Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮೀಟೂ' ಅಭಿಯಾನದ ಬಗ್ಗೆ ಪ್ರಕಾಶ್ ರೈ ಮಾಡಿರುವ ಟ್ವೀಟ್ ಇದು.!
Recommended Video
ಹಾಲಿವುಡ್ ನಲ್ಲಿ ಶುರುವಾಗಿದ್ದ 'ಮೀಟೂ' (#MeToo) ಅಭಿಯಾನ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದ್ಯಾವಾಗ ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ನಟಿ ತನುಶ್ರೀ ದತ್ತಾ ಸಿಡಿದೆದ್ದರೋ, ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ನಟಿಯರು ಒಬ್ಬೊಬ್ಬರಾಗಿ ದನಿಯೆತ್ತಲು ಆರಂಭಿಸಿದ್ದಾರೆ.
ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೆ, ಕೆಲಸ ಮಾಡುವ ಸ್ಥಳಗಳಲ್ಲಿ 'ಕಹಿ' ಅನುಭವ ಎದುರಿಸಿದ ಹೆಣ್ಮಕ್ಕಳು ಕೂಡ 'ಮೀಟೂ' ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತಿದ್ದಾರೆ.
ಅಲೋಕ್ ನಾಥ್ ಮೇಲೆ ಮತ್ತೊಂದು ಬಾಂಬ್ : ಅತ್ಯಾಚಾರಕ್ಕೆ ಪ್ರಯತ್ನ ಎಂದು ನಟಿ ಆರೋಪ
ರಾಷ್ಟ್ರಾದ್ಯಂತ 'ಮೀಟೂ ಅಭಿಯಾನ' ಸದ್ದು-ಸುದ್ದಿ ಮಾಡುತ್ತಿರುವಾಗಲೇ, ನಟ ಪ್ರಕಾಶ್ ರೈ ಒಂದು ಟ್ವೀಟ್ ಮಾಡಿದ್ದಾರೆ. 'ಮೀಟೂ ಅಭಿಯಾನ'ಕ್ಕೆ ತಮ್ಮ ಸಪೋರ್ಟ್ ಇದೆ ಎಂದು ಟ್ವೀಟ್ ಮೂಲಕ ಪ್ರಕಾಶ್ ರೈ ತಿಳಿಸಿದ್ದಾರೆ.
'ತಬ್ಬಿಕೊಂಡು, ಮುತ್ತುಕೊಡಲು ಪ್ರಯತ್ನ ಮಾಡಿದ್ದು ನಿಜ', ಆದರೆ.. : ರಘು ದೀಕ್ಷಿತ್ ನೇರ ಸ್ಪಷ್ಟನೆ
''ಮೀಟೂ... ಇದು ಜೀವನದ ಎಲ್ಲಾ ಹಂತಗಳಲ್ಲೂ ಒಂಥರಾ ಸಾಂಕ್ರಾಮಿಕ... ನಮ್ಮ ಸಮಾಜದಲ್ಲಿ ಇದನ್ನ ಮಾಡುವುದು ಅವಶ್ಯಕ. ಇದರಿಂದ ಮಹಿಳೆಯರಿಗೆ ಹೆಚ್ಚು ಶಕ್ತಿ ಸಿಕ್ಕಂತಾಗಿದೆ. ಹೊರಬಂದು ಎಲ್ಲವನ್ನೂ ಬಹಿರಂಗ ಪಡಿಸಿ, ನಿಮ್ಮಿಂದು ಇದು ಸಾಧ್ಯ'' ಎಂದು ಮಹಿಳೆಯರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
#MeToo ...this is an EPIDEMIC in all walks of life....to be DONE WITH in our SOCIETY...more power to you WOMAN ... YOU CAN DO IT ..come out and give it back.....continue #justasking ...
— Prakash Raj (@prakashraaj) October 10, 2018
ಮೀಟೂ ಅಭಿಯಾನದಿಂದಾಗಿ ದೇಶದಲ್ಲಿ ದಿನಕ್ಕೊಂದು ಪ್ರಕರಣ ಬಟಾ ಬಯಲಾಗುತ್ತಿದೆ. ಖ್ಯಾತನಾಮರ ಮುಖವಾಡ ಕಳಚಿ ಬೀಳುತ್ತಿದೆ.