'ಪ್ರಕರಣ'ದಲ್ಲಿದೆ ಸಾಮಾಜಿಕ ಜಾಲತಾಣದ ಅಡ್ಡ ಪರಿಣಾಮ
ಈಗೀಗ ಸೋಷಿಯಲ್ ಮಿಡಿಯಾ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ. ಆದರೆ, ಸಾಮಾಜಿಕ ಜಾಲತಾಣದಿಂದ ಎಷ್ಟು ಒಳ್ಳೆಯದು ಇದೆಯೋ ಅಷ್ಟೇ ಕೆಟ್ಟದ್ದೂ ಇದೆ. ಆ ರೀತಿಯ ಘಟನೆಗಳು ನಮ್ಮ ಕಣ್ಣು ಮುಂದೆ ಕೂಡ ನಡೆದಿವೆ. ಇಂತಹ ಘಟನೆಗಳ ಆಧಾರದ ಮೇಲೆ ಒಂದು ಕಿರುಚಿತ್ರ ಇದೀಗ ತಯಾರಾಗಿದೆ. ಅದೇ 'ಪ್ರಕರಣ'.
'ಪ್ರಕರಣ' ಕಿರು ಚಿತ್ರಕ್ಕೆ ಟಿಕೆ ರಾಘವೇಂದ್ರ ಕಥೆ ಬರೆದು ನಿರ್ದೇಶಕ ಮಾಡಿದ್ದಾರೆ. ಕಲ್ಪತರು ಸ್ಟೂಡಿಯೋದ ಮೂಲಕ ಈ ಕಿರುಚಿತ್ರ ಹೊರಹೊಮ್ಮಿದೆ. ರಂಗಭೂಮಿ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ವನಿತಾ ಜೈನ್ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಈ ಕಿರುಚಿತ್ರ ಐದು ಪ್ರಮುಖ ಪಾತ್ರಗಳನ್ನು ಹೊಂದಿದ್ದು, ಕಿರಣ್ ಭಟ್, ಅಕ್ಷತ ಬಡೀಗೇರ ರಂಜಿತ್ ಗೌಡ, ಆಕಾಶ್ ಕಮಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಹೇಮಂತ್ ಚಕ್ರವರ್ತಿ ಛಾಯಾಗ್ರಹಣ ಮಾಡಿದ್ದಾರೆ. ರಾಕಿಸೋನು ಸಂಗೀತ ನೀಡಿದ್ದಾರೆ. ಅಂದಹಾಗೆ, ಇಂದು ಬೆಂಗಳೂರಿನ ಸೌಂದರ್ಯ ಕಾಲೇಜಿನಲ್ಲಿ 'ಪ್ರಕರಣ' ಕಿರುಚಿತ್ರದ ಮೊದಲ ಪ್ರದರ್ಶನ ನಡೆದಿದೆ. ಈಗಾಗಲೇ ಈ ಕಿರುಚಿತ್ರದ ಟೀಸರ್ ಗಳ ಎಲ್ಲರ ಗಮನ ಸೆಳೆದಿದೆ.


Click it and Unblock the Notifications











