Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಕಂಡ್ರೆ ಪ್ರಜ್ವಲ್ ದೇವರಾಜ್ ಗಿದೆ ಅಸೂಯೆ, ಹೊಟ್ಟೆ ಕಿಚ್ಚು.!
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಡ್ರೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೆ ಅಸೂಯೆ ಇದೆ. ಹೀಗಂತ ನಾವು ಹೇಳ್ತಿಲ್ಲ. ಖುದ್ದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.
''ದರ್ಶನ್ ಮತ್ತು ನನ್ನ ತಂದೆ (ದೇವರಾಜ್) ನಡುವೆ ಒಳ್ಳೆ ಒಡನಾಟ ಇದೆ. ದರ್ಶನ್ ಹಾಗೂ ನನ್ನ ತಂದೆಯ ಸ್ನೇಹ ಕಂಡರೆ ನನಗೆ ಕೆಲವೊಮ್ಮೆ ಅಸೂಯೆ ಆಗುತ್ತೆ. ದರ್ಶನ್ ನಮ್ಮ ಮನೆಯ ಸದಸ್ಯರೇ ಆಗಿಹೋಗಿದ್ದಾರೆ. ಅಪ್ಪನ ಜೊತೆಗಿನ ದರ್ಶನ್ ಆತ್ಮೀಯತೆ ನನಗೆ ಹೊಟ್ಟೆಕಿಚ್ಚು ತರಿಸುತ್ತದೆ'' ಅಂತ ನಗುನಗುತ್ತಲೇ ಪ್ರಜ್ವಲ್ ದೇವರಾಜ್ ಹೇಳಿದರು.
ಪ್ರಜ್ವಲ್ ದೇವರಾಜ್ ಹೀಗೆ ಹೇಳುವಾಗ ಅಕ್ಕ-ಪಕ್ಕದಲ್ಲಿ ದೇವರಾಜ್ ಮತ್ತು ದರ್ಶನ್ ಕೂಡ ನಗುತ್ತಿದ್ದರು.
ಅಂದು ಅಪ್ಪ ಕೆಲಸ ಮಾಡಿದ ಜಾಗದಲ್ಲೇ ಇಂದು ಮಗನ ಸಿನಿಮಾ ಚಿತ್ರೀಕರಣ
ಅಸಲಿಗೆ, ಪ್ರಜ್ವಲ್ ದೇವರಾಜ್ ಇದನ್ನೆಲ್ಲ ಹೇಳಿದ್ದು ಇತ್ತೀಚೆಗಷ್ಟೆ ನಡೆದ 'ಜಂಟಲ್ ಮನ್' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ. ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ದರ್ಶನ್ ಹಾಗೂ ತಮ್ಮ ತಂದೆ ದೇವರಾಜ್ ಜೊತೆಗಿನ ಸ್ನೇಹದ ಕುರಿತು ಪ್ರಜ್ವಲ್ ದೇವರಾಜ್ ಖುಷಿಯಿಂದ ಮಾತನಾಡಿದರು.
'ಇದು ನಿಜವಾಗಲೂ ಅಸಹ್ಯ': ಜಂಟಲ್ ಮ್ಯಾನ್ ಕಾರ್ಯಕ್ರಮದಲ್ಲಿ ಡಿ-ಬಾಸ್ ಬೇಸರ
ಅಂದ್ಹಾಗೆ, 'ಜಂಟಲ್ ಮನ್' ಚಿತ್ರ ಇಂದು ಬಿಡುಗಡೆ ಆಗಿದೆ. ಸ್ಲೀಪಿಂಗ್ ಸಿಂಡ್ರೋಮ್ ರೋಗದಿಂದ ಬಳಲುತ್ತಿರುವ ನಾಯಕನ ಸುತ್ತ 'ಜಂಟಲ್ ಮನ್' ಕಥೆ ಹೆಣೆಯಲಾಗಿದೆ. ಈ ಚಿತ್ರಕ್ಕೆ ಗುರು ದೇಶಪಾಂಡೆ ಬಂಡವಾಳ ಹಾಕಿದ್ದರೆ, ಜಡೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.