twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ಸಿನಿಮಾಕ್ಕೆ ಸೌಂಡಿಲ್ಲ: ಪ್ರೇಕ್ಷಕರಿಂದ ಚಿತ್ರಮಂದಿರದ ವಿರುದ್ಧ ಪ್ರತಿಭಟನೆ

    |

    'ಯುವರತ್ನ' ಸಿನಿಮಾ ಬಿಡುಗಡೆ ಆಗಿದ್ದ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಪ್ರತಿಭಟನೆ ಮಾಡಿದ್ದಾರೆ.

    Recommended Video

    ಥಿಯೇಟರ್ ಒಳಗೆ ಪ್ರತಿಭಟನೆ ಮಾಡಿದ ಅಪ್ಪು ಅಭಿಮಾನಿಗಳು | Filmibeat Kannada

    ಚಿತ್ರಮಂದಿರದಲ್ಲಿ ಧ್ವನಿ ಗುಣಮಟ್ಟ ಸರಿಯಿಲ್ಲ, ಸಿನಿಮಾದ ಸಂಭಾಷಣೆಗಳು ಸಹ ಕೇಳದಷ್ಟು ಕಡಿಮೆ ಸೌಂಡ್ ನೀಡಲಾಗಿದೆ ಎಂದು ಪ್ರೇಕ್ಷಕರು ಆಕ್ಷೇಪಿಸಿದ್ದಾರೆ. ಜೊತೆಗೆ ತಮ್ಮ ಸಿನಿಮಾ ಟಿಕೆಟ್‌ ಹಣವನ್ನು ಹಿಂದಿರುಗಿಸುವಂತೆ ಸಹ ಮನವಿ ಮಾಡಿದ್ದಾರೆ.

    ಆದರೆ, ಟಿಕೆಟ್ ಹಣ ಹಿಂದಿರುಗಿಸಲು ಚಿತ್ರಮಂದಿರ ಆಡಳಿತ ಮಂಡಳಿಯವರು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಚಿತ್ರಮಂದಿರದ ಒಳಗೆಯೇ ಚಿತ್ರಮಂದಿರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದ್ದಾರೆ. ಕೆಲವರು ಸಿನಿಮಾ ನೋಡದೇ ವಾಪಸ್ ಮರಳಿದ್ದಾರೆ.

    Poor Sound Quality: Viewers Protest Against Urvasi Movie Theater In Bengaluru

    ಪ್ರೇಕ್ಷಕರು ಚಿತ್ರಮಂದಿರದ ಒಳಗೆ ಪ್ರತಿಭಟನೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 'ಇನ್ನು ಮುಂದೆ ಊರ್ವಶಿ ಚಿತ್ರಮಂದಿರದಲ್ಲಿ ಟಿಕೆಟ್ ಬುಕ್ ಮಾಡಬೇಡಿ' ಎಂಬ ಒಕ್ಕಣೆಯೊಂದಿಗೆ ವಿಡಿಯೋಗಳು ಹರಿದಾಡುತ್ತಿವೆ.

    ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಂಚಿಕೊಂಡಿರುವ ಅಭಿಪ್ರಾಯದ ಪ್ರಕಾರ, ಬೆಳಿಗ್ಗಿನ ಶೋಗೆ ಧ್ವನಿ ಗುಣಮಟ್ಟ ಚೆನ್ನಾಗಿಯೇ ಇತ್ತಂತೆ ಆದರೆ ಎರಡನೇ ಶೋ ನಿಂದ ಆಚೆಗೆ ಸೌಂಡ್ ಅನ್ನು ಕಡಿಮೆ ಮಾಡಲಾಗಿದೆಯಂತೆ.

    ಪ್ರತಿಭಟನೆ ವಿಷಯ ತಿಳಿದು ಪೊಲೀಸರು, ಮಾಧ್ಯಮಗಳವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದ್ದಾರೆ.

    English summary
    Movie viewers complaint about poor sound quality in Bengaluru's Urvasi theater where Yuvarathna movie released today. Viewers protest against theater.
    Friday, April 2, 2021, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X