Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಗಳೂರು 'ಮೊಟ್ಟೆ'ಗೆ ಇರುವ ಡಿಮ್ಯಾಂಡ್ ಅಷ್ಟಿಷ್ಟಲ್ಲ.!
ಯಾವುದೇ ಗಿಮಿಕ್ ಮಾಡದೇ... ಸಿಕ್ಕಾಪಟ್ಟೆ ಪ್ರಚಾರ ಬಯಸದೆ... ಸೈಲೆಂಟ್ ಆಗಿ ತೆರೆಗೆ ಬಂದ 'ಒಂದು ಮೊಟ್ಟೆಯ ಕಥೆ' ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಮಲ್ಟಿಪ್ಲೆಕ್ಸ್ ಗಳಲ್ಲಿ 'ಒಂದು ಮೊಟ್ಟೆಯ ಕಥೆ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪರಭಾಷೆಯ ಸಿನಿಮಾಗಳಿಗೆ ಫಿಕ್ಸ್ ಆಗಿದ್ದ 'ಶಾರದಾ ಟಾಕೀಸ್'ನಲ್ಲಿ 'ಒಂದು ಮೊಟ್ಟೆಯ ಕಥೆ' ಕಮಾಲ್ ಮಾಡುತ್ತಿದೆ.
ಬೋಳು ತಲೆಯ ವ್ಯಕ್ತಿಯ ಕಥೆ-ವ್ಯಥೆ ಹೊಂದಿರುವ 'ಒಂದು ಮೊಟ್ಟೆಯ ಕಥೆ' ನೋಡಲು ಕ್ಲಾಸ್-ಮಾಸ್ ಎಂಬ ಭೇದಭಾವ ಇಲ್ಲದೆ ಎಲ್ಲರೂ ಚಿತ್ರಮಂದಿರದ ಕಡೆಗೆ ಮುಗಿಬೀಳುತ್ತಿದ್ದಾರೆ. ಹೀಗಾಗಿಯೇ, ಮಂಗಳೂರು ಸೊಗಡು ತುಂಬಿರುವ 'ಒಂದು ಮೊಟ್ಟೆಯ ಕಥೆ' ರೀಮೇಕ್ ರೈಟ್ಸ್ ಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಮುಂದೆ ಓದಿರಿ....
'ಮೊಟ್ಟೆ'ಯ ರೀಮೇಕ್ ರೈಟ್ಸ್ ಗೆ ಸಖತ್ ಬೇಡಿಕೆ
ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ಕಣ್ಣುಕುಕ್ಕುತ್ತಿರುವ 'ಒಂದು ಮೊಟ್ಟೆಯ ಕಥೆ' ಚಿತ್ರದ ರೀಮೇಕ್ ರೈಟ್ಸ್ ಗೆ ಬೇಡಿಕೆ ಹೆಚ್ಚಾಗಿದೆ. ಕಾಲಿವುಡ್ ನಿಂದ ಹಲವು ನಿರ್ಮಾಪಕರು/ವಿತರಕರು 'ಒಂದು ಮೊಟ್ಟೆಯ ಕಥೆ' ರೀಮೇಕ್ ರೈಟ್ಸ್ ಪಡೆಯಲು ಮಾತುಕತೆ ನಡೆಸಿದ್ದಾರಂತೆ.
ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ
ಎಲ್ಲರಿಗೂ ಮೆಚ್ಚುಗೆ ಆಗಿದೆ.!
ಈಗಾಗಲೇ 'ಒಂದು ಮೊಟ್ಟೆಯ ಕಥೆ' ಚಿತ್ರವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ಸ್ಟಾರ್ ನಟರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟಿ ಶ್ರದ್ಧಾ ಶ್ರೀನಾಥ್ ಬರೆದ 'ಒಂದು ಮೊಟ್ಟೆಯ ಕಥೆ' ವಿಮರ್ಶೆ
ಜನಪ್ರಿಯತೆ ಹೆಚ್ಚಾಗಿದೆ
'ಒಂದು ಮೊಟ್ಟೆಯ ಕಥೆ' ಚಿತ್ರದ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ, ಮಲ್ಟಿಪ್ಲೆಕ್ಸ್ ಗಳಲ್ಲಿ ಶೋಗಳ ಸಂಖ್ಯೆ ಡಬಲ್ ಆಗುವ ಸಾಧ್ಯತೆ ಇದೆ.
'ಒಂದು ಮೊಟ್ಟೆಯ ಕಥೆ' ಕುರಿತು....
ತಲೆಗೂದಲು ಇಲ್ಲದಿರುವ ವ್ಯಕ್ತಿ ಮದುವೆ ಆಗಲು ಹೊರಟಾಗ ಎದುರಿಸುವ ಅಪಹಾಸ್ಯ, ಅವಮಾನ ಕುರಿತಾದ ಒಂದು ಸರಳ ಹಾಗೂ ಸುಂದರ ಸಿನಿಮಾ 'ಒಂದು ಮೊಟ್ಟೆಯ ಕಥೆ'. ಮಂಗಳೂರು ಮೂಲಕ ರಾಜ್.ಬಿ.ಶೆಟ್ಟಿ ಈ ಚಿತ್ರವನ್ನ ನಿರ್ದೇಶಿಸಿರುವುದರ ಜೊತೆಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.