twitter
    For Quick Alerts
    ALLOW NOTIFICATIONS  
    For Daily Alerts

    ವೆಂಕಟೇಶ್ ಕುಟುಂಬಕ್ಕೆ ಪವರ್ ಸ್ಟಾರ್ ಧನ ಸಹಾಯ

    By ಅನಂತರಾಮು, ಹೈದರಾಬಾದ್
    |

    ಮಹಬೂಬ್ ನಗರ ಜಿಲ್ಲೆಯ ಪಾಲೇಂ ಬಳಿ ನಡೆದ ವೋಲ್ವೋ ಬಸ್ ಅಪಘಾತದಲ್ಲಿ ಅಖಿಲ ಕರ್ನಾಟಕ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ವೆಂಕಟೇಶ್ ದುರಂತ ಸಾವಪ್ಪಿದ್ದು ಗೊತ್ತೇ ಇದೆ. ಅವರ ಕುಟುಂಬಕ್ಕೆ ಇತ್ತೀಚೆಗೆ ನಟ ಚಿರಂಜೀವಿ ಸಹಾಯ ಹಸ್ತ ಚಾಚಿದ ಬೆನ್ನಲ್ಲೇ ಈಗ ಅವರ ಸಹೋದರ ಪವನ್ ಕಲ್ಯಾಣ್ ಕೂಡ ಧನ ಸಹಾಯ ಮಾಡಿದ್ದಾರೆ.

    ಚಿರಂಜೀವಿ ಅವರು ರು.5 ಲಕ್ಷದ ಚೆಕ್ ಕೊಟ್ಟಿದ್ದರು. ವೆಂಕಟೇಶ್ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ತಾವು ವಹಿಸಿಕೊಂಡಿರುವುದಾಗಿ ತಿಳಿಸಿದ್ದರು. ಬಳಿಕ ಚಿರಂಜೀವ ಅವರ ಅಣ್ಣ ನಾಗಬಾಬು ಅವರು ರು.5 ಲಕ್ಷ ಸಹಾಯ ಮಾಡಿದರು. [ಬಸ್ ದುರಂತದ ಚಿತ್ರಗಳು]

    Pawan Kalyan
    ಇತ್ತೀಚೆಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ವೆಂಕಟೇಶ್ ಯಾದವ್ ಕುಟುಂಬಕ್ಕೆ ರು.7 ಲಕ್ಷಗಳ ಧನ ಸಹಾಯ ಮಾಡಿದ್ದಾರೆ. ದಾನಗುಣದಲ್ಲಿ ಅಣ್ಣನಿಗಿಂತಲೂ ಒಂದು ಕೈ ತಾನು ಮೇಲೆ ಎಂಬುದನ್ನು ಪವನ್ ತೋರಿಸಿಕೊಟ್ಟಿದ್ದಾರೆ.

    ಮದುವೆಯ ಆಹ್ವಾನ ಪತ್ರಿಕೆ ಹಂಚಲು ಹೈದರಾಬಾದ್‌ಗೆ ತೆರಳಿದ್ದ ನಟ ಚಿರಂಜೀವಿ ಅಭಿಮಾನಿ ಸಂಘದ ಅಧ್ಯಕ್ಷ ಎಸ್.ವೆಂಕಟೇಶ್‌ ಯಾದವ್ (ಕೋಟೆ) ಹಾಗೂ ಸಹೋದರಿ ಅನಿತಾ ಬಸ್ ದುರಂತದಲ್ಲಿ ಸಾವಪ್ಪಿದ್ದರು.

    ಮಕ್ಕಳ ಜತೆ ಮಾತನಾಡಿ ಕಲಾಸಿಪಾಳ್ಯದಲ್ಲಿರುವ ಜಬ್ಬಾರ್ ಟ್ರಾವೆಲ್ಸ್‌ಗೆ ತೆರಳಿದ ವೆಂಕಟೇಶ್ ಮಂಗಳವಾರ (ಅ.29) ರಾತ್ರಿ 10 ಗಂಟೆ ಸುಮಾರಿಗೆ ಬಸ್ ಹತ್ತಿದ ಬಳಿಕ ಮಕ್ಕಳ ಮೊಬೈಲ್‌ಗೆ ಕರೆ ಮಾಡಿ, ಬಸ್ ಹತ್ತಿರುವ ವಿಷಯ ತಿಳಿಸಿ ಊಟ ಮಾಡಿ ಮಲಗುವಂತೆ ಹೇಳಿದ್ದರು. ಅದೇ ಅವರ ಕೊನೆಯ ಮಾತು. ಬೆಳಗಾಗುವುದರೊಳಗೆ ಮೊಬೈಲ್ ಸಮೇತ ಅವರು ಜೀವಂತ ಸುಟ್ಟು ಕರಕಲಾಗಿದ್ದರು. (ಏಜೆನ್ಸೀಸ್)

    English summary
    Tollywood power star Pawan Kalyan donated Rs 7 Lakhs to the President of Karnataka chapter of Chiranjeevi fan club, was one of the victims of the tragic accident in which over 40 passengers were charred to death when a private Bus headed for Hyderabad caught fire in Mahbubnagar.
    Saturday, November 16, 2013, 16:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X