Don't Miss!
- News ನೇಹಾ ಕೊಲೆ ಪ್ರಕರಣ: ಆರೋಪಿಯನ್ನ ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪ್ರಕರಣ'ದಲ್ಲಿದೆ ಸಾಮಾಜಿಕ ಜಾಲತಾಣದ ಅಡ್ಡ ಪರಿಣಾಮ
ಈಗೀಗ ಸೋಷಿಯಲ್ ಮಿಡಿಯಾ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ. ಆದರೆ, ಸಾಮಾಜಿಕ ಜಾಲತಾಣದಿಂದ ಎಷ್ಟು ಒಳ್ಳೆಯದು ಇದೆಯೋ ಅಷ್ಟೇ ಕೆಟ್ಟದ್ದೂ ಇದೆ. ಆ ರೀತಿಯ ಘಟನೆಗಳು ನಮ್ಮ ಕಣ್ಣು ಮುಂದೆ ಕೂಡ ನಡೆದಿವೆ. ಇಂತಹ ಘಟನೆಗಳ ಆಧಾರದ ಮೇಲೆ ಒಂದು ಕಿರುಚಿತ್ರ ಇದೀಗ ತಯಾರಾಗಿದೆ. ಅದೇ 'ಪ್ರಕರಣ'.
'ಪ್ರಕರಣ' ಕಿರು ಚಿತ್ರಕ್ಕೆ ಟಿಕೆ ರಾಘವೇಂದ್ರ ಕಥೆ ಬರೆದು ನಿರ್ದೇಶಕ ಮಾಡಿದ್ದಾರೆ. ಕಲ್ಪತರು ಸ್ಟೂಡಿಯೋದ ಮೂಲಕ ಈ ಕಿರುಚಿತ್ರ ಹೊರಹೊಮ್ಮಿದೆ. ರಂಗಭೂಮಿ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ವನಿತಾ ಜೈನ್ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಈ ಕಿರುಚಿತ್ರ ಐದು ಪ್ರಮುಖ ಪಾತ್ರಗಳನ್ನು ಹೊಂದಿದ್ದು, ಕಿರಣ್ ಭಟ್, ಅಕ್ಷತ ಬಡೀಗೇರ ರಂಜಿತ್ ಗೌಡ, ಆಕಾಶ್ ಕಮಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಹೇಮಂತ್ ಚಕ್ರವರ್ತಿ ಛಾಯಾಗ್ರಹಣ ಮಾಡಿದ್ದಾರೆ. ರಾಕಿಸೋನು ಸಂಗೀತ ನೀಡಿದ್ದಾರೆ. ಅಂದಹಾಗೆ, ಇಂದು ಬೆಂಗಳೂರಿನ ಸೌಂದರ್ಯ ಕಾಲೇಜಿನಲ್ಲಿ 'ಪ್ರಕರಣ' ಕಿರುಚಿತ್ರದ ಮೊದಲ ಪ್ರದರ್ಶನ ನಡೆದಿದೆ. ಈಗಾಗಲೇ ಈ ಕಿರುಚಿತ್ರದ ಟೀಸರ್ ಗಳ ಎಲ್ಲರ ಗಮನ ಸೆಳೆದಿದೆ.