Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಂಕಜ್ 'ರಣ'ಕಹಳೆಗೆ ಸೆನ್ಸಾರ್ ರೆಡ್ ಸಿಗ್ನಲ್
ಹಾಗಿದ್ದರೆ ರಣ ಚಿತ್ರದಲ್ಲಿ ಅಂಥದ್ದೇನಿದೆ ಎಂದರೆ ಸೆನ್ಸಾರ್ ಮಂಡಳಿ ಪ್ರಕಾರ 'ರಣ ಚಿತ್ರದಲ್ಲಿ ಬರೀ ರಣಕಹಳೆ. ಇಡೀ ಸಿನಿಮಾ ರಕ್ತದ ಮಳೆ ಸುರಿಸುತ್ತದೆ. ಎಲ್ಲಾ ದೃಶ್ಯಗಳಲ್ಲಿ ಕೇವಲ ರಕ್ತದೋಕುಳಿ. ಬರೋಬ್ಬರಿ ಏಳು ಹತ್ಯೆಗಳು, ಭಾರೀ ಬುಲೆಟ್ ಸದ್ದುಗಳು. ಇಂತಹ ಚಿತ್ರಕ್ಕೆ ಸೆನ್ಸಾರ್ 'ಪ್ರಮಾಣ ಪತ್ರ' ಕೊಡಲು ನಮ್ಮಿಂದಂತೂ ಸಾಧ್ಯವಿಲ್ಲ" ಎಂದು ಪ್ರಾದೇಶಿಕ ಸೆನ್ಸಾರ್ ಮಂಡಳಿ ಕೈ ಎತ್ತಿದೆ.
ಈಗ ನಿರ್ಮಾಪಕ ಶಿವಾನಂದ ಮಾದಶೆಟ್ಟಿ ಆಯ್ಕೆ ರಿವೈಸ್ ಕಮಿಟಿ ಮುಂದೆ ಹೋಗಿದ್ದಾರೆ. ಚಿತ್ರ ಟ್ರಿಬ್ಯುನಲ್ ಗೆ ಹೋಗಿದೆ. ಅಲ್ಲಿಂದ ಉತ್ತರ ಬರುವವರೆಗೆ ಕಾಯಲೇಬೇಕು. ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಬೇರೆ ಇದ್ದಾರೆ. ಸುಪ್ರೀತಾ, ಸೋನಿಯಾ ಗೌಡ ಎಂಬಿಬ್ಬರು ನಾಯಕಿಯರೂ ಇದ್ದಾರೆ. ರಣ ಚಿತ್ರವನ್ನು ಮುಗಿಸಿದ್ದಲ್ಲದೇ ಅದೇ ಪಂಕಜ್ ಗೆ 'ರೆಡ್' ಎಂಬ ಇನ್ನೊಂದು ಚಿತ್ರವನ್ನೂ ಘೋಷಿಸಿ ಅದನ್ನೂ ಚಿತ್ರೀಕರಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ವಿವಾದದಿಂದಾದರೂ ಚಿತ್ರಕ್ಕೆ ಲಾಭ ಆಗಬಹುದೋ ಏನೋ! ಪಂಕಜ್ ಸದ್ಯಕ್ಕೆ ಸಾಲು ಸಾಲು ಚಿತ್ರಗಳ ಸೋಲಿನ ಸರದಾರ. ರಣ ಮೂಲಕವಾದರೂ ಗೆಲ್ಲುವ ಪಣ ತೊಟ್ಟಿದ್ದಾರೆ. ಆದರೆ ಅಷ್ಟರಲ್ಲೇ ದೊಡ್ಡ ವಿಘ್ನವೊಂದು ಬಂದು ಕೂತಿದೆ. ಚಿತ್ರದಲ್ಲಿರುವ ಅದೆಷ್ಟು ಹತ್ಯೆಗಳನ್ನು ಕಿತ್ತು ಬೀಸಾಕಬೇಕೋ ಏನೋ! ಎಲ್ಲಾ ಹೋದರೆ ಆಕ್ಷನ್ ಬೇಸ್ಡ್ ಚಿತ್ರದ ಹೆಸರಿಗೆ ಬೆಲೆಯಾದರೂ ಎಲ್ಲಿರುತ್ತೆ ಹೇಳಿ...? (ಒನ್ ಇಂಡಿಯಾ ಕನ್ನಡ)