Don't Miss!
- Sports Virat Kohli vs Gautam Gambhir: ವಿರಾಟ್, ಗೌತಮ್ ನಡುವೆ ಬಿರುಕು ಹುಟ್ಟಲು ಕಾರವೇನು? ಇಲ್ಲಿದೆ ಮಾಹಿತಿ
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಗಭೂಮಿ, ಸಿನಿಮಾ ಕಲಾವಿದರ ಸಂಗಮ ಒಗ್ಗರಣೆ
ರಂಗಭೂಮಿ ಹಾಗೂ ಸಿನಿಮಾ ನಟರನ್ನು ಸೇರಿಕೊಂಡು ಮಾಡಿದ ಸಿನಿಮಾ ಇದು. ಅದಿಷ್ಟೇ ಅಲ್ಲದೆ ಬೇರೆ ಭಾಷೆಯ ಕಲಾವಿದರನ್ನೂ ಇಲ್ಲಿಗೆ ಕರೆದುಕೊಂಡು ಬಂದದ್ದು ಈ ಚಿತ್ರದ ವಿಶೇಷಗಳಲ್ಲಿ ಒಂದು ಎನ್ನುತ್ತಾರೆ ರೈ. ಚಿತ್ರದ ಬಗೆಗಿನ ವಿವರಗಳನ್ನು ಅವರ ಮಾತಿನಲ್ಲೇ ಕೇಳಿ...
ಈ ಚಿತ್ರದ ಕಥೆ ಇಷ್ಟವಾಯಿತು, ಅವರು ಹೇಳಿರುವ ವಿಚಾರಗಳು ಮನಸ್ಸಿಗೆ ಹಿಡಿಸಿದವು. ಇದನ್ನು ನಮ್ಮ ಭಾಷೆಗೆ ತರುವುದು ಹೇಗೆ ಎಂದು ಯೋಚಿಸಿದಾಗ. ಕೆಲವೊಂದು ಹೊಸ ಪಾತ್ರಗಳು ಸೃಷ್ಟಿಯಾದವು. ಕೆಲವು ಹಳೆ ಪಾತ್ರಗಳನ್ನು ತೆಗೆಯಬೇಕಾಯಿತು. [ಪ್ರಕಾಶ್ ರೈ ಅಭಿನಯದ ಸೂಪರ್ ಹಿಟ್ ಕನ್ನಡ ಚಿತ್ರಗಳು]
ನಮ್ಮ
ಬಿ
ಸುರೇಶ್
ಹಾಗೂ
ಜಯಂತ್
ಕಾಯ್ಕಿಣಿ
ಜೊತೆಗಿದ್ದರು,
ಇವರೊಂದಿಗೆ
ಮಾತನಾಡುತ್ತಾ
ಮಾತನಾಡುತ್ತಾ
ಅದು
ಬೇರೆಯ
ರೂಪ
ಪಡೆದುಕೊಳ್ತಾ
ಹೋಯ್ತು.
ಆ
ಪ್ರಕಾರ
ಒಗ್ಗರಣೆ
ಸಿನಿಮಾ
ಭಿನ್ನ
ರೂಪ
ಪಡೆದುಕೊಂಡಿದೆ.
ಚಿತ್ರ
ನೋಡಿದರೆ
ಎರಡು
ಗಂಟೆಗಳ
ಕಾಲ
ಒಂದು
ಒಳ್ಳೆಯ
ಊಟ
ಮಾಡಿದ
ಅನುಭವ
ನಿಮಗಾಗುತ್ತದೆ.
ಪ್ರೀತಿ, ಪ್ರೇಮದ ಬಗ್ಗೆ ಅಷ್ಟಾಗಿ ಇಷ್ಟವಿಲ್ಲದ ಹೆಣ್ಣುಮಗಳೊಬ್ಬಳು (ಸ್ನೇಹಾ) ಹೇಗೆ ಪ್ರೀತಿಗೆ ಮನಸೋಲುತ್ತಾಳೆ ಎಂಬುದೇ ಕಥೆ. ಚಿತ್ರದಲ್ಲಿ ನನ್ನ ಪಾತ್ರ ಕಾಳಿದಾಸ ಎಂದು. ಸುಮಾರು 45 ವರ್ಷ ವಯಸ್ಸಿನ ಒಬ್ಬ ಪುರಾತತ್ವ ವಸ್ತು ಸಂಶೋಧಕ, ಅವನಿಗೂ ಅಷ್ಟೇ ಪ್ರೀತಿ ಪ್ರೇಮದ ಬಗ್ಗೆ ದೊಡ್ಡ ಆಸಕ್ತಿ ಇರೋದಿಲ್ಲ. ಆದರೆ ಊಟದ ವಿಚಾರದಲ್ಲಿ ತುಂಬಾ ಪ್ರೀತಿ ಇರುವವನು. ಎಲ್ಲಿದ್ದರೂ, ಹೇಗಿದ್ದರೂ ಮೊದಲು ಊಟಕ್ಕೆ ಪ್ರಾಮುಖ್ಯತೆ ಕೊಡುವವನು.
ಒಂದು ಸಲ ಹೆಣ್ಣು ನೋಡಲು ಹೋಗಿ ಅಲ್ಲಿದ್ದ ಅಡುಗೆಭಟ್ಟ ಚೆನ್ನಾಗಿ ಅಡುಗೆ ಮಾಡಿದ ಎಂದು ಅವನನ್ನು ಮನೆಗೆ ಕರೆದುಕೊಂಡು ಬಂದಿರುತ್ತಾನೆ. ಆ ರೀತಿಯ ಒಂದು ವಿನೋದಭರಿತ ಪಾತ್ರ ನನ್ನದು. ಈ ರೀತಿಯ ಕಾಳಿದಾಸನ ಜೀವನದಲ್ಲಿ ಒಬ್ಬ ಹುಡುಗಿ ಹೇಗೆ ಬರುತ್ತಾಳೆ? ಒಂದು ರುಚಿರುಚಿಯಾದ ಅಡುಗೆ ಇವರಿಬ್ಬರನ್ನು ಹೇಗೆ ಒಂದು ಮಾಡುತ್ತದೆ ಎಂಬುದೇ ಚಿತ್ರದ ಕಥಾಹಂದರ. ತೆರೆಯ ಮೇಲೆ ಇದನ್ನು ನೋಡುವುದೇ ಒಂದು ಸೊಗಸಾದ ಅನುಭವ.
(ಪ್ರಕಾಶ್
ರೈ
ಹೊಸರುಚಿ
'ಒಗ್ಗರಣೆ'
ಟೇಸ್ಟ್
ಮಾಡಿ)