Don't Miss!
- News ಆಸ್ತಿ ವಿವರ ಘೋಷಿಸಿದ ಪ್ರಜ್ವಲ್ ರೇವಣ್ಣ: ದೊಡ್ಡಗೌಡರ ಮೊಮ್ಮಗ ಎಷ್ಟು ಕೋಟಿ ಒಡೆಯ ಗೊತ್ತಾ?
- Sports Virat Kohli vs Gautam Gambhir: ವಿರಾಟ್, ಗೌತಮ್ ನಡುವೆ ಬಿರುಕು ಹುಟ್ಟಲು ಕಾರವೇನು? ಇಲ್ಲಿದೆ ಮಾಹಿತಿ
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೇಸ್ ನಷ್ಟೇ ಕಿಕ್ ಕೊಡ್ತಿದೆ ಭಟ್ಟರ 'ಪಂಚತಂತ್ರ'
ಯೋಗರಾಜ್ ಭಟ್ ನಿರ್ದೇಶನ ಬಹುನಿರೀಕ್ಷೆಯ ಚಿತ್ರ ಪಂಚತಂತ್ರ ಟ್ರೈಲರ್ ರಿಲೀಸ್ ಆಗಿದೆ. ಹಾಡುಗಳಿಂದ ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಪಂಚತಂತ್ರ ಈಗ ಟ್ರೈಲರ್ ನಿಂದ ಮತ್ತಷ್ಟು ಕಿಕ್ ಹೆಚ್ಚಿಸುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ಪಂಚತಂತ್ರ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಭಟ್ಟರ ಚಿತ್ರಕ್ಕೆ ಜೋಶ್ ನೀಡಿದ್ದಾರೆ.
ಪಂಚತಂತ್ರ ಚಿತ್ರದಲ್ಲಿ ಐದು ಪ್ರಮುಖ ಅಂಶಗಳಿವೆ ಎಂದು ಯೋಗರಾಜ್ ಭಟ್ಟರು ಹೇಳಿದ್ದರು. ಆ ಎಲ್ಲ ಅಂಶಗಳು ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ. ಅದರಲ್ಲೂ ಕಾರ್ ರೇಸ್ ಅಂತೂ ಸಖತ್ ಥ್ರಿಲ್ ಕೊಡ್ತಿದೆ.
ಭಟ್ಟರ 'ಪಂಚತಂತ್ರ' ಟ್ರೈಲರ್ ರಿಲೀಸ್ ಮಾಡಲಿದ್ದಾರೆ ರಾಕಿ ಬಾಯ್
ಸಾಮಾನ್ಯವಾಗಿ ಕನ್ನಡ ಸಿನಿಮಾಗಳಲ್ಲಿ ಈ ಕಾರ್ ರೇಸ್ ಕಾನ್ಸಪ್ಟ್ ತುಂಬ ಅಪರೂಪ. ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ನೋಡಿರಬಹುದು. ಆದ್ರೆ, ಪಂಚತಂತ್ರ ಚಿತ್ರದಲ್ಲಿ ರೇಸ್ ಬಹುಮುಖ್ಯ ಅಂಶವಾಗಿ ಕಾಣ್ತಿದೆ.
ಯೋಗರಾಜ್ ಭಟ್ ನಿರ್ದೇಶನವಿರುವ 'ಪಂಚತಂತ್ರ' ಚಿತ್ರದಲ್ಲಿ ಯುವ ಪ್ರತಿಭೆ ವಿಹಾನ್ ಗೌಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷರಾ ಗೌಡ ಮತ್ತು ಸೋನಲ್ ಮಾಂಟೆರೋ ನಾಯಕಿಯರಾಗಿ ಮಿಂಚಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತವಿದೆ. ಚಿತ್ರ ಇದೇ ತಿಂಗಳು 29 ರಂದು ಚಿತ್ರ ತೆರೆಗೆ ಬರುತ್ತಿದೆ.