Don't Miss!
- News Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆನ್ಸಾರ್ನತ್ತ ಹೆಜ್ಜೆ ಇಟ್ಟ ಸುನಿಲ್ ಕುಮಾರ್ ದೇಸಾಯರ ‘ಪರ್ವ’
ಕಳೆದ ವರ್ಷದ ಅಂತ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಘಟಿಸಿದ 'ಯುದ್ಧಪರ್ವ" 'ಸಂಧಾನಪರ್ವ"ದ ಮೂಲಕ 'ಶಾಂತಿಪರ್ವ"ದಲ್ಲಿ ಕೊನೆಯಾಗಿ 'ಚಿತ್ರೀಕರಣ ಪರ್ವ"ಮುಗಿಸಿ ಈಗ 'ಸೆನ್ಸಾರ್ ಪರ್ವ"ದತ್ತ ಹೆಜ್ಜೆ ಇಟ್ಟಿದೆ.
ಗೊತ್ತಾಗಿರಬೇಕಲ್ಲವೇ ನಿಮಗೆ. ಕಾಲ್ಶೀಟ್ ಕಿರಿಕಿರಿಗೆ ಸಂಬಂಧಿಸಿದಂತೆ ನಟಿ ಪ್ರೇಮಾ ಹಾಗೂ 'ಪರ್ವ" ನಿರ್ಮಾಪಕ ಶಿಲ್ಪ ಶ್ರೀನಿವಾಸ್ರ ನಡುವೆ ಭಾರೀ ಸಂಘರ್ಷವೇ ನಡೆದಿತ್ತು. ಸಂಧಾನ- ದಂಡದ ತರುವಾಯ 'ಪರ್ವ" ಚಿತ್ರೀಕರಣ ಪುನಾರಂಭವಾಗಿ ಕುಂಬಳಕಾಯಿ ಒಡೆದಾಯಿತು. ಈಗ ಚಿತ್ರದ ಮೊದಲ ಪ್ರತಿ ಸೆನ್ಸಾರ್ ವೀಕ್ಷಣೆಗೆ ಅಣಿಯಾಗಿದೆ. ಜನವರಿ ಅಂತ್ಯ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಎಚ್.ಸಿ. ಶ್ರೀನಿವಾಸ್ ಸಿದ್ಧತೆ ನಡೆಸಿದ್ದಾರೆ.
ಶ್ರೀನಿವಾಸ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗಿರುವ 'ಪರ್ವ"ವೆಂಬ ಪ್ರೇಮ ಕಥಾನಕದ ನಿರೂಪಣೆಗೆ ತಾವು ಹೊಸದೊಂದು ತಂತ್ರ ಅಳವಡಿಸಿರುವುದಾಗಿ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹೇಳಿದ್ದಾರೆ. ಹಂಸಲೇಖಾರ ಗೀತೆ - ರಾಗಸಂಯೋಜನೆ, ಎಚ್.ಸಿ. ವೇಣು ಛಾಯಾಗ್ರಹಣ ಇರುವ ಚಿತ್ರದ ತಾರಾಗಣದಲ್ಲಿ ವಿಷ್ಣುವರ್ಧನ್, ಪ್ರೇಮಾ, ರೋಜಾ, ಅಪರ್ಣ, ರಮೇಶ್ಭಟ್, ವೈದ್ಯನಾಥನ್, ರೇಖಾ, ನವೀನ್ ಮಯೂರ್, ಕೆರೆಮನೆ ಶಂಭುಹೆಗಡೆ ಮೊದಲಾದವರಿದ್ದಾರೆ.ವಾರ್ತಾ ಸಂಚಯ