Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡೆಗೂ ತೆರೆಗೆ ಓಂ ಪ್ರಕಾಶ್ ರಾವ್ 'ಕಟ್ಟೆ' ಪುರಾಣ
ಓಂ ಪ್ರಕಾಶ್ ರಾವ್ ನಿರ್ದೇಶಕದ ಕಟ್ಟೆ ಚಿತ್ರ ಹಲವು ವಿಶೇಷಗಳ ಹೂರಣ. ಶಂಕರ್ ನಾಗ್ ಅವರ 'ಮಾಲ್ಗುಡಿ ಡೇಸ್'ನ ಪ್ರೇರಣೆಯೂ ಕಟ್ಟೆಗೆ ಇದೆ ಎನ್ನುತ್ತಿದೆ ಚಿತ್ರತಂಡ. ಈ ಚಿತ್ರವನ್ನು ಶಂಕರ್ ನಾಗ್ ಅವರಿಗೆ ಅರ್ಪಿಸುವುದಾಗಿಯೂ ಹೇಳಿದೆ. ಇದೇ ಏಪ್ರಿಲ್ 3ಕ್ಕೆ ತೆರೆಗೆ 'ಕಟ್ಟೆ' ಪುರಾಣ ಬರುತ್ತಿದೆ.
ಅಂದಹಾಗೆ ಇದು ತಮಿಳಿನ 'ಕೇಡಿ ಬಿಲ್ಲ ಕಿಲಾಡಿ ರಂಗ' ಚಿತ್ರದ ರೀಮೇಕ್. ನಾಗಶೇಖರ್, ಚಂದನ್ ಹಾಗೂ ಓಂ ಪ್ರಕಾಶ್ ರಾವ್ ಈ ಕಟ್ಟೆ ಚಿತ್ರದ ಸದಸ್ಯರು. ಇಬ್ಬರು ನಾಯಕಿಯರು ಓಂ ಪ್ರಕಾಶ್ ಪುತ್ರಿ ಶ್ರಾವ್ಯಾ ಹಾಗೂ ರೂಕ್ಸಾರ್. ಪ್ರತಿ ಊರಿನಲ್ಲೂ ಇರುವ ಸೋಮಾರಿ ಕಟ್ಟೆ, ಅಲ್ಲೊಂದಷ್ಟು ಮಂದಿ ಪುಂಡು ಹೈಕ್ಳ ಕಥೆ ಇದು. [ಮಗಳು ಶ್ರಾವ್ಯಾ ಜತೆ 'ಕಟ್ಟೆ' ಮೇಲೆ ಓಂ ಪ್ರಕಾಶ್ ರಾವ್]
ಓಂ ಪ್ರಕಾಶ್ ರಾವ್ ಅವರ ಪತ್ನಿಯಾಗಿ, ಅವರ ಬೇಜವಾಬ್ದಾರಿತನಕ್ಕೆ ಮರುಗುವ ಗೃಹಿಣಿಯಾಗಿ ಗೀತಾ ಕಾಣಿಸುತ್ತಿದ್ದಾರೆ. ಈ ಚಿತ್ರವನ್ನು ಎಂ ಎಂ ಉಮೇಶ್ ರೆಡ್ಡಿ ಅವರು ಶರೀ ರೇಣುಕಾ ಮೂವಿ ಮೇಕರ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಕಟ್ಟೆ ಚಿತ್ರಕ್ಕೆ 'ದಿ ಲಕ್ಕಿ ಪ್ಲೇಸ್' ಅಡಿಬರಹ ನೀಡಿದ್ದಾರೆ.
ಹುಡುಗಿ ಹಿಂದೆ ಬಿದ್ದು ಸದಾಕಾಲ ಅವಳಿಂದ ಬೈಸಿಕೊಳ್ಳುವ ಪಾತ್ರದಲ್ಲಿ ನಾಗಶೇಖರ್ ಕಾಣಿಸಲಿದ್ದಾರೆ. ಕಾಮಿಡಿ ಮೂಲಕ ಸಂಬಂಧಗಳ ಮಹತ್ವವನ್ನು ಚಿತ್ರ ಹೇಳಲಿದೆಯಂತೆ. ಕಾಮಿಡಿ, ಐಟಂ ಸಾಂಗು, ಒಂದಷ್ಟು ಆಕ್ಷನ್ ಸೇರಿರುವ 'ಕಟ್ಟೆ'ಯಲ್ಲಿ ಸಂದೇಶವೂ ಇದೆಯಂತೆ.
ಎಸ್.ಎ ರಾಜ್ಕುಮಾರ್ ಸಂಗೀತ, ರವಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಒಂದೊಂದು ಹಾಡನ್ನೂ ವಿಶಿಷ್ಟ ಪರಿಕಲ್ಪನೆ ಹಿನ್ನೆಲೆಯಲ್ಲಿ ನೃತ್ಯ ಸಂಯೋಜಕ ತ್ರಿಭುವನ್ ಸಂಯೋಜಿಸಿದ್ದಾರಂತೆ. ಮುಮೈತ್ ಖಾನ್ ಕೂಡ ಒಂದು ‘ವಿಶೇಷ ನೃತ್ಯ'ಕ್ಕೆ ಮೈ ಬಳುಕಿಸಿರುವುದು ‘ಕಟ್ಟೆ'ಯ ವಿಶೇಷಗಳಲ್ಲೊಂದು. ಚಿತ್ರಕ್ಕೆ ‘ಯು/ಎ' ಪ್ರಮಾಣಪತ್ರ ಸಿಕ್ಕಿದೆ.
ನಿರ್ದೇಶಕ ಓಂಪ್ರಕಾಶ್ರವರೆ ಚಿತ್ರಕಥೆ ಬರೆದಿದ್ದಾರೆ. ಎಂ ಎಸ್ ರಮೇಶ್ ಅವರ ಸಂಭಾಷಣೆ ಇದೆ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನ ಇರುವ ಚಿತ್ರದ ಪಾತ್ರವರ್ಗದಲ್ಲಿ ಗೀತಾ, ಓಂ ಪ್ರಾಕಾಶ್ ರಾವ್, ಶ್ರೀನಿವಾಸಮೂರ್ತಿ, ಅವಿನಾಶ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇನ್ನಿತರರಿದ್ದಾರೆ. (ಫಿಲ್ಮಿಬೀಟ್ ಕನ್ನಡ)