ಪಿ ಆರ್ ರಾಮದಾಸ ನಾಯ್ಡು ಅವರಿಗೆ ರಾಜ್ಯ ಪ್ರಶಸ್ತಿ

By Rajendra

ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಪಿ.ಆರ್.ರಾಮದಾಸ ನಾಯ್ಡು ಅವರದು ಚಿರಪರಿಚಿತ ಹೆಸರು. ಚಿತ್ರ ನಿರ್ದೇಶಕರಾಗಿ ಈಗಾಗಲೇ ಅವರು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ.

ಈಗ 2012ರ ಸಾಲಿನ ಕರ್ನಾಟಕ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಅವರು ರಚಿಸಿರುವ 'ವಿಶ್ವ ಸಿನಿಮಾ - ಮಾತು ಬರುವ ತನಕ' ಕೃತಿಗೆ ದೊರಕಿದೆ. ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ವಾರ್ತಾ ಇಲಾಖೆಯ ವಿಶುಕುಮಾರ್ ಅವರು ಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ಪಿ.ರಾಮದಾಸ ನಾಯ್ಡು ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

PR Ramadas Naidu
ಪಿ.ಆರ್.ರಾಮದಾಸ ನಾಯ್ಡು ಅವರು ಪ್ರವಾಹ, ಮುಸ್ಸಂಜೆ, ಮೊಗ್ಗಿನ ಜಡೆ, ಬೇಲಿ ಮತ್ತು ಹೊಲ, ಹೆಜ್ಜೆಗಳು ಚಿತ್ರಗಳನ್ನು ನಿರ್ದೇಶನ ಮಾಡಿ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಪಡೆದಿರುವರು. ಇವರು ಟಿವಿ ಕ್ಷೇತ್ರದಲ್ಲೂ ನಾಲ್ಕು ದಶಕಗಳ ಕಾಲದಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

ವಿಶ್ವ ಸಿನಿಮಾ ಅಧ್ಯಯನ ಕೇಂದ್ರದ ಸಂಚಾಲಕರೂ ಆಗಿರುವ ರಾಮದಾಸ ನಾಯ್ಡು ಅವರು ವಿಶ್ವ ಸಿನಿಮಾ ಸಮಗ್ರ ಅಧ್ಯಯನ ಮಾಲಿಕೆಯನ್ನು ಹೊರತಂದಿದ್ದಾರೆ. ಫಿಲ್ಮಿಬೀಟ್ ಕನ್ನಡದ ವತಿಯಿಂದ ಅವರಿಗೆ ಅಭಿನಂದನೆಗಳು. (ಫಿಲ್ಮಿಬೀಟ್ ಕನ್ನಡ)

More from Filmibeat

English summary
A state and national award winning director P Ramadas Naidu bags one more state award for his book 'Vishwa Cinema (Samagra Adhyayana Male) Maatu Baruva Tanaka' (a book on the silent era of cinema). Naidu is in the film and television media in the last four decades. Mr. Naidu worked with Kashinath, actor and director, who set a trend in Kannada cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X