Don't Miss!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- News ಅರವಿಂದ್ ಕೇಜ್ರಿವಾಲ್ ಹತ್ಯೆ ಮಾಡಲು ಸಂಚು ನಡೆಯುತ್ತಿದೆ: ಎಎಪಿ ಗಂಭೀರ ಆರೋಪ
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚ ವೆಂಕಟ್ಗೆ ಹಿಗ್ಗಾ-ಮುಗ್ಗಾ ಥಳಿಸಿದ ಜನ
ಕೆಲವು ದಿನಗಳಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಹುಚ್ಚ ವೆಂಕಟ್ ಅಲ್ಲಿ ಭಾರಿ ರಂಪಾಟ ನಡೆಸಿದ್ದಾರೆ. ಮೊನ್ನೆಯಷ್ಟೆ ಹುಚ್ಚಾಟ ನಡೆಸಿ ಪೊಲೀಸರ ಕೈಯಿಂದ ಹೊರದಬ್ಬಿಸಿಕೊಂಡಿದ್ದ ಹುಚ್ಚ ವೆಂಕಟ್. ಈಗ ಮತ್ತೆ ಜನರಿಂದ ಹೊಡೆತ ತಿಂದಿದ್ದಾರೆ.
Recommended Video
ಕೆಲವು ದಿನಗಳಿಂದ ಶ್ರೀರಂಗಪಟ್ಟಣದಲ್ಲಿರುವ ಹುಚ್ಚ ವೆಂಕಟ್ ಇಂದು ಮಿತಿ ಮೀರಿ ವರ್ತಿಸಿದ್ದು, ಜನರೇ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಎರಡು ದಿನಗಳ ಹಿಂದೆ ಜನರು ಹುಚ್ಚ ವೆಂಕಟ್ ಗೆ ಊಟ-ತಿಂಡಿ ಕೊಟ್ಟು ಸಹಾಯ ಮಾಡಿದ್ದರು. ಆದರೆ ಹುಚ್ಚ ವೆಂಕಟ್ ಮಿತಿ ಮೀರಿ ವರ್ತಿಸಿರುವ ಕಾರಣ ಆತನನ್ನು ಥಳಿಸಲಾಗಿದೆ.
ಜನರೇ ಊಟ ಕೊಡಿಸಿದ್ದರು
ಮೊನ್ನೆ ರಂಗನಾಥ ಮೈದಾನ ಹಾಗೂ ದೇವಸ್ಥಾನದ ಬಳಿ ಅಲೆದಾಡುತ್ತಿದ್ದ ಹುಚ್ಚ ವೆಂಕಟ್ಗೆ ಜನರು ಊಟ ನೀರು ಕೊಟ್ಟಿದ್ದರು. ಹುಚ್ಚ ವೆಂಕಟ್ ಅತ್ತು ಕರೆದು ಹಣ ಕೇಳಿದ್ದಕ್ಕೆ ಕೆಲವರು ಹಣವನ್ನೂ ಕೊಟ್ಟಿದ್ದರು. ಜನರ ಉಪಕಾರ ಸ್ಮರಿಸಿ ಸುಮ್ಮನೆ ಹೋಗದೆ ರಂಪಾಟ ಮುಂದುವರೆಸಿದ್ದಾರೆ ಹುಚ್ಚ ವೆಂಕಟ್.
ಶ್ರೀರಂಗಪಟ್ಟಣದಲ್ಲಿ ಕಣ್ಣಿರು ಹಾಕುತ್ತಾ ಸಹಾಯಕ್ಕಾಗಿ ಅಂಗಲಾಚಿದ ಹುಚ್ಚ ವೆಂಕಟ್
ನಡು ರಸ್ತೆಯಲ್ಲಿ ಕುಳಿತ ಹುಚ್ಚ ವೆಂಕಟ್
ಪಟ್ಟಣದ ಕಾವೇರಿ ಸಂಗಮದ ಬಳಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹಣವಿಲ್ಲ. ಪೆಟ್ರೋಲ್ ಹಾಕಿಸಿಕೊಡದಿದ್ದರೆ ಇಲ್ಲಿಂದ ಹೋಗುವುದಿಲ್ಲ ಎಂದು ರಸ್ತೆಯಲ್ಲೇ ಕುಳಿತು ರಾದ್ಧಾಂತ ಮಾಡಿದ್ದ ಹುಚ್ಚ ವೆಂಕಟ್ ಕಾರಿಗೆ ಸ್ಥಳೀಯರೇ ಪೆಟ್ರೋಲ್ ಹಾಕಿಸಿಕೊಟ್ಟಿದ್ದರಂತೆ.
ಜ್ಯೂಸ್ ಅಂಗಡಿಯವನ ಮೇಲೆ ಹಲ್ಲೆ
ಶ್ರೀರಂಗಪಟ್ಟಣದ ದಾಸರಗುಪ್ಪೆ ಬಳಿ ಕಬ್ಬಿನ ಹಾಲು ಕುಡಿದ ಹುಚ್ಚ ವೆಂಕಟ್ ಅಂಗಡಿಯವನಿಗೆ ದುಡ್ಡು ಕೊಡಲು ನಿರಾಕರಿಸಿದ್ದಾರೆ. ಕೊನೆಗೆ, ಜ್ಯೂಸ್ ಅಂಗಡಿಯವನ ಮೇಲೆ ಹಲ್ಲೆ ಸಹ ಮಾಡಿದ್ದಾರೆ. ಇದನ್ನು ನೋಡಿದ ಅಲ್ಲಿನ ಜನರು ಹುಚ್ಚ ವೆಂಕಟ್ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮತ್ತೆ ಸುದ್ದಿಗೆ ಬಂದ ಹುಚ್ಚಾ ವೆಂಕಟ್: ಈ ಬಾರಿ ಮಾಡಿದ್ದಾರೆ ಒಳ್ಳೆ ಕೆಲಸ
ಇಬ್ಬರ ಮೇಲೆ ಹಲ್ಲೆ ಸಹ ಮಾಡಿದ್ದಾರೆ
ಅಷ್ಟೆ ಅಲ್ಲದೆ ನಿನ್ನೆ ರಾತ್ರಿ ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರಂತೆ ಹುಚ್ಚ ವೆಂಕಟ್. ಹುಚ್ಚ ವೆಂಕಟ್ ಈ ರೀತಿಯ ರಂಪಾಟ ಇದು ಮೊದಲಲ್ಲ, ಮಡಿಕೇರಿಯಲ್ಲಿ ಹೀಗೆಯೇ ರಗಳೆ ಮಾಡಿ ಜನರ ಕೈಯಲ್ಲಿ ಪೆಟ್ಟು ತಿಂದಿದ್ದರು.
ರಚಿತಾ ರಾಮ್, ಪ್ರೇಮ್ ಗೆ ಪುಕ್ಕಟೆ ಸಲಹೆ: ಹುಚ್ಚ ವೆಂಕಟ್ ಗೆ ನೆಟ್ಟಿಗರ ಛೀಮಾರಿ.!