Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳ ಒತ್ತಾಯಕ್ಕೆ ಮಣಿದ 'ಪೈಲ್ವಾನ್' ಗುಡ್ ನ್ಯೂಸ್ ಕೊಟ್ರು.!
Recommended Video
ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದಲ್ಲಿ ಸುದೀಪ್ ಕುಸ್ತಿಪಟು ಆಗಿರೋದೇ ಚಿತ್ರದ ಬಹುದೊಡ್ಡ ಉಡುಗೊರೆ. ಇಂತಹದ್ರಲ್ಲಿ ಅದ್ಧೂರಿ ಮೇಕಿಂಗ್, ಪಾತ್ರಕ್ಕಾಗಿ ಸುದೀಪ್ ಮೇಕ್ ಓವರ್, ಇದೆಲ್ಲ ನೋಡಿದ್ರೆ, ಅದ್ಯಾವ ಈ ಚಿತ್ರ ಬರುತ್ತೋ ಎಂದು ಕಾಯ್ತಿದ್ದಾರೆ.
ಸದ್ಯ, ಪೈಲ್ವಾನ್ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಈಗ ಕುಸ್ತಿ ಪೋಸ್ಟರ್ ರಿಲೀಸ್ ಮಾಡಲಿದೆ. ಈ ಸುದ್ದಿಯನ್ನ ಸ್ವತಃ ನಿರ್ದೇಶಕರೇ ಹಂಚಿಕೊಂಡಿದ್ದಾರೆ.
ಸುದೀಪ್ ಅವರನ್ನೇ ಮೀರಿಸಿದ ಅಭಿಮಾನಿ: ಇದು 'ಪೈಲ್ವಾನ್' ಎಫೆಕ್ಟ್
''ಅಭಿಮಾನಿಗಳ ಒತ್ತಾಯದಿಂದ ಪೈಲ್ವಾನ್ ಚಿತ್ರದ ಕುಸ್ತಿ ಪೋಸ್ಟರ್ ನವೆಂಬರ್ 17 ರಂದು ಸಂಜೆ 6.30ಕ್ಕೆ ರಿಲೀಸ್ ಮಾಡುತ್ತಿದ್ದೇವೆ. ಸುದೀಪ್ ಅಭಿಮಾನಿಗಳಿಗೆ ಬಹಳ ಧನ್ಯವಾದಗಳು. ನಮಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ, ನಮ್ಮ ತಂಡದಿಂದ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಇದಾಗಲಿದೆ'' ಎಂದು ಟ್ವೀಟ್ ಮಾಡಿದ್ದಾರೆ.
ಸುದೀಪ್ 16 ಕೆಜಿ ತೂಕ ಇಳಿಸಿಕೊಳ್ಳಲು ಕಾರಣ ಯಾರು.?
ಸದ್ಯ, ಹೈದರಬಾದ್ ನ ರಾಮೋಜಿ ಸಿಟಿಯಲ್ಲಿ ಪೈಲ್ವಾನ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅದಕ್ಕಾಗಿ ತುಂಬಾ ಗ್ರ್ಯಾಂಡ್ ಆಗಿ 20 ಬಗೆಯ ಸೆಟ್ ನಿರ್ಮಾಣ ಮಾಡಲಾಗಿದೆ. ಕುಸ್ತಿ, ಬಾಕ್ಸರ್ ಅಖಾಡಗಳನ್ನ ಸಿದ್ಧಮಾಡಿ ಸುದೀಪ್ ಅವರ ಚಿತ್ರೀಕರಣ ಮಾಡಲಾಗ್ತಿದೆ.
'ಪೈಲ್ವಾನ್' ಗರಡಿಯಲ್ಲಿ ಸಿದ್ಧವಾಗಿದೆ 'ಕೆಜಿಎಫ್' ಮೀರಿಸುವ ತಂತ್ರ.!
ಇನ್ನುಳಿದಂತೆ ಹೆಬ್ಬುಲಿ ನಿರ್ದೇಶಕ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಅವರೇ ನಿರ್ಮಾಣ ಕೂಡ ಮಾಡ್ತಿದ್ದಾರೆ. ಸುದೀಪ್ ಜೊತೆ ಕಬೀರ್ ದುಹಾನ್ ಸಿಂಗ್ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.