇ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ಉತ್ತರ ಕರ್ನಾಟಕದ ಸಿನಿಮಾ ಶೈಲಿ ಬಗ್ಗೆ ಒಲವನ್ನು ತೋರಿದ್ದರು. ಆ ಭಾಗದ ಸಿನಿಮಾಗಳು ಬರಬೇಕು. ಅಲ್ಲಿನ ಮಣ್ಣಿನ ಕಥೆಯನ್ನು ಜನರಿಗೆ ತೋರಿಸಬೇಕು ಎಂದಿದ್ದರು. ಅದರಂತೆಯೇ ಈಗ 'ಬಯಲುಸೀಮೆ' ಅಂತ ಟೈಟಲ್ ಇಟ್ಟೇ ಸಿನಿಮಾ ಮಾಡಿದ್ದು ಅದು ಈಗ ಬಿಡುಗಡೆಗೆ ಸಜ್ಜಾಗಿದೆ.

ಉತ್ತರ ಕರ್ನಾಟಕ ಶೈಲಿಯ ರಗಡ್ ಸ್ಟೋರಿ ಇರುವ ಸಿನಿಮಾ 'ಬಯಲುಸೀಮೆ'. ಈ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಈ ಟ್ರೈಲರ್ ಅನ್ನು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.
'ಬಯಲುಸೀಮೆ' ಟ್ರೈಲರ್ ಸುಮಾರು 2 ನಿಮಿಷ 50 ಸೆಕೆಂಡ್ ಇದೆ. ಉತ್ತರ ಕರ್ನಾಟಕದ ಭಾಷೆಯನ್ನೇ ಪ್ರಮುಖವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಕಥೆಯಲ್ಲಿ ರೋಚಕ ತಿರುವುಗಳು, ಜವಾರಿ ಭಾಷೆಯ ಸಂಭಾಷಣೆ, ರಾಜಕೀಯ ಮೇಲಾಟದ ಸುತ್ತ ಕಥೆ ಸಾಗುತ್ತದೆ. ಈಗಾಗಲೇ ಹಾಡುಗಳ ಮೂಲಕ ಗಮನಸೆಳೆದಿರುವ 'ಬಯಲುಸೀಮೆ' ಟ್ರೈಲರ್ ಬಿಟ್ಟು ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
'ಬಯಲುಸೀಮೆ' ಸಿನಿಮಾವನ್ನು ವರುಣ್ ಕಟ್ಟಿಮನಿ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಹಾಗೇ ಸಂಯುಕ್ತ ಹೊರನಾಡು ನಾಯಕಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಉತ್ತರ ಕರ್ನಾಟಕ ಅಂದ ಮಾತ್ರಕ್ಕೆ ಹೊಸ ಪ್ರತಿಭೆಗಳೇನೂ ಇಲ್ಲ. ಸ್ಯಾಂಡಲ್ವುಡ್ನ ಹಿರಿಯ ಕಲಾವಿದರೇ ಇದ್ದಾರೆ. ಟಿ.ಎಸ್ ನಾಗಾಭರಣ, ರವಿಶಂಕರ್ ಅಂತ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.
ಈ ಸಿನಿಮಾವನ್ನು ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಗಜೇಂದ್ರಗಡ, ಬೀಳಗಿ, ಮುಂಬೈನಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾವರ್ಕ್, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಎಡಿಟಿಂಗ್ ಮಾಡಿದ್ದು, ಸಿನಿಮಾ ಆಗಸ್ಟ್ 18ರಂದು ರಿಲೀಸ್ ಆಗಿದೆ.


Click it and Unblock the Notifications











