Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂ, ಸಫಾರಿ, ವನ್ಯಜೀವಿ ಛಾಯಾಗ್ರಹಣಕ್ಕೆ ಹೋಗಬೇಡಿ ಎಂದ ನಟಿ ರಮ್ಯಾ
ನಟನೆ ಹಾಗೂ ರಾಜಕಾರಣ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ ನಟಿ ರಮ್ಯಾ. ಬಹು ಆಕಾಂಕ್ಷೆಗಳೊಂದಿಗೆ ರಾಜಕಾರಣಕ್ಕೆ ಕಾಲಿಟ್ಟಿದ್ದ ರಮ್ಯಾ ಅಲ್ಲಿ ಸಫಲವಾಗಲಿಲ್ಲ.
ಪ್ರಸ್ತುತ ಬಹುತೇಕ ತಟಸ್ಥವಾಗಿರುವ ನಟಿ ರಮ್ಯಾ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯಷ್ಟೆ ಕಾಣಿಸಿಕೊಳ್ಳುತ್ತಾರೆ.
ಇದೀಗ ಪ್ರಾಣಿಗಳ ಪರವಾಗಿ ಇನ್ಸ್ಟಾಗ್ರಾಂ ನಲ್ಲಿ ಉದ್ದನೆಯ ಪೋಸ್ಟ್ ಹಾಕಿರುವ ನಟಿ ರಮ್ಯಾ, 'ಪ್ರಾಣಿಗಳ ಮೇಲೆ ಪ್ರೀತಿ ಇದ್ದರೆ, ಜೂ, ಸಫಾರಿ, ವನ್ಯಜೀವಿ ಫೊಟೊಗ್ರಫಿಗಳಿಗೆ ಹೋಗಬೇಡಿ' ಎಂದು ಮನವಿ ಮಾಡಿದ್ದಾರೆ.
ನಿಮಗೆ ಪ್ರಾಣಿಗಳ ಮೇಲೆ ಪ್ರೀತಿ ಇದ್ದರೆ ಅವನ್ನು ಅವುಗಳ ಪಾಡಿಗೆ ಇರಲು ಬಿಡಿ. ನಿಮ್ಮ ಸಾಮಾಜಿಕ ಜಾಲತಾಣವನ್ನು ತುಂಬಿಸಲು ಘನ ಅರಣ್ಯದ ರೆಸಾರ್ಟ್ಗಳಿಗೆ ಹೋಗಿ ಸಫಾರಿ ಆಗಲಿ ವನ್ಯ ಜೀವಿಗಳ ಚಿತ್ರ ತೆಗೆಯಲು ಹೋಗಬೇಡಿ ಎಂದು ಹೇಳಿದ್ದಾರೆ ರಮ್ಯಾ.
ತಮಿಳುನಾಡು ಘಟನೆ ಬಗ್ಗೆ ರಮ್ಯಾ ಕಿಡಿ
ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ಕೆಲ ದುಷ್ಕರ್ಮಿಗಳು ಹೆಣ್ಣಾನೆಯೊಂದಕ್ಕೆ ಬೆಂಕಿ ಹಚ್ಚಿದ್ದರು. ಆ ಆನೆ ತೀವ್ರ ಹಿಂಸೆ ಅನುಭವಿಸಿ ಅಸುನೀಗಿತು. ಇದರ ಬೆನ್ನಲ್ಲೇ ನಟಿ ರಮ್ಯಾ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಹೆಣ್ಣಾನೆ ಸಾವಿಗೂ ಕಂಬನಿ ಮಿಡಿದಿದ್ದಾರೆ ನಟಿ ರಮ್ಯಾ.
ಮನುಷ್ಯರನ್ನು ನೋಡುವ ಆಸೆ ಪ್ರಾಣಿಗಳಿಗೆ ಇಲ್ಲ: ರಮ್ಯಾ
ಪ್ರಾಣಿಗಳಿಗೆ ಬದುಕುವ ಹಕ್ಕಿದೆ. ಅವುಗಳನ್ನು ಅವುಗಳ ಪಾಡಿಗೆ ಬದುಕಲು ಬಿಡಿ. ನಮಗೆ ಅವನ್ನು ನೋಡಲು ಆಸೆ ಇದೆಯೇ ವಿನಃ ಅವಕ್ಕೆ ನಮ್ಮನ್ನು ನೋಡಲು ಯಾವ ಆಸೆಯೂ ಇಲ್ಲ. ಅವುಗಳ ನಿಶ್ಚಿಂತೆಯಿಂದ ಬದುಕಲು ಬೇಡುತ್ತವೆ, ಅವನ್ನು ಹಾಗೆಯೇ ಬದುಕಲು ಬಿಡಿ' ಎಂದಿದ್ದಾರೆ ನಟಿ ರಮ್ಯಾ.
'ಹಣ ತಿನ್ನಲು ಸಾಧ್ಯವಿಲ್ಲವೆಂದು ಮನುಷ್ಯನಿಗೆ ಆಗ ಅರಿವಾಗುತ್ತದೆ'
'ಕೊನೆಯ ಮರವನ್ನು ಕಡಿದ ಬಳಿಕ, ಕೊನೆಯ ಮೀನನ್ನು ಹಿಡಿದ ಬಳಿಕ, ಪ್ರಕೃತಿಗೆ ವಿಷ ಹಾಕಿದ ಬಳಿಕ ಮನುಷ್ಯನಿಗೆ ಗೊತ್ತಾಗುತ್ತದೆ ಹಣವನ್ನು ತಿನ್ನಲು ಸಾಧ್ಯವಿಲ್ಲವೆಂದು ಎಂದಿರುವ ನಟಿ ರಮ್ಯಾ, ಸರ್ಕಾರವು ಕಾರ್ಪೊರೇಟ್ಗಳಿಗಾಗಿ ಪರಿಸರ ಕಾನೂನನ್ನು ಬದಲಾಯಿಸುತ್ತಿದೆ ಎಂದಿದ್ದಾರೆ ನಟಿ ರಮ್ಯಾ.
Recommended Video
ಸಸ್ಯಾಹಾರಿಯಾಗಿ ಬದಲಾದ ನಟಿ ರಮ್ಯಾ
ಪ್ರಾಣಿ ಪ್ರೇಮಿ ಆಗಿರುವ ನಟಿ ರಮ್ಯಾ ಸಸ್ಯಹಾರಿಯಾಗಿ ಬದಲಾಗಿದ್ದಾರೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಸ್ಯಹಾರಿ ಮಾತ್ರವೇ ಅಲ್ಲ 'ವೀಗನ್' ಸಹ ಆಗುವ ಪ್ರಯತ್ನದಲ್ಲಿದ್ದಾರಂತೆ ನಟಿ ರಮ್ಯಾ. ಡೈರಿ ಉತ್ಪನ್ನಗಳನ್ನು ಸಹ ಸೇವಿಸುವುದು ಬಿಡುವ ನಿರ್ಣಯ ಮಾಡಲಿದ್ದಾರಂತೆ.