Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚ ವೆಂಕಟ್ಗೆ ಹಿಗ್ಗಾ-ಮುಗ್ಗಾ ಥಳಿಸಿದ ಜನ
ಕೆಲವು ದಿನಗಳಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಹುಚ್ಚ ವೆಂಕಟ್ ಅಲ್ಲಿ ಭಾರಿ ರಂಪಾಟ ನಡೆಸಿದ್ದಾರೆ. ಮೊನ್ನೆಯಷ್ಟೆ ಹುಚ್ಚಾಟ ನಡೆಸಿ ಪೊಲೀಸರ ಕೈಯಿಂದ ಹೊರದಬ್ಬಿಸಿಕೊಂಡಿದ್ದ ಹುಚ್ಚ ವೆಂಕಟ್. ಈಗ ಮತ್ತೆ ಜನರಿಂದ ಹೊಡೆತ ತಿಂದಿದ್ದಾರೆ.
Recommended Video
ಕೆಲವು ದಿನಗಳಿಂದ ಶ್ರೀರಂಗಪಟ್ಟಣದಲ್ಲಿರುವ ಹುಚ್ಚ ವೆಂಕಟ್ ಇಂದು ಮಿತಿ ಮೀರಿ ವರ್ತಿಸಿದ್ದು, ಜನರೇ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಎರಡು ದಿನಗಳ ಹಿಂದೆ ಜನರು ಹುಚ್ಚ ವೆಂಕಟ್ ಗೆ ಊಟ-ತಿಂಡಿ ಕೊಟ್ಟು ಸಹಾಯ ಮಾಡಿದ್ದರು. ಆದರೆ ಹುಚ್ಚ ವೆಂಕಟ್ ಮಿತಿ ಮೀರಿ ವರ್ತಿಸಿರುವ ಕಾರಣ ಆತನನ್ನು ಥಳಿಸಲಾಗಿದೆ.
ಜನರೇ ಊಟ ಕೊಡಿಸಿದ್ದರು
ಮೊನ್ನೆ ರಂಗನಾಥ ಮೈದಾನ ಹಾಗೂ ದೇವಸ್ಥಾನದ ಬಳಿ ಅಲೆದಾಡುತ್ತಿದ್ದ ಹುಚ್ಚ ವೆಂಕಟ್ಗೆ ಜನರು ಊಟ ನೀರು ಕೊಟ್ಟಿದ್ದರು. ಹುಚ್ಚ ವೆಂಕಟ್ ಅತ್ತು ಕರೆದು ಹಣ ಕೇಳಿದ್ದಕ್ಕೆ ಕೆಲವರು ಹಣವನ್ನೂ ಕೊಟ್ಟಿದ್ದರು. ಜನರ ಉಪಕಾರ ಸ್ಮರಿಸಿ ಸುಮ್ಮನೆ ಹೋಗದೆ ರಂಪಾಟ ಮುಂದುವರೆಸಿದ್ದಾರೆ ಹುಚ್ಚ ವೆಂಕಟ್.
ಶ್ರೀರಂಗಪಟ್ಟಣದಲ್ಲಿ ಕಣ್ಣಿರು ಹಾಕುತ್ತಾ ಸಹಾಯಕ್ಕಾಗಿ ಅಂಗಲಾಚಿದ ಹುಚ್ಚ ವೆಂಕಟ್
ನಡು ರಸ್ತೆಯಲ್ಲಿ ಕುಳಿತ ಹುಚ್ಚ ವೆಂಕಟ್
ಪಟ್ಟಣದ ಕಾವೇರಿ ಸಂಗಮದ ಬಳಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹಣವಿಲ್ಲ. ಪೆಟ್ರೋಲ್ ಹಾಕಿಸಿಕೊಡದಿದ್ದರೆ ಇಲ್ಲಿಂದ ಹೋಗುವುದಿಲ್ಲ ಎಂದು ರಸ್ತೆಯಲ್ಲೇ ಕುಳಿತು ರಾದ್ಧಾಂತ ಮಾಡಿದ್ದ ಹುಚ್ಚ ವೆಂಕಟ್ ಕಾರಿಗೆ ಸ್ಥಳೀಯರೇ ಪೆಟ್ರೋಲ್ ಹಾಕಿಸಿಕೊಟ್ಟಿದ್ದರಂತೆ.
ಜ್ಯೂಸ್ ಅಂಗಡಿಯವನ ಮೇಲೆ ಹಲ್ಲೆ
ಶ್ರೀರಂಗಪಟ್ಟಣದ ದಾಸರಗುಪ್ಪೆ ಬಳಿ ಕಬ್ಬಿನ ಹಾಲು ಕುಡಿದ ಹುಚ್ಚ ವೆಂಕಟ್ ಅಂಗಡಿಯವನಿಗೆ ದುಡ್ಡು ಕೊಡಲು ನಿರಾಕರಿಸಿದ್ದಾರೆ. ಕೊನೆಗೆ, ಜ್ಯೂಸ್ ಅಂಗಡಿಯವನ ಮೇಲೆ ಹಲ್ಲೆ ಸಹ ಮಾಡಿದ್ದಾರೆ. ಇದನ್ನು ನೋಡಿದ ಅಲ್ಲಿನ ಜನರು ಹುಚ್ಚ ವೆಂಕಟ್ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮತ್ತೆ ಸುದ್ದಿಗೆ ಬಂದ ಹುಚ್ಚಾ ವೆಂಕಟ್: ಈ ಬಾರಿ ಮಾಡಿದ್ದಾರೆ ಒಳ್ಳೆ ಕೆಲಸ
ಇಬ್ಬರ ಮೇಲೆ ಹಲ್ಲೆ ಸಹ ಮಾಡಿದ್ದಾರೆ
ಅಷ್ಟೆ ಅಲ್ಲದೆ ನಿನ್ನೆ ರಾತ್ರಿ ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರಂತೆ ಹುಚ್ಚ ವೆಂಕಟ್. ಹುಚ್ಚ ವೆಂಕಟ್ ಈ ರೀತಿಯ ರಂಪಾಟ ಇದು ಮೊದಲಲ್ಲ, ಮಡಿಕೇರಿಯಲ್ಲಿ ಹೀಗೆಯೇ ರಗಳೆ ಮಾಡಿ ಜನರ ಕೈಯಲ್ಲಿ ಪೆಟ್ಟು ತಿಂದಿದ್ದರು.
ರಚಿತಾ ರಾಮ್, ಪ್ರೇಮ್ ಗೆ ಪುಕ್ಕಟೆ ಸಲಹೆ: ಹುಚ್ಚ ವೆಂಕಟ್ ಗೆ ನೆಟ್ಟಿಗರ ಛೀಮಾರಿ.!