Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ಷಮಿಸಿ.... ಪಾಂಚಾಲಿ ಹೇಳಿದ್ದು ಒಂದೇ ಒಂದು ಸುಳ್ಳು!
ಹಳ್ಳಿಗೆ ಬಂದ ಈ ಪಾಂಚಾಲಿ ಹೇಳಿದ್ದು ಒಂದೇ ಒಂದು ಸುಳ್ಳು. ಆ ಸುಳ್ಳನ್ನೇ ನಿಜವೆಂದು ನಂಬಿದ ಪಂಚ ಪಾಂಡವರು ಪಾಂಚಾಲಿಯನ್ನು ಪ್ರೀತಿಸಿಯೇ ಬಿಟ್ಟರು. ಪಾಂಚಾಲಿಯ ಪ್ರೀತಿಸಲು ಪಾಂಡವರಿಗಲ್ಲದೆ ಮತ್ಯಾರಿಗೆ ಹಕ್ಕಿದೆ ಎನ್ನುತ್ತೀರಾ?
ಇಲ್ಲಿ ಪಾಂಚಾಲಿಯ ಪ್ರೀತಿಸುವ ಹಕ್ಕು ಪಂಚ ಪಾಂಡವರಿಗೆ ಇಲ್ಲವೇ ಇಲ್ಲ. ಕಾರಣ ಪಾಂಚಾಲಿಯ ವರಿಸಿದ ಅರ್ಥಾತ್ ಮದುವೆಯಾದ ಶೋರಾಧಿಶೂರ, ವೀರಾಧಿವೀರ 'ಸೈನಿಕ" ನಿದ್ದಾನೆ. ಆರ್ಥವಾಗಲೇ ಇಲ್ಲ ಅಲ್ಲವೇ. ಇದಿಷ್ಟೂ ಚಿತ್ರೀಕರಣ ಹಂತದಲ್ಲಿರುವ 'ಪಾಂಚಾಲಿ" ಚಿತ್ರದ ಒಂದು ಸನ್ನಿವೇಶ.
ಅದೊಂದು ಹಳ್ಳಿ. ಹಳ್ಳಿಗೆ ಟೀಚರ್ ಆಗಿ ವಯ್ಯಾರದ ಗೊಂಬೆ 'ರಂಭಾ" ಆಗಮನ. ದಿಲ್ಲಿಯಿಂದ ಹಳ್ಳಿಗೆ ಬಂದ ಈ ಬೆಡಗಿ ತಾನು ಅವಿವಾಹಿತೆ ಅಂತಾಳೆ. ಅದೊಂದೇ ಆಕೆ ಹೇಳುವ ಸುಳ್ಳು. ಇದನ್ನು ನಂಬಿದ ಊರಿನ ಐವರು ಯುವಕರು ಅವಳನ್ನು ಗಾಢವಾಗಿ ಪ್ರೇಮಿಸತೊಡಗುತ್ತಾರೆ. ಅಷ್ಟೊತ್ತಿಗೆ ವಿಲನ್ನಂತೆ ಹೀರೋ ಎಂಟ್ರೀ. ಆತನೆ ಆ ಟೀಚರ್ ಗಂಡ. ಮಿಲಿಟರಿ ಗಂಡ ಅರ್ಥಾತ್ ಸೈನಿಕ. ಸೈನಿಕ ಯಾರು ಗೊತ್ತೆ ? ಕಾರ್ಗಿಲ್ನಲ್ಲೇ ಸೈನಿಕನಾಗಿ ಮೆರೆದ ನಟ ಯೋಗೀಶ್ವರ.
ಮದುವೆಯಾಗಿಯೂ ಅವಿವಾಹಿತೆ ಅಂತ ಹೇಳಿದ ರಂಭಳ ಮೇಲೆ ಹಳ್ಳಿಗರು ಕೋಪಗೊಳ್ಳುತ್ತಾರೆ. ಗೌಡರ ನೇತೃತ್ವದಲ್ಲಿ ಪಂಚಾಯ್ತಿಯನ್ನೂ ನಡೆಸುತ್ತಾರೆ. ಬಾಲಾಜಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಪಾಂಚಾಲಿ" ಚಿತ್ರಕ್ಕಾಗಿ ಈ ದೃಶ್ಯವನ್ನು ಶ್ರೀರಂಗಪಟ್ಟಣ ಸಮೀಪದ ರಾಂಪುರ ಗ್ರಾಮದಲ್ಲಿ ನಿರ್ದೇಶಕ ದಿನೇಶ್ ಬಾಬು ಈಚೆಗೆ ಚಿತ್ರೀಕರಿಸಿಕೊಂಡರು.
ಪಂಚಾಯ್ತಿ ಕಟ್ಟೆಯ ದೃಶ್ಯದಲ್ಲಿ ಕಿಟ್ಟಿ, ರಮೇಶ್ಭಟ್, ಸುಂದರ್ರಾಜ್, ಶೆಣೈ, ಉಮೇಶ್ ಮತ್ತಿತರರು ಪಾಲ್ಗೊಂಡಿದ್ದರು. ಪಂಚಾಯ್ತಿಯಲ್ಲಿ ಈಕೆಗೆ ಯಾವ ಶಿಕ್ಷೆ ಕೊಟ್ಟರು ಅನ್ನೋದು ಮಾತ್ರ ಸಸ್ಪೆನ್ಸ್. ಅಂದಹಾಗೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣದಲ್ಲಿ ದೃಶ್ಯದ ಚಿತ್ರೀಕರಣ ನಡೆಯಿತು.