twitter
    For Quick Alerts
    ALLOW NOTIFICATIONS  
    For Daily Alerts

    ರಾಕಿಂಗ್ ಸ್ಟಾರ್ ಹತ್ಯೆಗೆ ಸಂಚು ಅನ್ನೋದು ಸುಳ್ಳು

    By Pavithra
    |

    Recommended Video

    ಯಶ್ ಹತ್ಯೆಗೆ ಸಂಚು ಮಾಡಲಾಗಿತ್ತಾ...?? | Filmibeat kannada

    ಕುಖ್ಯಾತ ರೌಡಿ ಸೈಕಲ್ ರವಿಗೂ ಸ್ಯಾಂಡಲ್ ವುಡ್ ಗೂ ಸಂಬಂಧವಿದೆ ಎನ್ನುವ ವದಂತಿಗಳು ಕೆಲವು ದಿನಗಳಿಂದ ಕೇಳಿಬರುತ್ತಿವೆ. ಅದಷ್ಟೇ ಅಲ್ಲದೆ ರಾಕಿಂಗ್ ಸ್ಟಾರ್ ನಟ ಯಶ್ ಹತ್ಯೆಗೆ ಎರಡು ವರ್ಷಗಳ ಹಿಂದೆಯೇ ಸಂಚು ನಡೆದಿತ್ತು ಎನ್ನುವ ಸುದ್ದಿ ಜೋರಾಗಿದೆ. ಆದರೆ ಇವೆಲ್ಲವೂ ಸುಳ್ಳು ವದಂತಿ ಎನ್ನುವುದನ್ನು ಹಿರಿಯ ಪೋಲೀಸ್ ಅಧಿಕಾರಿ ಸತೀಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

    ಯಶ್ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವ ಸುದ್ದಿ ಆಗುತ್ತಿದ್ದಂತೆ ರಾಕಿಂಗ್ ಸ್ಟಾರ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಯಾಕೆಂದರೆ ಎರಡು ವರೆ ವರ್ಷದ ಹಿಂದೆಯೂ ಯಶ್ ಅವರ ಮೇಲೆ ಹಲ್ಲೆ ಆಗಿದೆ ಎನ್ನುವ ಸುದ್ದಿಗಳು ಕೇಳಿ ಬಂದಿತ್ತು.

    ಈಗ ಆ ಹಲ್ಲೆ ವಿಚಾರಕ್ಕೂ, ಹತ್ಯೆಗೆ ಸಂಚು ಸುದ್ದಿಯನ್ನು ತಳುಕು ಹಾಕಿ ಸುದ್ದಿ ಹರಡಲಾಗಿತ್ತು. ಇದೇ ವಿಚಾರವಾಗಿ ರಾಕಿಂಗ್ ಸ್ಟಾರ್ ಪೋಲೀಸರಿಗೆ ದೂರು ಕೊಟ್ಟಿದ್ದಾರೆ ಎನ್ನುವ ಸುದ್ದಿಯೂ ಕೇಳಿ ಬಂದಿತ್ತು ಆದರೆ ಯಶ್ ಆ ವೇಳೆ ಮಾತನಾಡಿದ್ದು ಕಲ್ಲು ತೂರಾಟದ ಬಗ್ಗೆ ಅಷ್ಟೇ ಎನ್ನುವುದು ಸ್ಪಷ್ಟವಾಗಿದೆ.

    Police officer Satish Kumar has clarified that, there was no plan to kill Yash

    ಇನ್ನು ಈ ವದಂತಿಗೆ ಹಿರಿಯ ಪೋಲೀಸ್ ಅಧಿಕಾರಿಗಳು ತೆರೆ ಎಳೆದಿದ್ದಾರೆ. ಯಶ್ ಹತ್ಯೆ ಬಗ್ಗೆ ಸುದ್ದಿ ಸುಳ್ಳು ಆ ರೀತಿ ಏನಾದರೂ ಸುದ್ದಿ ಇದ್ದಲ್ಲಿ ನಾವೇ ತಿಳಿಸುತ್ತೇವೆ. ಯಾರೋ ಸುಮ್ಮನೆ ಸುದ್ದಿ ಹಬ್ಬಿಸಿದ್ದಾರೆ ಎಂದಿದ್ದಾರೆ.

    English summary
    Senior Police officer Satish Kumar has clarified that, there was no plan to kill Kannada actor Yash. Earlier there was news that, Cycle Ravi and his gang had allegedly plotting to murder Yash.
    Thursday, July 12, 2018, 13:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X