Don't Miss!
- Lifestyle ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- News Delhi Rain: ದೆಹಲಿಯಲ್ಲಿ ದಾರಾಕಾರ ಮಳೆ: ಬಿಸಿಲಿನ ಶಾಖದಿಂದ ಪರಿಹಾರ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಂಗಪೂರ್ಕಿರುಚಿತ್ರೋತ್ಸವಕ್ಕೆ ಬೆಂಗಳೂರುನಿರ್ಮಾಪಕನ ‘ಕನ್ನಡಿ’
ಬೆಂಗಳೂರು : ಹದಿನೇಳು ವರ್ಷಗಳ ಹಿಂದೆಯೇ ನಟನೆಗೆ ಕಾಲಿಟ್ಟು, ಹನ್ನೆರಡು ವರ್ಷಗಳಿಂದ ಕಾರ್ಪೊರೇಟ್ ಚಿತ್ರಗಳನ್ನು ನಿರ್ಮಿಸುತ್ತಿರುವ ನಗರದ ಪತಿ ಅಯ್ಯರ್ ಅವರಿಗೆ ಇದೀಗ ಜಾಗತಿಕ ಮನ್ನಣೆ. ಅವರ ಕನ್ನಡ ಚಿತ್ರ ಕನ್ನಡಿ (ಮಿರರ್) ಡಿಸೆಂಬರ್ 4ರಿಂದ ಪ್ರಾರಂಭವಾಗುವ ಸಿಂಗಪೂರ್ ಕಿರುಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ನ್ಯೂಜೆರ್ಸಿಯಲ್ಲಿ ಮೈಹೆಲೆನ್ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡಿದ್ದ ಈ ಚಿತ್ರವನ್ನು 1999ರ ಅಕ್ಟೋಬರ್ನಲ್ಲಿ ಅಲಯನ್ಸ್ ಫ್ರಾಂಚೈಸ್ನಲ್ಲಿ ತೋರಿಸಲಾಗಿತ್ತು. ಹನ್ನೆರಡೇ ನಿಮಿಷ ಅವಧಿಯ ಚಿತ್ರ. ಕತೆ ಕಲಾಯಿ ಕಲೆಗಾರ ಕರ್ಮಿಗಳ ಕುರಿತದ್ದು. ಕೆಲಸ ಹುಡುಕಿಕೊಂಡು ಹಳ್ಳಿಯಾಂದಕ್ಕೆ ಬರುವ ಶಿವಮ್ಮ ಮತ್ತು ಮರಿಯಪ್ಪ ನಲ್ಲಿ ಹತಾಶೆ ಮಡುಗಟ್ಟುತ್ತದೆ. ಹಸಿವು ಹೊಟ್ಟೆ ಬೆಂಕಿ ಹಚ್ಚುತ್ತದೆ. ಪರಿಣಾಮ ಜಗಳ. ಅಕಸ್ಮಾತ್ತಾಗಿ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳುವ ಶಿವಮ್ಮನಲ್ಲಾಗುವ ಬದಲಾವಣೆ ಚಿತ್ರದ ವಸ್ತು. ರಂಗ ಕಲಾವಿದರಾದ ತಂತಿ ಶಿವು, ರಶ್ಮಿ, ಸಂಪ್ರಾಗ್ನಿ ಮತ್ತು ಸಂಯುಕ್ತ ಇದರಲ್ಲಿ ಅಭಿನಯಿಸಿದ್ದಾರೆ.
ಇತ್ತೀಚೆಗೆ ಇಂಗ್ಲಿಷ್ ಚಿತ್ರಕತೆಯಾಂದನ್ನು ಸಿದ್ಧಪಡಿಸಿರುವ ಪತಿ ಅಯ್ಯರ್, ಅದನ್ನು ತೆರೆಗೆ ತರುವ ಪ್ರಯತ್ನದಲ್ಲಿ ಮುಳುಗಿದ್ದಾರೆ.