Don't Miss!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- News ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನಕ್ಕಾಗಿ ಅಧಿಕಾರಿಗಳಿಗೆ ಖಡಕ್ ಸೂಚನೆ
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಂಕಜ್ 'ರಣ'ಕಹಳೆಗೆ ಸೆನ್ಸಾರ್ ರೆಡ್ ಸಿಗ್ನಲ್
ಹಾಗಿದ್ದರೆ ರಣ ಚಿತ್ರದಲ್ಲಿ ಅಂಥದ್ದೇನಿದೆ ಎಂದರೆ ಸೆನ್ಸಾರ್ ಮಂಡಳಿ ಪ್ರಕಾರ 'ರಣ ಚಿತ್ರದಲ್ಲಿ ಬರೀ ರಣಕಹಳೆ. ಇಡೀ ಸಿನಿಮಾ ರಕ್ತದ ಮಳೆ ಸುರಿಸುತ್ತದೆ. ಎಲ್ಲಾ ದೃಶ್ಯಗಳಲ್ಲಿ ಕೇವಲ ರಕ್ತದೋಕುಳಿ. ಬರೋಬ್ಬರಿ ಏಳು ಹತ್ಯೆಗಳು, ಭಾರೀ ಬುಲೆಟ್ ಸದ್ದುಗಳು. ಇಂತಹ ಚಿತ್ರಕ್ಕೆ ಸೆನ್ಸಾರ್ 'ಪ್ರಮಾಣ ಪತ್ರ' ಕೊಡಲು ನಮ್ಮಿಂದಂತೂ ಸಾಧ್ಯವಿಲ್ಲ" ಎಂದು ಪ್ರಾದೇಶಿಕ ಸೆನ್ಸಾರ್ ಮಂಡಳಿ ಕೈ ಎತ್ತಿದೆ.
ಈಗ ನಿರ್ಮಾಪಕ ಶಿವಾನಂದ ಮಾದಶೆಟ್ಟಿ ಆಯ್ಕೆ ರಿವೈಸ್ ಕಮಿಟಿ ಮುಂದೆ ಹೋಗಿದ್ದಾರೆ. ಚಿತ್ರ ಟ್ರಿಬ್ಯುನಲ್ ಗೆ ಹೋಗಿದೆ. ಅಲ್ಲಿಂದ ಉತ್ತರ ಬರುವವರೆಗೆ ಕಾಯಲೇಬೇಕು. ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಬೇರೆ ಇದ್ದಾರೆ. ಸುಪ್ರೀತಾ, ಸೋನಿಯಾ ಗೌಡ ಎಂಬಿಬ್ಬರು ನಾಯಕಿಯರೂ ಇದ್ದಾರೆ. ರಣ ಚಿತ್ರವನ್ನು ಮುಗಿಸಿದ್ದಲ್ಲದೇ ಅದೇ ಪಂಕಜ್ ಗೆ 'ರೆಡ್' ಎಂಬ ಇನ್ನೊಂದು ಚಿತ್ರವನ್ನೂ ಘೋಷಿಸಿ ಅದನ್ನೂ ಚಿತ್ರೀಕರಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ವಿವಾದದಿಂದಾದರೂ ಚಿತ್ರಕ್ಕೆ ಲಾಭ ಆಗಬಹುದೋ ಏನೋ! ಪಂಕಜ್ ಸದ್ಯಕ್ಕೆ ಸಾಲು ಸಾಲು ಚಿತ್ರಗಳ ಸೋಲಿನ ಸರದಾರ. ರಣ ಮೂಲಕವಾದರೂ ಗೆಲ್ಲುವ ಪಣ ತೊಟ್ಟಿದ್ದಾರೆ. ಆದರೆ ಅಷ್ಟರಲ್ಲೇ ದೊಡ್ಡ ವಿಘ್ನವೊಂದು ಬಂದು ಕೂತಿದೆ. ಚಿತ್ರದಲ್ಲಿರುವ ಅದೆಷ್ಟು ಹತ್ಯೆಗಳನ್ನು ಕಿತ್ತು ಬೀಸಾಕಬೇಕೋ ಏನೋ! ಎಲ್ಲಾ ಹೋದರೆ ಆಕ್ಷನ್ ಬೇಸ್ಡ್ ಚಿತ್ರದ ಹೆಸರಿಗೆ ಬೆಲೆಯಾದರೂ ಎಲ್ಲಿರುತ್ತೆ ಹೇಳಿ...? (ಒನ್ ಇಂಡಿಯಾ ಕನ್ನಡ)